ಬೆಳೆ ಸಾಲ ವಿತರಣೆಯಲ್ಲಿ ಸಾಲು ಸಾಲು ಲೋಪ
Team Udayavani, Sep 25, 2017, 9:13 AM IST
ಬೆಂಗಳೂರು: ಬೆಳೆ ಸಾಲ ರೈತರಿಗೆ ಬಿತ್ತನೆ ಕಾಲಕ್ಕೆ ಸಕಾಲದಲ್ಲಿ ಸಿಗುತ್ತಿಲ್ಲ. ಬೆಳೆ ಸಾಲ ಪ್ರಮಾಣವೂ ಕಡಿಮೆ. ಸಾಲ ವಿತರಣೆಯಲ್ಲಿ ಮಹಿಳೆಯರು, ವಿಕಲಚೇತನರಿಗೆ ಸಿಗದ ಆದ್ಯತೆ. ಕೆಲವೆಡೆ ರೈತರಿಗೆ ನೇರವಾಗಿ ನಗದು ರೂಪದಲ್ಲಿ ಸಾಲ ವಿತರಣೆ. ಸಾಲ ಮಂಜೂರಾತಿಗಾಗಿ ರೈತರಿಂದ ಹೆಚ್ಚು ಹಣ ವಸೂಲಿ ಮಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳು… ಇದು ರಾಜ್ಯ ಸರ್ಕಾರದ ಬೆಳೆ ಸಾಲ ವಿತರಣೆ ವ್ಯವಸ್ಥೆಯಲ್ಲಿನ ಪ್ರಮುಖ ಲೋಪಗಳು.
ಸರ್ಕಾರದ ಅಧೀನದಲ್ಲಿನ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಮೀಕ್ಷಾ ವರದಿಯು ಬೆಳೆ ಸಾಲ ವಿತರಣೆಯಲ್ಲಿನ ಲೋಪಗಳಿಗೆ ಕನ್ನಡಿ ಹಿಡಿದಿದ್ದು, ಸುಧಾರಣೆಗೆ ಕೆಲ ಶಿಫಾರಸುಗಳನ್ನು ಸಲ್ಲಿಸಿದೆ. 2010-11ರಿಂದ 2013-14ನೇ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರ ವಿತರಿಸಿದ ಬೆಳೆ ಸಾಲ ಸಮರ್ಪಕವಾಗಿ ರೈತರಿಗೆ ತಲುಪಿದೆಯೇ, ಇದರಿಂದ ರೈತರಿಗೆ ಅನುಕೂಲವಾಗಿ ಆದಾಯ ಹೆಚ್ಚಾಗಿದೆಯೇ ಎಂಬುದನ್ನು ತಿಳಿಯಲು ಪ್ರಾಧಿಕಾರ ಸಮೀಕ್ಷೆ ಕೈಗೊಂಡಿತ್ತು. ರಾಜ್ಯದ 4 ಕಂದಾಯ ವಿಭಾಗಗಳಿಂದ ತಲಾ 2 ಜಿಲ್ಲೆಯನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿತ್ತು. ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 20 ಪ್ರಾಥಮಿಕ ಕೃಷಿ ಪತ್ತಿನ ಸಂಸ್ಥೆಗಳು (ಪಿಎಸಿಎಸ್) ಹಾಗೂ 2 ಡಿಸಿಸಿ ಬ್ಯಾಂಕ್ ಗಳನ್ನು ಆಯ್ಕೆ ಮಾಡಿಕೊಂಡು ಒಟ್ಟು 2544 ರೈತರನ್ನು ಗುರುತಿಸಿ ಸಮೀಕ್ಷೆಗೆ ಒಳಪಡಿಸಿತ್ತು.
ಕೆಲ ಯಶೋಗಾಥೆ: ಬೆಳೆ ಸಾಲ ವಿತರಣೆಯಲ್ಲಿ ಕೇವಲ ಲೋಪಗಳಷ್ಟೇ ಅಲ್ಲದೇ ಕೆಲ ಪ್ರಯೋಜನಗಳಾಗಿರುವ ಬಗ್ಗೆಯೂ ವರದಿಯಲ್ಲಿ ದಾಖಲಿಸಿದೆ. ಹೈಬ್ರಿಡ್ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಮೂಲಕ ಬೆಳೆ ಪದ್ಧತಿ
ಬದಲಾವಣೆಯಿಂದ ಉತ್ಪಾದಕತೆಯಲ್ಲಿ ಹೆಚ್ಚಳವಾಗಿದೆ ಎಂದು ಶೇ.60 ರೈತರು ತಿಳಿಸಿದ್ದಾರೆ. ಹೆಚ್ಚಿನ ಸರಾಸರಿ ಸಾಲವನ್ನು ಮೈಸೂರು ವಿಭಾಗದಲ್ಲಿ ಅಲ್ಪಸಂಖ್ಯಾತರು ಪಡೆದಿದ್ದರೆ, ಪ.ಜಾತಿ, ಪ. ಪಂಗಡದವರ ಪೈಕಿ ಹೆಚ್ಚು ಸರಾಸರಿ ಸಾಲ ಪಡೆದವರೂ ಸಹ ಮೈಸೂರು ವಿಭಾಗದವರೇ ಆಗಿರುವುದು ವಿಶೇಷ. ಕಲಬುರಗಿ ವಿಭಾಗದಲ್ಲಿ ಅತಿ ಕಡಿಮೆ ಸರಾಸರಿ ಸಾಲ (21,793 ರೂ.)
ವಿತರಣೆಯಾಗಿದೆ.
ಶಿಫಾರಸುಗಳು: ಬೆಳೆ ಸಾಲ ಪಡೆಯಲು ವಿಧಿಸಿರುವ ದಾಖಲೆಗಳ ಸಂಖ್ಯೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ರೈತರ ಬೆಳೆಗೆ ಕನಿಷ್ಠ ಖಾತರಿ ಬೆಲೆ ಸಿಗುವಂತೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಸಾಲ ಮರುಪಾವತಿಗೂ ಅನುಕೂಲವಾಗಲಿದೆ. ವೈದ್ಯನಾಥನ್ ನಿಧಿಯನ್ನು ನಿರ್ದಿಷ್ಟ ಉದ್ದೇಶಕ್ಕಷ್ಟೇ ವಿನಿಯೋಗಿಸಬೇಕೆ ಹೊರತು ಡಿಸಿಸಿ ಬ್ಯಾಂಕ್ಗಳಲ್ಲಿ ಠೇವಣಿಯಿಟ್ಟು, ಬಡ್ಡಿ ಗಳಿಸಲು ಬಳಸಬಾರದು. ಪಿಎಸಿಎಸ್ಗಳಲ್ಲಿ ಒಂದೇ ಸೂರಿನಡಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ರಿಯಾಯ್ತಿ ದರದಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸಬೇಕು. ವಾಸ್ತವವಾಗಿ ಬೇಸಾಯದಲ್ಲಿ ತೊಡಗುವ ಅರ್ಹ ರೈತರಿಗೆ ಬೆಳೆ ಸಾಲ ಸಿಗುವಂತಾಗಬೇಕು.
ಸಕಾಲಕ್ಕೆ ಸಿಗದ ಬೇಸಾಯ ಸಾಲ
ಬೇಸಾಯ ಸಾಲ ರೈತರಿಗೆ ಸಕಾಲದಲ್ಲಿ ಸಿಗದಿರುವುದು ಬೆಳಕಿಗೆ ಬಂದಿದ್ದು, ಯೋಜನೆಯ ಮೂಲ ಉದ್ದೇಶವೇ ಈಡೇರದಂತಾಗಿದೆ. ಸಮೀಕ್ಷೆಗೆ ಒಳಗಾದ ರೈತರಲ್ಲಿ ಶೇ.66 ಮಂದಿ ಸಕಾಲದಲ್ಲಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. 31 ಪ್ರಾಥಮಿಕ ಕೃಷಿ ಪತ್ತಿನ ಸಂಸ್ಥೆಗಳಲ್ಲಿ ರಸಗೊಬ್ಬರ, ಕೀಟನಾಶಕಗಳ ಸಂಗ್ರಹಕ್ಕೆ ಸೂಕ್ತ ಗೋದಾಮು ವ್ಯವಸ್ಥೆ ಇಲ್ಲದಿರುವುದು ಗೊತ್ತಾಗಿದೆ. ಶೇ.5 ರೈತರಿಗೆ ನೇರವಾಗಿ
ನಗದು ರೂಪದಲ್ಲಿ ಸಾಲ ವಿತರಿಸಿದ್ದು, ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿರುವುದನ್ನು ಉಲ್ಲೇಖೀಸಲಾಗಿದೆ. ಸರ್ಕಾರದ ಆದೇಶದ ಹೊರತಾಗಿಯೂ ಶೇ.90 ಪ್ರಾಥಮಿಕ ಕೃಷಿ ಪತ್ತಿನ ಸಂಸ್ಥೆಗಳು ಶೇ.25 ಹೊಸ ರೈತರಿಗೆ ಬೆಳೆ ಸಾಲ ವಿತರಿಸುವಲ್ಲಿ ವಿಫಲವಾಗಿವೆ. ಕೇವಲ ಶೇ.10 ಹೊಸ ರೈತರಿಗಷ್ಟೇ ಸಾಲ ನೀಡಿವೆ. ಬೆಳೆ ಸಾಲ ಮಂಜೂರು ಮಾಡಲು ಪಿಎಸಿಎಸ್ಗಳು ಹಣ ಪಡೆಯುತ್ತವೆ ಎಂಬುದಾಗಿ ಶೇ.30 ಫಲಾನುಭವಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
MUST WATCH
ಹೊಸ ಸೇರ್ಪಡೆ
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!