ರಾಯರ ಸನ್ನಿಧಿಯಲ್ಲಿ ದಾಖಲೆಯ ಗಾನಸುಧೆ
Team Udayavani, Aug 21, 2017, 10:15 AM IST
ರಾಯಚೂರು: 2500ಕ್ಕೂ ಅಧಿಕ ಗಾಯಕರು ಏಕಕಾಲಕ್ಕೆ ಹರಿದಾಸ ಕೀರ್ತನೆಗಳನ್ನು ಹಾಡುವ ಮೂಲಕ ಮಂತ್ರಾಲಯದಲ್ಲಿ ಗಾನ ಸುಧೆ ಹರಿಸಿದರೆ, ಇಂಥ ಅಮೋಘ ಕ್ಷಣವನ್ನು ಹಲವು ಸಂಸ್ಥೆಗಳು ದಾಖಲೆ ಪುಟಕ್ಕೆ ಸೇರಿಸಿದವು.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ಭಾನುವಾರ ಹರಿದಾಸ ಕೀರ್ತನೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕರ್ನಾಟಕ ಸೇರಿ ಏಳು ರಾಜ್ಯಗಳಿಂದ ಆಗಮಿಸಿದ್ದ ಹಲವು ಭಜನಾ ಮಂಡಳಿಗಳು, ಸಹಸ್ರಾರು ಮಹಿಳೆಯರು 9 ವಿಭಿನ್ನ ದಾಖಲೆಗಳ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡಿದರು. ಹರಿದಾಸರ ಆಂಜನೇಯ ಕೀರ್ತನೆಗಳ ಗಾಯನದಲ್ಲಿ ಸುಮಾರು 100 ಭಜನಾ ಮಂಡಳಿಗಳು, 2000 ಮಹಿಳಾ ಸದಸ್ಯರು ಪಾಲ್ಗೊಂಡು ಗಮನ ಸೆಳೆದರು. ನಿರಂತರ ಗಾಯನದಲ್ಲಿ ಕನ್ನಡ ಭಾಷಾ ಜ್ಞಾನ ಇಲ್ಲದವರು ಕೂಡ ದಾಸರ ಕೀರ್ತನೆಗಳನ್ನು ಕಂಠಪಾಠ ಮಾಡಿ ಹಾಡುವ ಮೂಲಕ ಗಮನ ಸೆಳೆದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದಾಖಲೆಗಳಿಗೆ ಸಂಬಂಧಿ ಸಿದಂತೆ ಪ್ರಮಾಣ ಪತ್ರ ವಿತರಿಸಲಾಯಿತು. ಗುರು ಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ನ ವಿಶೇಷ ಅಧಿ ಕಾರಿ ಅಪ್ಪಣ್ಣಾಚಾರ್ಯ, ದಾಸ ಸಾಹಿತ್ಯ ಪ್ರಾಜೆಕ್ಟ್ನ ಸಹಾಯಕ ನಿರ್ದೇಶಕ ಪಿ.ನಾರಾಯಣದಾಸ, ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸರಾವ್, ಗುರು ಸಾರ್ವಭೌಮ ವಿದ್ಯಾಪೀಠದ ಪ್ರಾಚಾರ್ಯ ಡಾ| ವಾದಿರಾಜಾಚಾರ್ಯ, ಸುಳಾದಿ ಹನುಮೇಶಾಚಾರ್ಯ ಹಾಗೂ ಶ್ರೀಮಠದ ಸಿಬ್ಬಂದಿ, ದಾಖಲೆ ಸಂಸ್ಥೆಗ ಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಒಂಭತ್ತು ದಾಖಲೆಗಳು
ವಿಶ್ವದ ವಿವಿಧ 9 ದಾಖಲೆಗಳನ್ನು ಏಕಕಾಲಕ್ಕೆ ನಿರ್ಮಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾನುವಾರ ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಆರಂಭಿಸಲಾಯಿತು. ವಿವಿಧ ಭಜನಾ ಮಂಡಳಿಗಳ ಪುರುಷರು, ಮಹಿಳೆಯರು ಸೇರಿ 2500 ಗಾಯಕರು ಆಂಜನೇಯ ಸ್ವಾಮಿಯ 108 ಕೀರ್ತನೆಗಳನ್ನು ಹಾಡಿದರು. ಒಂದರ ನಂತರ ಒಂದರಂತೆ ಕೀರ್ತನೆ ಹಾಡಲಾಯಿತು. ತೆಲುಗು ಬುಕ್ ಆಫ್ ರೆಕಾರ್ಡ್, ಇಂಡಿಯನ್ ಟ್ಯಾಲೆಂಟ್ ಆರ್ಗನೈಸೇಶನ್ ರೆಕಾರ್ಡ್, ವಂಡರ್ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್ ಇಂಡಿಯಾ, ಜೀನಿಯಸ್ ಬುಕ್ ಆಫ್ ರೆಕಾರ್ಡ್, ಮಿರಾಕಲ್ ವರ್ಲ್ಡ್ ರೆಕಾರ್ಡ್, ವರ್ಲ್ಡ್ ಬುಕ್ ಆಫ್ ಇಂಡಿಯಾ, ಗೋಲ್ಡ್ನ ಸ್ಟಾರ್ ರೆಕಾರ್ಡ್, ಹೈರೇಂಜ್ ಬುಕ್ ಆಫ್ ರೆಕಾರ್ಡ್, ಮಾರಬಲೆಸ್ ರೆಕಾರ್ಡ್ ಸೇರಿ ಒಟ್ಟು ಒಂಭತ್ತು ದಾಖಲೆಗಳಿಗೆ ಕಾರ್ಯಕ್ರಮ ಸೇರ್ಪಡೆಯಾಯಿತು. ಇದಕ್ಕೆ ವಿವಿಧ ವಾದ್ಯಮೇಳಗಳು ಸಾಥ್ ನೀಡಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ