ಕೃಷ್ಣ ಪಾರಿಜಾತಕ್ಕೆ ಮನಸೋತ ಅಮೆರಿಕನ್ನಡಿಗರು


Team Udayavani, Mar 20, 2017, 12:58 PM IST

Parijatha-20-3.jpg

ಧಾರವಾಡ: ಉತ್ತರ ಕರ್ನಾಟಕದ ರಮಣೀಯ ಕಲೆ ಶ್ರೀಕೃಷ್ಣ ಪಾರಿಜಾತ ಇದೀಗ ಅಮೆರಿಕದಲ್ಲಿ ಐತಿಹಾಸಿಕ ಪ್ರದರ್ಶನಕ್ಕೆ ಸಜ್ಜಾಗಿರುವುದು ಕನ್ನಡಿಗರಿಗೆ ಖುಷಿ ಕೊಡುವ ಸಂಗತಿ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಪ್ತಸಾಗರಗಳನ್ನು ದಾಟಿ ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಧಾರವಾಡದ ಜಾನಪದ ಸಂಶೋಧನಾ ಕೇಂದ್ರವು ಶ್ರೀಕೃಷ್ಣ ಪಾರಿಜಾತ ಬಯಲಾಟವನ್ನು ಕಲಿಸಲು ಸಜ್ಜಾಗಿದೆ. ಮಾ. 23ರಿಂದ ಏಪ್ರಿಲ್‌ 23ರವರೆಗೆ ಅಲ್ಲಿನ 50ಕ್ಕೂ ಹೆಚ್ಚು ಆಸಕ್ತರಿಗೆ ಈ ನಾಟಕದ ತರಬೇತಿ ನೀಡಿ, ಕೊನೆಗೆ ಅವರಿಂದಲೇ ಪ್ರದರ್ಶನವನ್ನೂ ನಡೆಸಲಿದೆ.

ಗ್ರಾಮೀಣ ಕರ್ನಾಟಕದಲ್ಲಿ ಹವ್ಯಾಸಿ ರಂಗಭೂಮಿ ಇಂದಿಗೂ ಜೀವಂತವಾಗಿದ್ದು, ಪ್ರತಿವರ್ಷ ಜಾತ್ರೆಗೋ, ಊರ ಹಬ್ಬಕ್ಕೋ ನಾಟಕಗಳನ್ನು ಕಲಿಯುತ್ತಾರೆ. ಮೇಷ್ಟ್ರನ್ನು ಪರ ಊರು ಮತ್ತು ಜಿಲ್ಲೆಗಳಿಂದ ಕರೆಯಿಸಿಕೊಂಡು, ಅವರಿಂದ ನಾಟಕ ಕಲಿತು ಪ್ರದರ್ಶಿಸುತ್ತಾರೆ. ಅಂತಹ ಪರಂಪರೆಯನ್ನು ಅಮೆರಿಕದ ಕನ್ನಡಿಗರೂ ಪಾಲಿಸಲು ಮುಂದಾಗಿದ್ದಾರೆ. ಈವರೆಗೆ ನಾಡಿನ ಕಲಾತಂಡಗಳು ಆಗಾಗ ವಿದೇಶಗಳಿಗೆ ಹೋಗಿ, ಕಲಾ ಪ್ರದರ್ಶನ ನೀಡುತ್ತಿದ್ದವು. ಈಗ ಒಂದು ಹೆಜ್ಜೆ ಮುಂದೆ ಹೋಗಿ, ನಾಟಕ ಕಲಿಸುವ ನಿರ್ದೇಶಕರನ್ನು, ಸಂಗೀತಗಾರರನ್ನು ಇಲ್ಲಿಂದ ಕರೆಯಿಸಿಕೊಂಡು, ತರಬೇತಿ ಪಡೆದು ಅಭಿನಯಿಸಲು ಅಮೆರಿಕದ ಕನ್ನಡಿಗರು ಉತ್ಸುಕರಾಗಿದ್ದಾರೆ.

ಬಯಲಾಟ ಪರಂಪರೆಯಲ್ಲಿ ಸಾಕಷ್ಟು ಕೆಲಸ ಮಾಡಿ, ನೀನಾಸಂ ಮತ್ತು ರಂಗಭೀಷ್ಮ ಬಿ.ವಿ. ಕಾರಂತರೊಂದಿಗೆ ಸಂಗೀತದಲ್ಲಿ ದಶಕಗಳ ಕಾಲ ಮಾಧುರ್ಯ ಹೊಮ್ಮಿಸಿರುವ ಧಾರವಾಡದ ಜಾನಪದ ತಜ್ಞ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ದಂಪತಿ ಈಗ ನಾಟಕ ನಿರ್ದೇಶಕರಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಥೈಲೆಂಡ್‌, ಲಂಡನ್‌, ಮಲೇಶಿಯಾ ಮುಂತಾದ ಕಡೆಗಳಲ್ಲಿ ಜಾನಪದದ ಕಂಪು ಪಸರಿಸಿರುವ ಈ ದಂಪತಿ, ಈಗ ಪೂರ್ಣ ಪ್ರಮಾಣದ ಬಯಲಾಟ ಕಲಿಸಲು ಸಾಗರೋಲ್ಲಂಘನ ಮಾಡುತ್ತಿದ್ದಾರೆ.

ಏನಿದು ಶ್ರೀಕೃಷ್ಣ ಪಾರಿಜಾತ?: ಪಾರಿಜಾತ ಎಂದರೆ ಶ್ರೀಕೃಷ್ಣ ಪರಮಾತ್ಮನ ಲೀಲೆಗಳನ್ನು ಒಳಗೊಂಡಿರುವ ಬಯಲಾಟ. ಮೊದಲು ಇದು ಶಿರಗುಪ್ಪಿ ಸದಾಶಿವ ರಾಯರು ಬರೆದ ಪುರಾಣವಾಗಿತ್ತು. ಪಾರಾಯಣ ಮಾಡುತ್ತಿದ್ದ ಇದನ್ನು ರಂಗಭೂಮಿಗೆ ಅಳವಡಿಸಿದವರು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕುಲಗೋಡು ತಮ್ಮಣ್ಣ. 19ನೇ ಶತಮಾನದ ಆರಂಭದಲ್ಲಿ ರಂಗಕ್ಕೆ ಬಂದ ಈ ಕೃತಿಯನ್ನು 1980ರ ದಶಕದಲ್ಲಿಯೇ ಹಿರಿಯ ಬಯಲಾಟ ಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ದಂಪತಿ ಕೇವಲ ಎರಡೂವರೆ ತಾಸಿಗೆ ಪರಿಷ್ಕರಿಸಿದರು. ಇದೊಂದು ಗೀತ ರೂಪಕ (ಓಪೇರಾ) ಆಗಿದೆ. ಉತ್ತರ ಕರ್ನಾಟಕದ ರಮ್ಯ ಕಲೆಗಳಲ್ಲಿ ಒಂದಾದ ಶ್ರೀಕೃಷ್ಣ ಪಾರಿಜಾತವನ್ನು ಬಸವಲಿಂಗಯ್ಯ ಹಿರೇಮಠರು ನಾಡಿನ ಮೂಲೆ ಮೂಲೆಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ಸದ್ಯಕ್ಕೆ 998ನೇ ಯಶಸ್ವಿ ಪ್ರದರ್ಶನ ಕಂಡಿದೆ. ದೇಶದಲ್ಲಿಯೇ ಶ್ರೀಕೃಷ್ಣನ ಕುರಿತ ರಂಗನಾಟಕವೊಂದು ಇಷ್ಟೊಂದು ಪ್ರದರ್ಶನ ಕಾಣುತ್ತಿರುವುದು ಹೊಸ ದಾಖಲೆಯೇ ಆಗಿದೆ.

ನನ್ನ ಪತಿ ಮತ್ತು ನಾನು 40 ವರ್ಷಗಳಿಂದ ಶ್ರೀಕೃಷ್ಣ ಪಾರಿಜಾತದ ಅಧ್ಯಯನ, ಸಂಶೋಧನೆ ನಡೆಸುತ್ತಿದ್ದು, ಸಾವಿರ ಪ್ರದರ್ಶನಗಳನ್ನ ನೀಡಿದ್ದೇವೆ. ಇದೀಗ ಅಮೆರಿಕನ್ನಡಿಗರು ತಾವೇ ಕಲಿತು ಇದನ್ನು ಪ್ರದರ್ಶಿಸುವುದಕ್ಕೆ ಮುಂದಾಗಿರುವುದು ಹೆಮ್ಮೆ ವಿಚಾರ. ಅವರಿಗೆ ತುಂಬು ಮನಸ್ಸಿನಿಂದ ಈ ಕಲೆಯನ್ನು ಧಾರೆ ಎರೆದು ಬರುತ್ತೇವೆ.
– ವಿಶ್ವೇಶ್ವರಿ ಹಿರೇಮಠ, ಪಾರಿಜಾತ ನಿರ್ದೇಶಕಿ

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.