ಆರೆಸ್ಸೆಸ್, ಬಿಜೆಪಿ ಟೀಕಿಸಿದರೆ ಪ್ರಕರಣ ದಾಖಲು: ಜೋಶಿ
Team Udayavani, Sep 15, 2017, 8:00 AM IST
ಬಾಗಲಕೋಟೆ: ಪತ್ರಕರ್ತೆ, ಎಡಪಂಥೀಯ ವಿಚಾರಧಾರೆಯ ಗೌರಿ ಲಂಕೇಶ್ ಹತ್ಯೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಆರೋಪ ಮಾಡಿದರೆ ಅಂಥವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಸಂಸದ ಪ್ರಹ್ಲಾದ ಜೋಶಿ ಎಚ್ಚರಿಕೆ ನೀಡಿದರು.
ಸುದ್ದಿಗಾರರ ಬಳಿ ಮಾತನಾಡಿ, ಗೌರಿ ಹತ್ಯೆ ಪ್ರತಿರೋಧ ಸಮಾವೇಶದಲ್ಲಿ ಪ್ರಧಾನಿ ಮೋದಿ ಮತ್ತು ಆರ್ಎಸ್ಎಸ್ ಮೇಲೆ ಆರೋಪ ಮಾಡಿರುವುದು ಅಕ್ಷಮ್ಯ. ಆರೋಪ ಮಾಡಿದವರಿಗೆ ನೇರವಾಗಿ ಎಚ್ಚರಿಕೆ ನೀಡುತ್ತಿದ್ದೇನೆ. ಅನಗತ್ಯವಾಗಿ ಆರ್ಎಸ್ಎಸ್, ಮೋದಿ ಹೆಸರು ಬಳಸಿದರೆ ಅಂಥವರ ವಿರುದ್ಧ ನಾನೇ ಕೇಸ್ ದಾಖಲಿಸುತ್ತೇನೆ. ತುಮಕೂರು ಸಿದ್ಧಗಂಗಾ ಶ್ರೀಗಳ ಬಗ್ಗೆ ಮಾತೆ ಮಹಾದೇವಿ ಅವರು ಭಾರತರತ್ನ ಆಮಿಷದ ಆರೋಪ ಸರಿಯಲ್ಲ. ಈ ರೀತಿ ಸ್ವಾಮೀಜಿಗಳನ್ನು ವಿವಾದದಲ್ಲಿ ಎಳೆದು ತಂದು, ಆಸೆ-ಆಮಿಷ ಆರೋಪ ಮಾಡೋದು ಶ್ರದ್ಧಾಭಂಗ ಇಂತಹ ಕೆಲಸ ಆಗಬಾರದು ಎಂದರು