ರೈತರ ಸಂಕಷ್ಟ ಆಲಿಸಲು ಸರ್ಕಾರಕ್ಕೆ ಪುರಸೊತ್ತಿಲ್ಲ
Team Udayavani, May 30, 2017, 11:19 AM IST
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ಕಾರ್ಯವನ್ನು ಪರಿಶೀಲನೆ ನಡೆಸಿ, ವಾಸ್ತವ ಅರಿಯಲು ಹಾಗೂ
ರೈತರ ಸಂಕಷ್ಟ ಕೇಳಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೂರಿದರು.
ರೈತರೇ ತುಂಗಭದ್ರಾ ಜಲಾಶಯದ ಹೂಳೆತ್ತುತ್ತಿರುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ರೈತರು ಬಹು ದಿನಗಳಿಂದ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಸೌಜನ್ಯಕ್ಕೂ ಸರ್ಕಾರದ ಯಾವೊಬ್ಬ ಪ್ರತಿನಿಧಿಗಳೂ ಬಂದಿಲ್ಲ. ಅವರಿಗೆ ರೈತರ ಸಂಕಷ್ಟ ಕೇಳಲು ಪುರುಸೊತ್ತು ಎಲ್ಲಿದೆ? ಎಂದರು. ಯಾವುದೇ ಸರ್ಕಾರ ಹೂಳು ತೆಗೆಯಲು ಮೊದಲು ತಜ್ಞರ ಸಲಹೆ ಪಡೆಯಬೇಕಾಗುತ್ತದೆ. ಅದಕ್ಕೆಲ್ಲ ಸುಮಾರು 10 ಸಾವಿರ ಕೋಟಿ
ಖರ್ಚಾಗಬಹುದು. ನಮ್ಮ ಸರ್ಕಾರ ಇದ್ದಾಗ ಹೂಳೆತ್ತುವುದರ ಬಗ್ಗೆ ತಜ್ಞರ ಸಲಹೆ ಕೇಳಿದಾಗ ಅದರ ಬದಲು ಸಮಾನಾಂತರ ಜಲಾಶಯಗಳು ನಿರ್ಮಾಣ ಮಾಡಿದರೆ ಒಳಿತು ಎಂದು ತಜ್ಞರು ನಮಗೆ ಸಲಹೆ ನೀಡಿದ್ದರು.ನಮ್ಮ ಸರ್ಕಾರ ಬಂದರೆ ಖಂಡಿತಾ ಇದಕ್ಕೆ ಬೇಕಾಗುವ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಾನು ಬರಗಾಲ ವೀಕ್ಷಣೆಗೆ ಹೊರಟಾಗ ಯಡಿಯೂರಪ್ಪ ಕೊಡೆ ಹಿಡಿದು ಹೋಗಬೇಕಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈವರೆಗೆ 7 ಜಿÇÉೆಗಳಿಗೆ ಭೇಟಿ ನೀಡಿದ್ದೇನೆ.
ಎಲ್ಲ ಕಡೆಯೂ ಭೀಕರ ಬರಗಾಲದ ದಾರುಣ ದೃಶ್ಯ ಕಂಡು ಕಣ್ಣೀರಾಗಿದ್ದೇನೆ. ಸಿಎಂ ಸಿದ್ದರಾಮಯ್ಯ ಸಿನಿಮಾ ನೋಡಿ
ಕೊಂಡು, ದೋಸೆ ತಿಂದುಕೊಂಡು ಮಜವಾಗಿ¨ªಾರೆ ಎಂದು ಕಿಡಿಕಾರಿದರು. ಇದೇ ಸಂದರ್ಭದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಬಿಜೆಪಿ ವತಿಯಿಂದ ತಲಾ 1 ಲಕ್ಷ, ಗೋನಾಳ ರಾಜಶೇಖರಗೌಡ 1ಲಕ್ಷ ಸೇರಿ 3 ಲಕ್ಷ ದೇಣಿಗೆಯನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮಗೌಡ ಅವರಿಗೆ ಹಸ್ತಾಂತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ