ಬ್ರಿಗೇಡ್ ಸದಸ್ಯರು ಬಿಜೆಪಿಗೆ ಬಂದಲ್ಲಿ ಸೂಕ್ತ ಸ್ಥಾನ
Team Udayavani, Jun 4, 2017, 3:45 AM IST
ರಾಯಚೂರು: ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವಾಗುವ ಕಾರಣಕ್ಕೆ ಪಕ್ಷದ ವರಿಷ್ಠರು ರಾಯಣ್ಣ ಬ್ರಿಗೇಡ್ನಿಂದ ದೂರ ಉಳಿಯುವಂತೆ ಸೂಚಿಸಿದ್ದಾರೆ.
ಜತೆಗೆ, ಹಿಂದುಳಿದ ವರ್ಗಗಳ ವಿಭಾಗದ ಹೊಣೆ ನೀಡಿದ್ದಾರೆ. ಒಂದು ವೇಳೆ, ಬ್ರಿಗೇಡ್ ಸದಸ್ಯರು ಪಕ್ಷಕ್ಕೆ ಬಂದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಿಗೇಡ್ನ ಹಿಂದುಳಿದ ನಾಯಕರು ಬಿಜೆಪಿಗೆ ಬಂದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.