ಸಿದ್ದು ಸರ್ಕಾರಕ್ಕೆ ಧರ್ಮ ಸಂಕಟ
Team Udayavani, Jul 27, 2017, 7:30 AM IST
ಬೆಂಗಳೂರು: ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮದ ವಿಷಯದಲ್ಲಿ ರಾಜ್ಯ ಸರ್ಕಾರ ಗೊಂದಲಕ್ಕೆ ಬಿದ್ದಿದೆಯಾ ಎಂಬ ಅನುಮಾನ ಮೂಡುತ್ತಿವೆ. ಸಿಎಂ ಸಿದ್ದರಾಮಯ್ಯ ಅವರಿಗೆ ವೀರಶೈವ ಲಿಂಗಾಯತ ಮಹಾಸಭೆಯಿಂದ “ವೀರಶೈವ ಲಿಂಗಾಯತ’ ಪ್ರತ್ಯೇಕ ಧರ್ಮಕ್ಕಾಗಿ ಮನವಿ ಸಲ್ಲಿಸಲಾಗಿದೆ.
ಮಾತೆ ಮಹಾದೇವಿ ಪೀಠಾಧ್ಯಕ್ಷರಾಗಿರುವ ಬಸವ ಧರ್ಮ ಪೀಠದಿಂದ “ಲಿಂಗಾಯತ ಧರ್ಮಕ್ಕಾಗಿ ಮನವಿ ಸಲ್ಲಿಸಲಾಗಿದೆ. ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಧರ್ಮಕ್ಕೆ ಯಾವುದೇ ಮನವಿ ಬಂದಿಲ್ಲ. ಮನವಿ ಬಂದ ಮೇಲೆ ನೋಡೋಣ ಎಂದು ಹೇಳಿರುವುದು ಸರ್ಕಾರ ಗೊಂದಲದಲ್ಲಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಗೆ ಸಲ್ಲಿಕೆಯಾಗಿರುವ ಪ್ರತ್ಯೇಕ ಮನವಿಗಳಲ್ಲಿ ವೈರುಧ್ಯ ಇದ್ದು, ಇದರಲ್ಲಿ ಯಾವುದನ್ನು ಪರಿಗಣಿಸಬೇಕು ಎಂಬ ಗೊಂದಲ ದಲ್ಲಿ ಸರ್ಕಾರ ಸಿಲುಕಿದಂತಿದೆ.
ಇರುವವರೆಲ್ಲಾ ಲಿಂಗಾಯತರೇ: ಮಾತೆ ಮಹಾದೇವಿ ಮಾಡಿರುವ ಮನವಿಯಲ್ಲಿ ಕರ್ನಾಟಕದಲ್ಲಿ ಯಾರೂ ವೀರಶೈವರಿಲ್ಲ. ಇಲ್ಲಿರುವ ವರೆಲ್ಲರೂ ಲಿಂಗಾಯತ ಧರ್ಮದ ಅನುಯಾಯಿಗಳೇ. ವೀರಶೈವ ಎಂಬುದು ಶೈವದ ಒಂದು ಪಂಥವಾಗಿರುವುದರಿಂದ ವೀರಶೈವ ಮತ್ತು ಲಿಂಗಾಯತ ಒಂದೇ ಅಲ್ಲ. ವೀರಶೈವ ಮಹಾಸಭಾ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಲ್ಲ. ವೀರಶೈವ ಪದವನ್ನು ಲಿಂಗಾಯತ ಪದಕ್ಕೆ ಪರ್ಯಾಯವಾಗಿ ಬಳಸುವುದರಿಂದ ಅದಕ್ಕೆ ಮಾನ್ಯತೆ ಸಿಗಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅವರ ಮನವಿಗೆ ಮುಖ್ಯಮಂತ್ರಿ ಕಚೇರಿಯಿಂದ ಪ್ರತಿಕ್ರಿಯೆಯೂ ದೊರೆತಿದ್ದು, ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿ ಲಿಂಗಾಯತ ಮಹಾಸಭಾ ಅಧ್ಯಕ್ಷರಿಗೆ ಪತ್ರ ಬರೆದು,ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿಗೆ ಕಳುಹಿಸಿ ಕೊಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಆದರೆ, ಮುಖ್ಯಮಂತ್ರಿ ಯಾವುದೇ ಮನವಿ ಬಂದಿಲ್ಲ ಎಂದು ಹೇಳಿರುವುದು ಸಂಶಯಕ್ಕೆ ಎಡೆ ಮಾಡಿಕೊಡು ವಂತಿದೆ. ವೀರಶೈವ ಮಹಾಸಭೆಯೂ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದು, ವೀರಶೈವ ಲಿಂಗಾಯತ ಧರ್ಮ, ಸಮಾನತೆ,
ಸಾಮಾಜಿಕ ನ್ಯಾಯ ತತ್ವಗಳ ಆಧಾರದಲ್ಲಿ ನಿರ್ಮಾಣವಾಗಿದೆ.
ಇಷ್ಟಲಿಂಗ ಧಾರಣೆಯ ವಿಶಿಷ ಸಂಸ್ಕೃತಿ ಹೊಂದಿರುವ ಈ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಆದರೆ, ಅವರ ಮನವಿಗೆ ಸಿಎಂ ಕಚೇರಿಯಿಂದ ಯಾವುದೇ ಉತ್ತರ ಹೋಗಿಲ್ಲ. ಹೀಗಾಗಿ ವೀರಶೈವ ಮಹಾಸಭಾದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೂಂದು ಮನವಿ ಸಲ್ಲಿಸಿ, ತಮ್ಮ ಮನವಿಯನ್ನು ಕೇಂದ್ರ ಸರ್ಕಾರಕ್ಕೆ
ಕಳುಹಿಸಿಕೊಡುವಂತೆ ಕೋರಲು ತೀರ್ಮಾನಿಸಿದ್ದಾರೆ.
ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ನಮಗೆ ಮನವಿಯೇ ಬಂದಿಲ್ಲ. ಮನವಿ ಬಾರದಿದ್ದರೆ ನಾವು ಎಲ್ಲಿ ಶಿಫಾರಸ್ಸು ಮಾಡೋದು. ಮೊದಲು ಅವರು ಸ್ವತಂತ್ರ ಧರ್ಮಕ್ಕೆ ಮನವಿ ಮಾಡಲಿ, ಆಮೇಲೆ ನೋಡೋಣ.
– ಸಿದ್ದರಾಮಯ್ಯ, ಸಿಎಂ
ಮಾತೆ ಮಹಾದೇವಿ ವೀರಶೈವರೊಂದಿಗೆ ಸಂಬಂಧ ಇಲ್ಲ ಎಂದು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಶೀಘ್ರವೇ ಸ್ವಾಮೀಜಿಗಳ ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡ್ತೀವಿ.
– ಶಾಮನೂರು
ಶಿವಶಂಕರಪ್ಪ, ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ