ಲಿಂಗಸೂರು: ಮಲಗಿದ್ದಲ್ಲೇ ಅನುಮಾನಾಸ್ಪದವಾಗಿ ಶವವಾದ ಐವರು ಕಾರ್ಮಿಕರು
Team Udayavani, Mar 17, 2017, 9:12 AM IST
ಲಿಂಗಸೂರು: ಪಟ್ಟಣದಲ್ಲಿ ಮದುವೆ ಸಮಾರಂಭಕ್ಕೆ ಶಾಮಿಯಾನ ಹಾಕಲು ಬಂದಿದ್ದ ಐವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಭೀಕರ ದುರಂತ ಶುಕ್ರವಾರ ನಡೆದಿದೆ.
ರಾತ್ರಿ ಕೊಠಡಿಯೊಂದರಲ್ಲಿ ಮಲಗಿದ್ದ ವೇಳೆ ಕರೆಂಟ್ ಕೈಕೊಟ್ಟಿದ್ದು ಈ ವೇಳೆ ಜನರೇಟರ್ ಆನ್ ಮಾಡಿ ಮಲಗಿದ್ದರು ಎನ್ನಲಾಗಿದೆ. ರಾತ್ರಿಯಿಡೀ ಜನರೇಟರ್ನ ಹೊಗೆ ಸೇವಿಸಿ ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಮೃತಪಟ್ಟವರು ಕರಡೆಕಲ್ ಗ್ರಾಮದ ಶಿಕುಮಾರ್(22),ಹಾಜಪ್ಪ(17),ಮೌಲಾಲಿ(18),ಮೌಲಪ್ಪ(20), ಸುರೇಶ್ (21) ಎಂದು ತಿಳಿದು ಬಂದಿದೆ. ನಾಲ್ವರು ಮಲಗಿದ್ದ ಕೋಣೆಯಲ್ಲೇ ಶವವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಸುರೇಶ್ನನ್ನು ಲಿಂಗಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿರುವ ಬಗ್ಗೆ ವರದಿಯಾಗಿದೆ.
ಲಿಂಗಸೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.