ಪ್ರಿಯಕರನಿಗೇ ಆ್ಯಸಿಡ್‌ ಎರಚಿದ ಪ್ರಿಯತಮೆ!


Team Udayavani, Jan 18, 2017, 3:45 AM IST

acid.jpg

ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಹೆಣ್ಣುಮಕ್ಕಳ ಮೇಲೆ ಆ್ಯಸಿಡ್‌ ದಾಳಿ ನಡೆಸಿದ ಪ್ರಕರಣಗಳು ಆಗಾಗ್ಗೆ ವರದಿಯಾಗಿ, ಭಾರೀ ಸುದ್ದಿಯಾಗುತ್ತದೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಪ್ರಿಯತಮನ ಮೇಲೆ ಯುವತಿಯೊಬ್ಬಳು ಆ್ಯಸಿಡ್‌ ಎರಚಿದ್ದಾಳೆ.

ತನ್ನನ್ನು ಮದುವೆಯಾಗಲು ನಿರಾಕರಿಸಿದ ಎಂಬ ಕಾರಣಕ್ಕೆ ಶ್ರೀರಾಂಪುರದ ಪ್ರಕಾಶನಗರ ನಿವಾಸಿ ಜಯಕುಮಾರ್‌ (32) ಎಂಬಾತನ ಮೇಲೆ ಸೋಮವಾರ ರಾತ್ರಿ ಲಿಡಿಯಾ ಎಪ್ಸಿಬಾ ಎಂಬಾಕೆ ತನ್ನ ಮಾವನ ಮಗನೊಂದಿಗೆ ಸೇರಿ ಆ್ಯಸಿಡ್‌ ದಾಳಿ ಮಾಡಿದ್ದಾಳೆ. ಇದರಿಂದ ಗಾಯಗೊಂಡಿರುವ ಜಯಕುಮಾರ್‌ ವಿವಿ ಪುರದ ಖಾಸಗಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃತ್ಯಕ್ಕೆ ಸಂಬಂಧಿಸಿದಂತೆ ಲಿಡಿಯಾ ಎಪ್ಸಿಬಾ (28) ಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಸಹಕರಿಸಿದ ಆಕೆಯ ಮಾವನ ಮಗ ಸುನೀಲ್‌ (18) ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾಗುವುದಾಗಿ ಹೇಳಿ ಜಯಕುಮಾರ್‌ ತನ್ನನ್ನು ವಂಚಿಸಿದ್ದಾನೆ ಎಂದು ಆರೋಪಿಸಿ ಲಿಡಿಯಾ 6 ತಿಂಗಳ ಹಿಂದೆ ಶ್ರೀರಾಂಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಇಬ್ಬರನ್ನೂ ಕರೆಸಿ ಬುದ್ಧಿಮಾತು ಹೇಳಿ ಕಳುಹಿಸಿದ್ದರು. ಇದಾದ ಬಳಿಕ ಮತ್ತೆ ಜಯಕುಮಾರ್‌ ಹಿಂದೆ ಬಿದ್ದಿದ್ದ ಲಿಡಿಯಾ, ಆ್ಯಸಿಡ್‌ ಎರಚಿ ಆತನನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 ಏನಿದು ಘಟನೆ?: ಪ್ರಕಾಶ್‌ನಗರದ ಎರಡನೇ ಮುಖ್ಯರಸ್ತೆಯಲ್ಲಿ ತನ್ನ ತಾಯಿ ಜತೆ ನೆಲೆಸಿರುವ ಜಯಕುಮಾರ್‌, ಅದೇ ಪ್ರದೇಶದಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದ. 7 ವರ್ಷಗಳ ಹಿಂದೆ ಅದೇ ಪ್ರದೇಶದಲ್ಲಿ ನೆಲೆಸಿರುವ, ಅಲಿ ಅಸYರ್‌ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿರುವ ಲಿಡಿಯಾ ಪರಿಚಯವಾಗಿತ್ತು. ಅದು ಕ್ರಮೇಣ ಪ್ರೇಮಕ್ಕೆ ತಿರುಗಿತ್ತು. ಯಾವುದೋ ಕಾರಣಕ್ಕೆ ಇಬ್ಬರ ನಡುವೆ 6 ತಿಂಗಳ ಹಿಂದೆ ಜಗಳವಾಗಿದ್ದು, ಇದಾದ ಬಳಿಕ ಲಿಡಿಯಾಳಿಂದ ಜಯಕುಮಾರ್‌ ಅಂತರ ಕಾಯ್ದುಕೊಂಡಿದ್ದ.

ಇದರಿಂದ ಬೇಸರಗೊಂಡ ಆಕೆ, ಜಯಕುಮಾರ್‌ ವಿರುದ್ಧ ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಶ್ರೀರಾಂಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಳು.  ಪೊಲೀಸರು ಇಬ್ಬರನ್ನು ಕರೆಸಿ ರಾಜಿ ಸಂಧಾನ ಮಾಡಿ ಕಳುಹಿಸಿದ್ದರು. ಆದರೂ, ಮದುವೆ ಮಾಡಿಕೊಳ್ಳಲು ಜಯಕುಮಾರ್‌ ನಿರಾಕರಿಸಿದ್ದ. ಇದರಿಂದ ಕೋಪಗೊಂಡಿದ್ದ ಲಿಡಿಯಾ ತನ್ನನ್ನು ವಂಚಿಸಿದ ಜಯಕುಮಾರ್‌ನಿಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದಳು. ಅದಕ್ಕೆ ಮಾವನ ಮಗ ಸುನೀಲ್‌ನ ನೆರವು ಕೇಳಿದ್ದಳು.

ಆಸ್ಪತ್ರೆ ಆ್ಯಸಿಡ್‌, ಬ್ಲೇಡ್‌: ಅದರಂತೆ ಜಯಕುಮಾರ್‌ನ ಮುಖಕ್ಕೆ ಆ್ಯಸಿಡ್‌ ಹಾಕಲು ನಿರ್ಧರಿಸಿದ್ದು, ಆಸ್ಪತ್ರೆಯಲ್ಲಿ ಬಳಸುವ ಆ್ಯಸಿಡ್‌ ಮತ್ತು ಬ್ಲೇಡ್‌ ತೆಗೆದುಕೊಂಡಿದ್ದಳು. ಸೋಮವಾರ ಜಯಕುಮಾರ್‌ ತನ್ನ ಸ್ನೇಹಿತ ಪದ್ಮನಾಭ ಅವರ ಜತೆ ಕಾರಿನಲ್ಲಿ ರಾಜರಾಜೇಶ್ವರಿ ನಗರ ದೇವಸ್ಥಾನಕ್ಕೆ ಹೋಗಿರುವ ಮಾಹಿತಿ ಪಡೆದ ಲಿಡಿಯಾ ತನ್ನ ಸಂಬಂಧಿ ಸುನೀಲ್‌ ಜತೆ ದ್ವಿಚಕ್ರ ವಾಹನದಲ್ಲಿ ಅತ್ತಿಗುಪ್ಪೆ ಬಳಿ ಅವರಿಗಾಗಿ ಕಾಯುತ್ತಿದ್ದಳು. ಕಾರು ಬರುತ್ತಿದ್ದಂತೆ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರೂ ಅದನ್ನು ಹಿಂಬಾಲಿಸಿದರು. ರಾತ್ರಿ 8.30ರ ಸುಮಾರಿಗೆ ವಿಜಯನಗರದ ಪೈಪ್‌ ಲೈನ್‌ ರಸ್ತೆಯಲ್ಲಿ ಬಲಭಾಗದಿಂದ ಕಾರನ್ನು ಹಿಂದಕ್ಕೆ ಹಾಕಲು ಯತ್ನಿಸಿದ ಲಿಡಿಯಾ ಕಾರು ಓಡಿಸುತ್ತಿದ್ದ ಜಯಕುಮಾರ್‌ ಮೇಲೆ ಆ್ಯಸಿಡ್‌ ಎರಚಿದಳು.

ಇದರಿಂದ ಗಾಯಗೊಂಡು ಕಾರು ನಿಲ್ಲಿಸಿ ಒದ್ದಾಡುತ್ತಿದ್ದ ಜಯಕುಮಾರ್‌ ಮುಖಕ್ಕೆ ಬ್ಲೇಡ್‌ನಿಂದ ಕೊಯ್ದು ವಿರೂಪಗೊಳಿಸಿದ್ದಾಳೆ. ಕೃತ್ಯ ಎಸಗಿದ ಬಳಿಕ ಲಿಡಿಯಾ ದ್ವಿಚಕ್ರ ವಾಹನದಲ್ಲಿ ಸುನೀಲ್‌ ಜತೆ ಪರಾರಿಯಾಗಲು
ಯತ್ನಿಸಿದಳಾದರೂ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುನೀಲ್‌ ಪರಾರಿಯಾಗಿದ್ದಾನೆ. ಆರೋಪಿಗಳ ವಿರುದ್ಧ ಆ್ಯಸಿಡ್‌ ದಾಳಿ(326 ಎ), ಕೊಲೆ ಯತ್ನ(307), ಅಕ್ರಮ ಬಂಧನ(341)ದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಮುಖಕ್ಕೆ ಬಟ್ಟೆ, ವಾಹನದ ನಂಬರ್‌ ಪ್ಲೇಟ್‌ಗೆ ಪೇಪರ್‌ ಅಂಟಿಸಿದುÉ:
ಆರೋಪಿ ಲಿಡಿಯಾ ಯಾರಿಗೂ ಗುರುತು ಸಿಗದಂತೆ ಮುಖವನ್ನು ಬಟ್ಟೆಯಿಂದ ಕಟ್ಟಿಕೊಂಡಿದ್ದಳು. ಜಯಕುಮಾರ್‌ ಸ್ನೇಹಿತ ಪದ್ಮನಾಭ ಎಂಬುವರು ಆಕೆ ಪರಾರಿಯಾಗುತ್ತಿದ್ದ ದ್ವಿಚಕ್ರ ವಾಹನ ಬೆನ್ನಟ್ಟಿ ಹಿಡಿದು, ಹೆಲ್ಮೆಟ್‌ ತೆಗೆಸಿದಾಗ ಆಕೆಯ ಗುರುತು ಪತ್ತೆಯಾಗಿದೆ. ಅಲ್ಲದೆ, ಹೊಂಡಾ ಆ್ಯಕ್ಟೀವಾದ ನೋಂದಣಿ ಸಂಖ್ಯೆ ತಿಳಿಯಬಾರದೆಂಬ ಕಾರಣಕ್ಕೆ ನಂಬರ್‌ ಪ್ಲೇಟ್‌ಗೆ ಬಿಳಿ ಪೇಪರ್‌ ಅಂಟಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಲಿಡಿಯಾ ಜತೆಗಿನ ಪ್ರೀತಿಗೆ ಜಯಕುಮಾರ್‌ ಪೋಷಕರ ವಿರೋಧವಿತ್ತು. ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ಲಿಡಿಯಾ, ತನ್ನನ್ನು ಮದುವೆಯಾಗಿ ನೀನೂ ಕ್ರೈಸ್ತ ಧರ್ಮಕ್ಕೆ ಮತಾಂತರವಾಗು ಎಂದು ಜಯಕುಮಾರ್‌ನನ್ನು
ಪೀಡಿಸುತ್ತಿದ್ದಳು. ಕಳೆದ ನವೆಂಬರ್‌ನಲ್ಲಿ ಇಬ್ಬರ ವಿವಾಹಕ್ಕೆ ಜಯಕುಮಾರ್‌ ಪೋಷಕರು ಸಮ್ಮತಿ ಸೂಚಿಸಿದ್ದರಾದರೂ, ಮತಾಂತರಕ್ಕೆ ಮಾತ್ರ ಒಪ್ಪಿರಲಿಲ್ಲ. ಇದರಿಂದ ಇವರಿಬ್ಬರ ನಡುವೆ ಮನಸ್ತಾಪ ಏರ್ಪಟ್ಟು ಜಗಳವಾಗಿತ್ತು. ಬಳಿಕ
ಲಿಡಿಯಾ ಕರೆ ಮಾಡಿದರೂ ಜಯಕುಮಾರ್‌ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಲಿಡಿಯಾ ತೀರ್ಮಾನಿಸಿದ್ದಳು ಎನ್ನಲಾಗಿದೆ.

ಟಾಪ್ ನ್ಯೂಸ್

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.