ಕರಾವಳಿಯಲ್ಲಿ ಮುಸ್ಲಿಂ ಬಾಂಧವರಿಂದ ಸಂಭ್ರಮದ ಈದ್ ಆಚರಣೆ
Team Udayavani, Jun 25, 2017, 11:20 AM IST
ಮಂಗಳೂರು/ ಉಡುಪಿ/ಭಟ್ಕಳ : ಕರಾವಳಿಯಲ್ಲಿ ಶನಿವಾರ ಸಂಜೆ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಮುಸಲ್ಮಾನ ಬಾಂಧವರು ಭಾನುವಾರ ಶೃದ್ಧಾ ಭಕ್ತಿಯಿಂದ ಈದ್ ಹಬ್ಬವನ್ನು ಆಚರಿಸಿದರು.
ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸಚಿವ ಯು.ಟಿ.ಖಾದರ್ ಅವರು ಉಪಸ್ಥಿತರಿದ್ದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಉಡುಪಿ ಮತ್ತು ಭಟ್ಕಳದಲ್ಲೂ ಸಾಮೂಹಿಕ ನಮಾಝ್ ಮಾಡುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವ ಹಿನ್ನಲೆಯಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ರಂಜಾನ್ನ ಸರ್ಕಾರಿ ರಜೆ ನಾಳೆ ಸೋಮವಾರವಿದೆ. ಕರ್ನಾಟಕದ ಉಳಿದ ಭಾಗಗಳು ಮತ್ತು ವಿಶ್ವದೆಲ್ಲೆಡೆ ನಾಳೆ ರಂಜಾನ್ ಆಚರಿಸಲಾಗುತ್ತಿದೆ.