ಹೆಬ್ಳೀಕರ್‌ ರಿಟರ್ನ್ಸ್! ಚಿಂತನ ಮಂಥನ


Team Udayavani, Feb 17, 2017, 3:45 AM IST

Mana-Manthana-(19).jpg

“ಡಾ. ಅಶೋಕ್‌ ಪೈ ತುಂಬಾ ಇಷ್ಟಪಟ್ಟು ನಿರ್ಮಿಸಿದ ಸಿನಿಮಾವಿದು. ಅವರೊಂದಿಗೆ ಇದು ನನ್ನ ನಾಲ್ಕನೇ ಚಿತ್ರ. ಯುರೋಪ್‌ನಿಂದ ಫೋನ್‌ ಮಾಡಿ, “ಸಿನಿಮಾವನ್ನು ನಾನು ಬಂದ ಮೇಲೆ ರಿಲೀಸ್‌ ಮಾಡೋಣ’ ಅಂತ ಹೇಳಿದ್ದರು. ಆದರೆ, ಅವರು ಅಲ್ಲೇ ಕೊನೆಯುಸಿರೆಳೆದರು. ಹೀಗಾಗಿ ಸಿನಿಮಾ ರಿಲೀಸ್‌ ಆಗೋದು ಸ್ವಲ್ಪ ತಡವಾಯ್ತು …’ ಹೀಗೆ ಹೇಳಿ ಕ್ಷಣ ಕಾಲ ಮೌನಕ್ಕೆ ಶರಣಾದರು ನಿರ್ದೇಶಕ ಕಮ್‌ ನಟ ಸುರೇಶ್‌ ಹೆಬ್ಳೀಕರ್‌.

ಅವರು ಮಾತನಾಡಿದ್ದು “ಮನ ಮಂಥನ’ ಚಿತ್ರದ ಬಗ್ಗೆ. “ಕಳೆದ ಒಂದೂವರೆ ದಶಕದ ಬಳಿಕ ನಿರ್ದೇಶಿಸಿರುವ ಚಿತ್ರವಿದು. ಹಾಗಾಗಿ, ಒಳ್ಳೆಯ ವಿಷಯದೊಂದಿಗೇ ಪುನಃ ಬಂದಿದ್ದೇನೆ. ಇದು ಬದುಕಿನಲ್ಲಿರುವ ಕೆಲ ಸತ್ಯ ಘಟನೆಗಳನ್ನಾಧರಿಸಿದ ಚಿತ್ರ. ಈಗಿನ ಯುವಕರ ಬಯಕೆ, ಕನಸು ಮತ್ತು ಅವರ ಚಿಂತನೆ ಮಾರ್ಗ, ಭವಿಷ್ಯ ಇವೆಲ್ಲವೂ ಪೋಷಕರಿಗೆ ಅರ್ಥ ಆಗೋದು ಕಷ್ಟ. ಅಂತಹ ಅರ್ಥವಾಗುವ ಅವಕಾಶದ ವಂಚನೆಯೇ ಒಂದು ರೀತಿಯ ಸಂತಾಪ ಮತ್ತು ಘರ್ಷಣೆಗೆ ಕಾರಣ. ಇಂತಹ ಹಲವು ಸನ್ನಿವೇಶಗಳು ಚಿತ್ರದಲ್ಲಿ ಕಾಣಸಿಗುತ್ತವೆ. ಮನೋವಿಜ್ಞಾನಕ್ಕೆ ಸಂಬಂಧಿಸಿದ ಎಳೆಯೇ ಚಿತ್ರದ ಹೈಲೆಟ್‌ …’

“ಗ್ಯಾಪ್‌ ಬಳಿಕ ಮಾಡಿದ ಸಿನಿಮಾವಾದ್ದರಿಂದ ತಂಬಾ ಗಂಭೀರ ವಿಷಯದ ಜತೆಯಲ್ಲಿ, ಸಂದೇಶ ಸಾರುವ ಅಂಶಗಳೂ ಇವೆ. ಅಶೋಕ್‌ ಪೈ ಅವರೇ ಕೊಟ್ಟ ಕಥೆಗೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದೇನೆ. ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರೂ ನೈಜವಾಗಿ ಅಭಿನಯಿಸಿರುವುದು ಚಿತ್ರದ ಪ್ಲಸ್‌. ಇದೊಂದು ಚಿಕ್ಕ ಬಜೆಟ್‌ ಚಿತ್ರವಾದರೂ, ಈಗಿನ ಯೂತ್ಸ್ಗಿರುವ ತಳಮಳ, ಪೋಷಕರಲ್ಲಿರುವ ಆತಂಕ ಇತ್ಯಾದಿಗಳನ್ನು ಬಿಚ್ಚಿಡುವ ಮೂಲಕ ಒಂದಷ್ಟು ಪರಿಹಾರ ಸೂಚಿಸುವ ಅಂಶಗಳನ್ನು ಹೊಂದಿದೆ’ ಎನ್ನುತ್ತಾರೆ ಸುರೇಶ್‌ ಹೆಬ್ಳೀಕರ್‌.

ರಮೇಶ್‌ ಭಟ್‌ಗೆ ಹೆಬ್ಳೀಕರ್‌ ಜತೆ ಸಮಾರು ನಾಲ್ಕು ದಶಕದ ಪಯಣವಂತೆ. “ಇಲ್ಲಿ ಎಲ್ಲವೂ ಒಳಗೊಂಡಿದೆ. ಇಲ್ಲಿ ಹೀರೋ ಇಪ್ಪತ್ತು ಜನರಿಗೆ ಹೊಡೆದುರುಳಿಸಲ್ಲ. ಐಟಂ ಸಾಂಗ್‌ ಇಲ್ಲ. ಗ್ಲಾಮರ್‌ ಇಲ್ಲ. ಹೆವಿ ಮೆಲೋಡ್ರಾಮವೂ ಇಲ್ಲ. ಒಂದು ಸಹಜವಾದ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಒಂದು ಚೌಕಟ್ಟಿನಲ್ಲಿ ನನ್ನ ಪಾತ್ರವಿದೆ. ಅದಕ್ಕೆ ಸರ್ಕಾರಿ ಮುದ್ರೆಯೂ ಬಿದ್ದಿದೆ. ಅಭಿನಯಕ್ಕೆ ಅವಾರ್ಡ್‌ ಸಿಕ್ಕಿರುವುದು ಖುಷಿ ಕೊಟ್ಟಿದೆ’ ಎಂದರು ರಮೇಶ್‌ಭಟ್‌.

ಹೀರೋ ಕಿರಣ್‌ ರಜಪೂತ್‌ಗೆ ಇದು ಮೊದಲ ಸಿನಿಮಾ. ಧಾರವಾಡ ಮೂಲದ ಕಿರಣ್‌ ರಜಪೂತ್‌ ಒಮ್ಮೆ, ಹೆಬ್ಳೀಕರ್‌ ಅವರನ್ನು ಭೇಟಿ ಮಾಡಿ, ಸಿನಿಮಾ ಆಸೆ ಹೇಳಿಕೊಂಡಿದ್ದರಂತೆ. ಆಗ, ಓಕೆ ಅಂದಿದ್ದರಂತೆ ಹೆಬ್ಳೀಕರ್‌, ಏನೋ ಒಂದು ಸಣ್ಣ ಪಾತ್ರ ಕೊಡ್ತಾರೆ ಅಂದುಕೊಂಡ ರಜಪೂತ್‌ಗೆ, ಹೀರೋ ಅವಕಾಶ ಕೊಟ್ಟಿದ್ದಕ್ಕೆ ಇನ್ನಿಲ್ಲದ ಖುಷಿ ಇದೆ. ಅವರಿಗಿಲ್ಲಿ ಮುಗ್ಧ ಹುಡುಗನ ಪಾತ್ರವಂತೆ.

ಅರ್ಪಿತ ಸಿನಿಮಾದ ನಾಯಕಿ. ಅವರಿಗೂ ಇಲ್ಲಿ ಮುಗ್ಧ ಹುಡುಗಿಯ ಪಾತ್ರ ಸಿಕ್ಕಿದೆಯಂತೆ. ಹಿರಿಯ ನಟಿ ಸಂಗೀತ ಅವರಿಗೆ ಹೆಬ್ಳೀಕರ್‌ ಜತೆ ಮೊದಲ ಸಿನಿಮಾವಂತೆ. ಅವರಿಂದ ಸಾಕಷ್ಟು ಕಲಿತಿದ್ದುಂಟು. ಸೆಟ್‌ನಲ್ಲಿ ಒಳ್ಳೆಯ ವಾತಾವರಣ ಇತ್ತು’ ಎಂದರು ಸಂಗೀತ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.