ಕೃಷ್ಣ ಪಾರಿಜಾತಕ್ಕೆ ಮನಸೋತ ಅಮೆರಿಕನ್ನಡಿಗರು


Team Udayavani, Mar 20, 2017, 12:58 PM IST

Parijatha-20-3.jpg

ಧಾರವಾಡ: ಉತ್ತರ ಕರ್ನಾಟಕದ ರಮಣೀಯ ಕಲೆ ಶ್ರೀಕೃಷ್ಣ ಪಾರಿಜಾತ ಇದೀಗ ಅಮೆರಿಕದಲ್ಲಿ ಐತಿಹಾಸಿಕ ಪ್ರದರ್ಶನಕ್ಕೆ ಸಜ್ಜಾಗಿರುವುದು ಕನ್ನಡಿಗರಿಗೆ ಖುಷಿ ಕೊಡುವ ಸಂಗತಿ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಪ್ತಸಾಗರಗಳನ್ನು ದಾಟಿ ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಧಾರವಾಡದ ಜಾನಪದ ಸಂಶೋಧನಾ ಕೇಂದ್ರವು ಶ್ರೀಕೃಷ್ಣ ಪಾರಿಜಾತ ಬಯಲಾಟವನ್ನು ಕಲಿಸಲು ಸಜ್ಜಾಗಿದೆ. ಮಾ. 23ರಿಂದ ಏಪ್ರಿಲ್‌ 23ರವರೆಗೆ ಅಲ್ಲಿನ 50ಕ್ಕೂ ಹೆಚ್ಚು ಆಸಕ್ತರಿಗೆ ಈ ನಾಟಕದ ತರಬೇತಿ ನೀಡಿ, ಕೊನೆಗೆ ಅವರಿಂದಲೇ ಪ್ರದರ್ಶನವನ್ನೂ ನಡೆಸಲಿದೆ.

ಗ್ರಾಮೀಣ ಕರ್ನಾಟಕದಲ್ಲಿ ಹವ್ಯಾಸಿ ರಂಗಭೂಮಿ ಇಂದಿಗೂ ಜೀವಂತವಾಗಿದ್ದು, ಪ್ರತಿವರ್ಷ ಜಾತ್ರೆಗೋ, ಊರ ಹಬ್ಬಕ್ಕೋ ನಾಟಕಗಳನ್ನು ಕಲಿಯುತ್ತಾರೆ. ಮೇಷ್ಟ್ರನ್ನು ಪರ ಊರು ಮತ್ತು ಜಿಲ್ಲೆಗಳಿಂದ ಕರೆಯಿಸಿಕೊಂಡು, ಅವರಿಂದ ನಾಟಕ ಕಲಿತು ಪ್ರದರ್ಶಿಸುತ್ತಾರೆ. ಅಂತಹ ಪರಂಪರೆಯನ್ನು ಅಮೆರಿಕದ ಕನ್ನಡಿಗರೂ ಪಾಲಿಸಲು ಮುಂದಾಗಿದ್ದಾರೆ. ಈವರೆಗೆ ನಾಡಿನ ಕಲಾತಂಡಗಳು ಆಗಾಗ ವಿದೇಶಗಳಿಗೆ ಹೋಗಿ, ಕಲಾ ಪ್ರದರ್ಶನ ನೀಡುತ್ತಿದ್ದವು. ಈಗ ಒಂದು ಹೆಜ್ಜೆ ಮುಂದೆ ಹೋಗಿ, ನಾಟಕ ಕಲಿಸುವ ನಿರ್ದೇಶಕರನ್ನು, ಸಂಗೀತಗಾರರನ್ನು ಇಲ್ಲಿಂದ ಕರೆಯಿಸಿಕೊಂಡು, ತರಬೇತಿ ಪಡೆದು ಅಭಿನಯಿಸಲು ಅಮೆರಿಕದ ಕನ್ನಡಿಗರು ಉತ್ಸುಕರಾಗಿದ್ದಾರೆ.

ಬಯಲಾಟ ಪರಂಪರೆಯಲ್ಲಿ ಸಾಕಷ್ಟು ಕೆಲಸ ಮಾಡಿ, ನೀನಾಸಂ ಮತ್ತು ರಂಗಭೀಷ್ಮ ಬಿ.ವಿ. ಕಾರಂತರೊಂದಿಗೆ ಸಂಗೀತದಲ್ಲಿ ದಶಕಗಳ ಕಾಲ ಮಾಧುರ್ಯ ಹೊಮ್ಮಿಸಿರುವ ಧಾರವಾಡದ ಜಾನಪದ ತಜ್ಞ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ದಂಪತಿ ಈಗ ನಾಟಕ ನಿರ್ದೇಶಕರಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಥೈಲೆಂಡ್‌, ಲಂಡನ್‌, ಮಲೇಶಿಯಾ ಮುಂತಾದ ಕಡೆಗಳಲ್ಲಿ ಜಾನಪದದ ಕಂಪು ಪಸರಿಸಿರುವ ಈ ದಂಪತಿ, ಈಗ ಪೂರ್ಣ ಪ್ರಮಾಣದ ಬಯಲಾಟ ಕಲಿಸಲು ಸಾಗರೋಲ್ಲಂಘನ ಮಾಡುತ್ತಿದ್ದಾರೆ.

ಏನಿದು ಶ್ರೀಕೃಷ್ಣ ಪಾರಿಜಾತ?: ಪಾರಿಜಾತ ಎಂದರೆ ಶ್ರೀಕೃಷ್ಣ ಪರಮಾತ್ಮನ ಲೀಲೆಗಳನ್ನು ಒಳಗೊಂಡಿರುವ ಬಯಲಾಟ. ಮೊದಲು ಇದು ಶಿರಗುಪ್ಪಿ ಸದಾಶಿವ ರಾಯರು ಬರೆದ ಪುರಾಣವಾಗಿತ್ತು. ಪಾರಾಯಣ ಮಾಡುತ್ತಿದ್ದ ಇದನ್ನು ರಂಗಭೂಮಿಗೆ ಅಳವಡಿಸಿದವರು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕುಲಗೋಡು ತಮ್ಮಣ್ಣ. 19ನೇ ಶತಮಾನದ ಆರಂಭದಲ್ಲಿ ರಂಗಕ್ಕೆ ಬಂದ ಈ ಕೃತಿಯನ್ನು 1980ರ ದಶಕದಲ್ಲಿಯೇ ಹಿರಿಯ ಬಯಲಾಟ ಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ದಂಪತಿ ಕೇವಲ ಎರಡೂವರೆ ತಾಸಿಗೆ ಪರಿಷ್ಕರಿಸಿದರು. ಇದೊಂದು ಗೀತ ರೂಪಕ (ಓಪೇರಾ) ಆಗಿದೆ. ಉತ್ತರ ಕರ್ನಾಟಕದ ರಮ್ಯ ಕಲೆಗಳಲ್ಲಿ ಒಂದಾದ ಶ್ರೀಕೃಷ್ಣ ಪಾರಿಜಾತವನ್ನು ಬಸವಲಿಂಗಯ್ಯ ಹಿರೇಮಠರು ನಾಡಿನ ಮೂಲೆ ಮೂಲೆಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ಸದ್ಯಕ್ಕೆ 998ನೇ ಯಶಸ್ವಿ ಪ್ರದರ್ಶನ ಕಂಡಿದೆ. ದೇಶದಲ್ಲಿಯೇ ಶ್ರೀಕೃಷ್ಣನ ಕುರಿತ ರಂಗನಾಟಕವೊಂದು ಇಷ್ಟೊಂದು ಪ್ರದರ್ಶನ ಕಾಣುತ್ತಿರುವುದು ಹೊಸ ದಾಖಲೆಯೇ ಆಗಿದೆ.

ನನ್ನ ಪತಿ ಮತ್ತು ನಾನು 40 ವರ್ಷಗಳಿಂದ ಶ್ರೀಕೃಷ್ಣ ಪಾರಿಜಾತದ ಅಧ್ಯಯನ, ಸಂಶೋಧನೆ ನಡೆಸುತ್ತಿದ್ದು, ಸಾವಿರ ಪ್ರದರ್ಶನಗಳನ್ನ ನೀಡಿದ್ದೇವೆ. ಇದೀಗ ಅಮೆರಿಕನ್ನಡಿಗರು ತಾವೇ ಕಲಿತು ಇದನ್ನು ಪ್ರದರ್ಶಿಸುವುದಕ್ಕೆ ಮುಂದಾಗಿರುವುದು ಹೆಮ್ಮೆ ವಿಚಾರ. ಅವರಿಗೆ ತುಂಬು ಮನಸ್ಸಿನಿಂದ ಈ ಕಲೆಯನ್ನು ಧಾರೆ ಎರೆದು ಬರುತ್ತೇವೆ.
– ವಿಶ್ವೇಶ್ವರಿ ಹಿರೇಮಠ, ಪಾರಿಜಾತ ನಿರ್ದೇಶಕಿ

ಟಾಪ್ ನ್ಯೂಸ್

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.