ಆರ್ಟಿಇ ಸೀಟು ಪ್ರವೇಶಕ್ಕೆ ಪರೀಕ್ಷಾರ್ಥ ಅರ್ಜಿ ಸ್ವೀಕಾರ
Team Udayavani, Feb 19, 2017, 3:45 AM IST
ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆ ಕೊನೆಗೂ 2017-18ನೇ ಸಾಲಿನ ಆರ್ಟಿಇ ಸೀಟುಗಳ ಪ್ರವೇಶಕ್ಕೆ ಶನಿವಾರ ಆನ್ಲೈನ್ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಿದೆ. ಆದರೆ, ಇದು ಪರೀಕ್ಷಾರ್ಥ ಮಾತ್ರ ಎಂದು ತಿಳಿಸಲಾಗಿದೆ.
ಇಲಾಖೆಯ ವೆಬ್ಸೈಟ್ http://www.schooleducation.kar.nic.in/ ಹೋಮ್ ಪೇಜ್ನಲ್ಲೇ ಪರೀಕ್ಷಾರ್ಥ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಲಿಂಕ್ವೊಂದನ್ನು ನೀಡಲಾಗಿದ್ದು, ಆ ಮೂಲಕ ಪೋಷಕರು ಅರ್ಜಿ ಸಲ್ಲಿಸುವ ಪ್ರಯೋಗ ನಡೆಸಬಹುದು. ಅಥವಾ ನೇರವಾಗಿ http://164.100.133.126/ RTE2017Demo/(S(xacn0i1nr1fac1tjk4pdypsl))/RTE2017/
RTEAdmit.aspx ಮೂಲಕ ಅರ್ಜಿ ಸಲ್ಲಿಕೆ ಪ್ರಯೋಗ ನಡೆಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೆಬ್ಸೈಟ್ ತೆರೆದುಕೊಳ್ಳುತ್ತಿದ್ದಂತೆ ಆರ್ಟಿಇ ಅಡ್ಮಿಷನ್ಸ್ 2017 ಶೀರ್ಷಿಕೆ ಕೆಳಗಿರುವ “ಆಪ್ಷನ್ ಕ್ಲಿಕ್ ಮಾಡಿದರೆ’ ಅರ್ಜಿ ಸಲ್ಲಿಕೆಗೆ ದಾರಿ ದೊರೆಯುತ್ತದೆ. ನಿಮ್ಮ ಮಗು ಆಧಾರ್ ಗುರುತಿನ ಚೀಟಿ ಹೊಂದಿದೆಯೇ? ಎಂಬ ಪ್ರಶ್ನೆಯೊಂದಿಗೆ ಎಸ್, ನೋ ಎಂಬ ಉತ್ತರ ಆಯ್ಕೆ ಮಾಡಿ ನಂತರ ಆಧಾರ್ ಸಂಖ್ಯೆ ನಮೂದಿಸಿದ ಬಳಿಕ ನಿಮ್ಮ ಬೆರಳಚ್ಚು ಅಥವಾ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ನಮೂದಿಸಿ ಸಬಿ¾ಟ್ ಬಟನ್ ಒತ್ತಿದರೆ ಅರ್ಜಿ ತೆರೆದುಕೊಳ್ಳಲಿದೆ.ಆಧಾರ್ ಸಂಖ್ಯೆ ಆಧರಿಸಿ ಈ ಭಾರಿ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಸಲು ಮುಂದಾದ ಇಲಾಖೆ ತಾಂತ್ರಿಕ ಕಾರಣಗಳಿಂದಾಗಿ ಎರಡು ತಿಂಗಳು ತಡವಾಗಿ ಪ್ರಕ್ರಿಯೆ ಆರಂಭಿಸಿದೆ.”
“ಸದ್ಯ ಅರ್ಜಿ ಸ್ವೀಕಾರ ಪರೀಕ್ಷಾರ್ಥವಷ್ಟೇ ಆಗಿದ್ದು, ಒಂದೆರಡು ದಿನದಲ್ಲಿ ಎಲ್ಲವೂ ಸರಿ ಇದೆ ಎಂದು ಖಾತರಿಯಾದ ಬಳಿಕ ನೈಜ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಲಿದೆ’ ಆಯುಕ್ತ (ಪ್ರಭಾರ)ಪಿ.ಸಿ.ಜಾಫರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ