ಪತ್ರಕರ್ತೆ ಗೌರಿ ಲಂಕೇಶ್ ಯಾರು ಎಂಬುದೇ ಗೊತ್ತಿಲ್ಲ
Team Udayavani, Aug 31, 2018, 6:25 AM IST
ಬೆಳಗಾವಿ: “ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನನ್ನ ಪತಿಯನ್ನು ಎಸ್ಐಟಿಯವರು ಯಾವುದೇ ಆಧಾರವಿಲ್ಲದೇ ಬಂಧಿಸಿದ್ದು, ಗೌರಿ ಲಂಕೇಶ ಯಾರೆಂಬುದೇ ನನ್ನ ಪತಿಗೆ ಗೊತ್ತಿಲ್ಲ’ ಎಂದು ಭರತ ಕುರಣೆ ಪತ್ನಿ ಗಾಯತ್ರಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಗೌರಿ ಲಂಕೇಶ್ ಹತ್ಯೆ ಪ್ರಕರಣದ ಗಂಧ ಗಾಳಿಯೇ ಗೊತ್ತಿಲ್ಲದ ನನ್ನ ಪತಿಯನ್ನು ಎಸ್ಐಟಿ ಬಂಧಿಸಿದೆ. ವಿಚಾರಣೆಗೆ ಕರೆದುಕೊಂಡು ಹೋಗಿ ಮಾನಸಿಕ ಕಿರುಕುಳ ನೀಡುತ್ತಿದೆ. ದುಡಿದು ತಿನ್ನುತ್ತಿದ್ದ ನಮ್ಮ ಬದುಕಿಗೆ ಪೊಲೀಸರು ಕಲ್ಲು ಹಾಕಿದ್ದಾರೆ’ ಎಂದು ಆರೋಪಿಸಿ ಕಣ್ಣೀರು ಸುರಿಸಿದರು.
“ಪತಿಯನ್ನು ಬಂಧಿಸಿ ಮಾನಸಿಕ ಹಿಂಸೆ ನೀಡುತ್ತಿರುವ ಮಾಹಿತಿ ದೊರೆತಿದೆ. ಎಂಟು ತಿಂಗಳ ಗರ್ಭಿಣಿಯಾದ ನನಗೂ ಇದು ಪರೋಕ್ಷವಾಗಿ ಹಿಂಸೆ ಕೊಟ್ಟಂತಾಗಿದೆ. ಒಂದು ತಿಂಗಳಿಂದ ತಂದೆ ಇಲ್ಲದೆ ನನ್ನ ಇಬ್ಬರು ಹೆಣ್ಣು ಮಕ್ಕಳೂ ತೀವ್ರವಾಗಿ ನೊಂದಿದ್ದಾರೆ. ಅಮಾಯಕರಾದ ನನ್ನ ಪತಿಯನ್ನು ವಾಪಸ್ ಕಳುಹಿಸಬೇಕು’ ಎಂದು ಮನವಿ ಮಾಡಿದರು.
“ನನ್ನ ಪತಿ 2013ರ ಅಕ್ಟೋಬರ್ 31ರಂದು ಖಾನಾಪುರ ತಾಲೂಕಿನ ಚಿಕಲೆ ಎಂಬಲ್ಲಿ 3 ಎಕರೆ ಜಾಗ ಖರೀದಿಸಿದ್ದು, 2015ರ ಜನವರಿ 26ರಂದು ರೆಸಾರ್ಟ್ ಆರಂಭಿಸಿದ್ದರು. ಒಂದೂವರೆ ವರ್ಷಗಳ ಕಾಲ ರೆಸಾರ್ಟ್ ಚೆನ್ನಾಗಿಯೇ ನಡೆದಿತ್ತು. ಬಳಿಕ ಜಾಗ ಕೃಷಿಯೇತರ (ಎನ್ಎ)ಅಲ್ಲ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯವರು 2016, ಡಿ.27ರಂದು ತೆರವುಗೊಳಿಸಿದ್ದಾರೆ. ರೆಸಾರ್ಟ್ ಬಂದ್ ಮಾಡಿರುವಾಗ ಅಲ್ಲಿ ಬಂದೂಕು ತರಬೇತಿ ನೀಡಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿದ್ದು, ಮನಸ್ಸಿಗೆ ತೀವ್ರ ನೋವು ತಂದಿದೆ’ ಎಂದು ಹೇಳಿದರು.
ಎಸ್ಐಟಿ ಈಗ ಬಂಧಿಸಿರುವ ಸಾಗರ, ನನ್ನ ಪತಿಯ ಸ್ನೇಹಿತ. ನಮ್ಮ ರೆಸಾರ್ಟ್ನಲ್ಲಿ ಕೆಲಸ ಮಾಡುವಾಗ ಅನೇಕ ಸಲ ಅವರಿಗೆ ಕರೆ ಮಾಡಿದ್ದನ್ನೇ ಆಧಾರವಾಗಿಟ್ಟುಕೊಂಡು ಗೌರಿ ಹತ್ಯೆ ಪ್ರಕರಣಕ್ಕಾಗಿ ಸಂಪರ್ಕಿಸಲಾಗಿದೆ ಎಂಬ ಸುಳ್ಳು ಆರೋಪ ಹೊರಿಸಿ ಅವರನ್ನೂ ಬಂಧಿಸಲಾಗಿದೆ. ಅಂದರೆ, ಭರತ ಕುರಣೆಗೆ ಪರಿಚಯವಿರುವವರೆಲ್ಲರನ್ನೂ ಬಂಧಿಸುತ್ತಾರೆಯೇ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ನನ್ನ ಮಗ ತಪ್ಪೇ ಮಾಡಿಲ್ಲ:
ತಾಯಿ ರೇಖಾ ಕುರಣೆ ಮಾತನಾಡಿ, “ಕರ್ಪೂರ ಹಾಗೂ ಅಗರಬತ್ತಿ ಮಾರುತ್ತ ಕಷ್ಟಪಟ್ಟು ಬೆಳೆದಿರುವ ನನ್ನ ಮಗ ಭರತ, ರೆಸಾರ್ಟ್ ಉದ್ಯೋಗ ನಡೆಸಿ ಈಗ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದಾನೆ. ರೆಸಾರ್ಟ್ನಲ್ಲಿ ಬಂದೂಕು ತರಬೇತಿ ಎಂಬ ಸುಳ್ಳು ಸುದ್ದಿ ಹಬ್ಬಿಸಿ ನಮ್ಮ ಮನಸ್ಸಿಗೆ ತೀವ್ರ ನೋವುಂಟು ಮಾಡಲಾಗಿದೆ. ನನ್ನ ಮಗ ತಪ್ಪೇ ಮಾಡಿಲ್ಲ ಎಂದರೆ ಬಂಧಿಸಿದ್ದು ಏಕೆ?’ ಎಂದು ಪ್ರಶ್ನಿಸಿದರು.
ಭರತನನ್ನು ಭೇಟಿ ಮಾಡಿಸಲು ಎಸ್ಐಟಿಯವರು ಬಿಡುತ್ತಿಲ್ಲ. ಮೂರು ಸಲ ಹೋದರೂ ನಮ್ಮ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಭರತನಿಗೆ ಬೇಕಾದ ವಕೀಲನನ್ನು ನೇಮಿಸಿಕೊಳ್ಳಲು ಎಸ್ಐಟಿಯವರು ಬಿಡಲಿಲ್ಲ. ಮಾನಸಿಕವಾಗಿ ತೀವ್ರ ನೊಂದಿರುವ ಭರತನ ಪಾರದರ್ಶಕ ವಿಚಾರಣೆ ನಡೆಯಬೇಕು.
– ಚೇತನ ಮನೇರಿಕರ, ಭರತ ಕುರಣೆ ಪರ ವಕೀಲ.
ಅಮಾಯಕ ಹಿಂದೂ ಯುವಕರ ಬಂಧನ ಖಂಡಿಸಿ ಶಿವಮೊಗ್ಗ, ಉಡುಪಿ ಹಾಗೂ ಮಂಗಳೂರಿನಲ್ಲಿ ಸೆ.4ರಂದು, ಸೆ.5ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ರ್ಯಾಲಿ ಆಯೋಜಿಸಲಾಗಿದೆ. ಸೆ.1ರಂದು ಬೆಳಗಾವಿ ನಗರದ ಧರ್ಮವೀರ ಸಂಭಾಜಿ ಚೌಕ್ದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
– ಋಷಿಕೇಶ ಗುರ್ಜರ, ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್