‘ನನ್ನ ಸಾವಿಗೆ ರಾಜ್ಯ ಸರ್ಕಾರ ಕಾರಣ’:ಸಿಂದಗಿಯಲ್ಲಿ ರೈತ ಆತ್ಮಹತ್ಯೆ
Team Udayavani, Apr 11, 2017, 9:56 AM IST
ವಿಜಯಪುರ: ಸಿಂದಗಿಯ ರೈತನೊಬ್ಬ ‘ನನ್ನ ಸಾವಿಗೆ ರಾಜ್ಯ ಸರ್ಕಾರ ಕಾರಣ’ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ನಡೆದಿದೆ.
ಸಂತೋಷ್ ರಾಮ್ರಾವ್ ಕುಲಕರ್ಣಿ (43) ಎಂಬ ರೈತ ಸಾಲಬಾಧೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. 7 ಎಕರೆ ಜಮೀನು ಹೊಂದಿದ್ದು, ಕಬ್ಬು ಮತ್ತು ದಾಳಿಂಬೆ ಬೆಳೆಯಲ್ಲಿ ಅಪಾರ ನಷ್ಟ ಅನುಭವಿಸಿದ್ದ ಎಂದು ವರದಿಯಾಗಿದೆ.
ನನ್ನ ಸಾವಿಗೆ ರಾಜ್ಯ ಸರ್ಕಾರ ಕಾರಣ ಎಂದು ಡೆತ್ ನೋಟ್ನಲ್ಲಿ ಬರೆದಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ 7 ಲಕ್ಷ ರೂಪಾಯಿ ಮತ್ತು 5 ಲಕ್ಷ ರೂಪಾಯಿ ಕೈ ಸಾಲ ಇರುವುದಾಗಿ ಬರೆದಿದ್ದಾನೆ.
ದೇವರ ಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.