‘ಶ್ರೀರಾಮ ಚರಿತ’ ಕೊಂಕಣಿ ಮಹಾಕಾವ್ಯ ಲೋಕಾರ್ಪಣೆ
Team Udayavani, Mar 27, 2017, 1:55 AM IST
ಶಿರಸಿ: ಇದೇ ಪ್ರಥಮ ಬಾರಿಗೆ ರಚಿತಗೊಂಡ ಕೊಂಕಣಿ ಷಟ್ಪದಿ ಮಹಾಕಾವ್ಯ ‘ಶ್ರೀರಾಮ ಚರಿತ’ ಕೃತಿ ರವಿವಾರ ಲೋಕಾರ್ಪಣೆಗೊಂಡಿತು. ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಹಾರ್ಸಿಕಟ್ಟಾದ ವಿಶ್ವನಾಥ ಶೇಟ್ ಅವರು ಹತ್ತು ವರ್ಷಗಳ ಅವಧಿಯಲ್ಲಿ ಭಾಮಿನಿ ಷಟ್ಪದಿಯಲ್ಲಿ ಬರೆದ ಕೃತಿಯನ್ನು ಎರಡು ಸಂಪುಟಗಳಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕೃತಿಯನ್ನು ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಸಾಹಿತ್ಯ ಪರಿಷತ್ ಪ್ರಕಟಿಸಿದ್ದು, ಸುಮಾರು 5,000 ಷಟ್ಪದಿಗಳಿವೆ. ಅರ್ಥ ವಿವರಣೆಯೊಂದಿಗೆ 1,500 ಪುಟಗಳ ಕೃತಿ ಇದಾಗಿದೆ.
ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಗೋಪಾಲಕೃಷ್ಣ ಪೈ ಕೃತಿ ಬಿಡುಗಡೆಗೊಳಿಸಿದರು. ಹಾಂಗ್ಯೋ ಐಸ್ಕ್ರೀಂ ಸಂಸ್ಥೆ ಆಡಳಿತ ನಿರ್ದೇಶಕ ಪ್ರದೀಪ ಪೈ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಂಕಣಿ ಸಮಾಜದ ಅಧ್ಯಕ್ಷ ರಾಮರಾವ ರಾಯ್ಕರ, ಎ. ಸುಬ್ಬರಾವ್, ಉದ್ಯಮಿ ರವೀಂದ್ರ ನಾಯಕ, ಕವಿ ವಿಶ್ವನಾಥ ಶೇಟ್, ಪ್ರೊ| ಕೆ.ಎ. ಭಟ್ಟ, ಶಾ.ಮಂ. ಕೃಷ್ಣರಾಯ, ಪರಿಷತ್ ಗೌರವಾಧ್ಯಕ್ಷ ಡಾ| ವಿ.ಎಸ್. ಸೋಂದೆ, ಅಧ್ಯಕ್ಷ ನಿತಿನ್ ಕಾಸರಕೋಡ ಇತರರು ಇದ್ದರು. ಮುಂಜಾನೆ ಪ್ರಸಿದ್ಧ ಮಾರಿಕಾಂಬಾ ದೇವಾಲಯದಲ್ಲಿ ಮಹಾಕಾವ್ಯವನ್ನು ಪೂಜಿಸಿ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಬಿಡುಗಡೆ ಸಮಾರಂಭದ ಬಳಿಕ ವಿವಿಧ ಗೋಷ್ಠಿಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶ್ರೀ ವಾಗ್ದೇವಿ ಕೊಂಕಣಿ ಮಹಿಳಾ ಯಕ್ಷಗಾನ ಮಂಡಳಿಯಿಂದ ಕೊಂಕಣಿ ಯಕ್ಷಗಾನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ