ಸೈಬರ್ ದಾಳಿ ಆತಂಕಕಾರಿ : ಡಾ| ಪರಮೇಶ್ವರ್
Team Udayavani, May 17, 2017, 10:30 AM IST
ಬಾಳೆಹೊನ್ನೂರು: ವಿಶ್ವದ 150 ದೇಶಗಳಲ್ಲಿ ನಡೆದಿರುವ ಸೈಬರ್ ದಾಳಿ ಬಗ್ಗೆ ಗೃಹ ಸಚಿವ ಡಾ| ಜಿ.ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಸೈಬರ್ ದಾಳಿ ಬಗ್ಗೆ ಜನ ಜಾಗೃತರಾಗಿರಬೇಕು. ರಾಜ್ಯ ಸರಕಾರ ಸಹ ಎಲ್ಲ ಮುಂಜಾಗೃತಾ ಕ್ರಮ ಕೈಗೊಂಡಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.