ವೈಚಾರಿಕ ಕರ್ನಾಟಕ’ ನಿರ್ಮಾಣಕ್ಕೆ ರಾಜಕಾರಣಿಗಳು ಅಡ್ಡಿ: ಆರೋಪ
Team Udayavani, Jul 24, 2017, 7:10 AM IST
ಬೆಂಗಳೂರು: ವೈಚಾರಿಕ ಕರ್ನಾಟಕ ನಿರ್ಮಾಣಕ್ಕೆ ನಾಡಿನ ಮಠ, ಮಂದಿರ,ಚರ್ಚ್, ಮಸೀದಿಗಳ ಜತೆಗೆ ಮೌಡ್ಯಗಳ ಮೂಟೆಗಳಂತಿರುವ ಕೆಲವು ರಾಜಕಾರಣಿಗಳು ಅಡ್ಡಿಯಾಗುತ್ತಿದ್ದಾರೆ ಎಂದು ನಿಡುಮಾಮಿಡಿ ಮಠದ
ವೀರಭದ್ರಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾನುವಾರ “ವೈಚಾರಿಕ ಕರ್ನಾಟಕ ನಿರ್ಮಾಣ ಚಿಂತನೆ, ಸಂಘಟನೆ ಮತ್ತು ಹೋರಾಟ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈಚಾರಿಕ
ಪ್ರಜ್ಞೆ ಮೂಡಿಸಬೇಕಿದ್ದ ಮಂದಿರ, ಮಸೀದಿ, ಚರ್ಚ್ಗಳು ಇಂದು ಮೌಡ್ಯಗಳ ಪೋಷಣೆ, ಅಧಿಕಾರದ ಓಲೈಕೆ, ಅಧಿಕಾರದ ಬೆನ್ನುಹತ್ತಲಾರಂಭಿಸಿವೆ. ಇವುಗಳ ಜತೆಗೆ ಮೌಡ್ಯಗಳ ಮೂಟೆಗಳಂತಿರುವ ಕೆಲ ರಾಜಕಾರಣಿಗಳೂ ವೈಚಾರಿಕ ಕರ್ನಾಟಕ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದರು.
ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ, ನಮ್ಮ ಸಚಿವರು ಮಂತ್ರಹಾಕಿ ಮಳೆತರಲು ಹೋದರೆ ಬರುತ್ತಾ? ಮೌಡ್ಯಕ್ಕೊಳಗಾಗಿರುವ ರಾಜಕಾರಣಿಗಳು ಮಧ್ಯರಾತ್ರಿ ಬೆತ್ತಲೆ ನಡೆಯಬೇಕು ಎಂದು ಮಂತ್ರವಾದಿ ಹೇಳಿದರೆ ಅದಕ್ಕೂ ಸಿದ್ಧರಾಗಿರುತ್ತಾರೆ. ವೈಚಾರಿಕ ಪ್ರಜ್ಞೆ ಇದ್ದಿದ್ದರೆ ಮೌಡ್ಯಗಳ ಮೊರೆ ಹೋಗುತ್ತಿರಲಿಲ್ಲ ಎಂದು ಮಳೆಗಾಗಿ ಪೂಜೆ ಮಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ