ಕಾರವಾರ: ಸೀಬರ್ಡ್ ನೌಕಾನೆಲೆಗೆ ನುಸುಳಿದ ಶಂಕಿತರು?
Team Udayavani, Jun 23, 2017, 9:46 AM IST
ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆ ಪ್ರದೇಶಕ್ಕೆ ಶಂಕಿತರು ನುಸುಳಿದ್ದಾರೆಂಬ ಸುದ್ದಿ ಗುರುವಾರ ಬೆಳಗ್ಗಿನಿಂದ ಹಬ್ಬಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ನೌಕಾನೆಲೆಯ ಮುಖ್ಯದ್ವಾರ ಸಮೀಪದ ಬಿಣಗಾ ಮತ್ತು ಅರಗಾ ಗ್ರಾಮಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯ ನಡೆಯುತ್ತಿದ್ದು, ನೌಕಾನೆಲೆಯ ಆವರಣ ಗೋಡೆ ಹೆದ್ದಾರಿಗೆ ಹೊಂದಿಕೊಂಡಿದೆ. ಆವರಣದ ಗೋಡೆಯನ್ನು ಕೆಲವು ಕಡೆ ಕಲ್ಲಿನಿಂದ ನಿರ್ಮಿಸಲಾಗಿದೆ. ಆಳ ಮತ್ತು ತಗ್ಗು ಪ್ರದೇಶ ಇರುವಲ್ಲಿ, ಸಮುದ್ರಕ್ಕೆ ಹೊಂದಿಕೊಂಡ ಪ್ರದೇಶಕ್ಕೆ ತಗಡಿನ ಆವರಣ ಹಾಕಲಾಗಿದೆ. ಮಳೆ ನೀರು ಹರಿಯಲು ಕಲ್ಲಿನ ಗೋಡೆಗೆ ಅಲ್ಲಲ್ಲಿ ರಂಧ್ರ ಬಿಟ್ಟಿದ್ದು, ಇದೇ ರಂಧ್ರವೊಂದರ ಮೂಲಕ ಶಂಕಿತರು ನೌಕಾನೆಲೆ ಒಳಗೆ ನುಸುಳಿದ್ದಾರೆ. ಈ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ ಎನ್ನಲಾಗುತ್ತಿದೆ.
ಗುರುವಾರ ಮುಂಜಾನೆ ಕದಂಬ ನೌಕಾನೆಲೆಯೊಳಗೆ ಮೂವರು ಶಂಕಿತರು ಕಾಣಿಸಿ ಕೊಂಡಿರುವುದನ್ನು ನೌಕಾನೆಲೆಯ ಭದ್ರತಾ ಸಿಬಂದಿ ಖಚಿತಪಡಿಸಿದ್ದಾರೆ. ಕೂಡಲೆ, ಕಾರವಾರ ನಗರ ಪೊಲೀಸರಿಗೆ ತಿಳಿಸಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪೊಲೀಸರು ನಾಕಾಬಂದಿ ಮಾಡಿ ಗಸ್ತು ತಿರುಗುತ್ತಿದ್ದಾರೆ. ಇನ್ನೊಂದೆಡೆ ನೌಕಾನೆಲೆಯ ಆವರಣ ಗೋಡೆ ಕೊರೆದಿರುವುದು ಕಂಡು ಬಂದಿದ್ದು, ಈ ಕಿಂಡಿಯನ್ನು ತತ್ಕ್ಷಣ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗಿದೆ. ನುಸುಳುಕೋರರು ಇದೇ ಕಿಂಡಿ ಮೂಲಕ ನೌಕಾನೆಲೆ ಪ್ರವೇಶಿಸಿರುವುದು ನೌಕಾನೆಲೆ ಸಿಬಂದಿಗೆ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನೌಕಾನೆಲೆಯ ಸಿಬಂದಿ ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ. ನೌಕಾನೆಲೆ ಸಿಬಂದಿಯನ್ನು ಹೆಚ್ಚು ಜಾಗೃತ ಸ್ಥಿತಿಯಲ್ಲಿ ಇಡಲಾಗಿದ್ದು, ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪಡೆಗಳು ಗಸ್ತು ಹೆಚ್ಚಿಸಿವೆ. ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಹೆಚ್ಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್ವೈ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ