ಕನ್ನಡದ ಪ್ರೀತಿಗೆ ತಮಿಳಿನ ಹೆಸರು
Team Udayavani, Apr 21, 2017, 12:37 PM IST
ಈಗಾಗಲೇ “ಕಾದಲ್’ ಎಂಬ ಸಿನಿಮಾವೊಂದು ಸದ್ದಿಲ್ಲದೆಯೇ ಶುರುವಾಗಿ, ಚಿತ್ರೀಕರಣವನ್ನೂ ಪೂರ್ಣಗೊಳಿಸಿ ಇದೀಗ ಪ್ರೇಕ್ಷಕರ ಎದುರು ಬರಲು ಸಿದ್ದವಾಗಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಸಿಡಿಯನ್ನು ಹೊರತಂದಿದೆ ಚಿತ್ರತಂಡ. ಇಲ್ಲಿ “ಕಾದಲ್’ ಅನ್ನೋದು ಯಾವ ಪದ ಎಂಬ ಗೊಂದಲ ಉಂಟಾಗಬಹುದು. ಆ ಗೊಂದಲ ವಾಣಿಜ್ಯ ಮಂಡಳಿಯಲ್ಲೂ ಇತ್ತು. ಶೀರ್ಷಿಕೆ ನೋಂದಣಿ ಮಾಡಿಸಲು ಹೋದ ನಿರ್ದೇಶಕರಿಗೆ “ಕಾದಲ್’ ಕನ್ನಡ ಪದವಲ್ಲ ಎಂಬ ಬಗ್ಗೆ ತಕರಾರು ಇತ್ತು. ಕೊನೆಗೆ ನಿರ್ದೇಶಕರು, ಇದು ನಿಘಂಟುವಿನಲ್ಲಿ “ಕಾದಲ್’ ಪದ ಇರುವ ಬಗ್ಗೆ ವಿವರಿಸಿದಾಗಲಷ್ಟೇ ಶೀರ್ಷಿಕೆ ಪಕ್ಕಾ ಆಗಿದೆ. ಆಮೇಲೆ ಸಿನಿಮಾ ಶುರುವಾಗಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಮುರಳಿ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ “ಮುಮ್ತಾಜ್’ ಚಿತ್ರ ಮಾಡಿದ್ದ ಮುರಳಿ ಈ ಸಿನಿಮಾ ಮೂಲಕ ಮುಮ್ತಾಜ್ ಮುರಳಿಯಾಗಿದ್ದಾರೆ. ಇದೊಂದು ಅಪ್ಪಟ ಪ್ರೇಮಕಥೆ ಎಂಬುದು ನಿರ್ದೇಶಕರ ಮಾತು. “ಸಹಾಯಕ ನಿರ್ದೇಶಕನೊಬ್ಬ ತನಗೆ ಗೊತ್ತಿಲ್ಲದೆಯೇ ಕ್ಯಾನ್ಸರ್ ಪೀಡಿತ ಹುಡುಗಿಯನ್ನು ಪ್ರೀತಿ ಮಾಡುತ್ತಾನೆ. ಆ ವಿಷಯ ಗೊತ್ತಾದಾಗ, ಅವನು ನಿರ್ದೇಶಕನಾಗುತ್ತಾನೋ ಅಥವಾ ತನ್ನ ಪ್ರೀತಿ ಉಳಿಸಿಕೊಳ್ಳಲು ಹೋರಾಡಿ, ಸಫಲನಾಗುತ್ತಾನೋ ಎಂಬುದೇ ಕಥೆಯ ಒನ್ಲೈನ್’ ಎನ್ನುತ್ತಾರೆ ನಿರ್ದೇಶಕ ಮುರಳಿ.
ಈ ಸಿನಿಮಾವನ್ನು ಎಸ್.ಸುರೇಶ್ ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಹೊಸ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಅಡಿಷನ್ಗೆ ಹೋಗಿದ್ದ ಎಸ್.ಸುರೇಶ್ ಅವರ ನಟನೆಯ ಕನಸು ನನಸಾಗಲಿಲ್ಲವಂತೆ. ಎಸ್.ಐ.ಟಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಸುರೇಶ್, ಆ ಕನಸನ್ನು ಮಗನ ಮೂಲಕ ನನಸು ಮಾಡಲು ಹೊರಟಿದ್ದಾರೆ. ಮಗನನ್ನು ನಾಯಕನನ್ನಾಗಿಸಿ, ಖುಷಿಯಿಂದ “ಕಾದಲ್’ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ ಅವರು.
ಇನ್ನು, ಸಿವಿಲ್ ಎಂಜನಿಯರ್ ಆಗಿರುವ ತುಮಕೂರಿನ ಆಕಾಶ್ ಈ ಚಿತ್ರದ ಹೀರೋ. ಅವರಿಗೆ ಇದು ಮೊದಲ ಸಿನಿಮಾ. ಇನ್ನು, ಇವರಿಗೆ ಮೈಸೂರಿನ ರಂಗಭೂಮಿ ನಟಿ ಧರಣಿ ನಾಯಕಿಯಾಗಿದ್ದಾರೆ. ಇವರಿಗೆ ಇದು ನಾಲ್ಕನೆ ಚಿತ್ರ. ಚಿತ್ರದಲ್ಲಿ ಸುಧಾಕರ್, ಮಂಜುನಾಥ್, ಕುಮಾರಿ ಭಾವನ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ. ಸಹೋದರ ಪವನ್ ಬರೆದಿರುವ ಗೀತೆಗೆ ಪ್ರವೀಣ್ ಸಂಗೀತ ನೀಡದ್ದಾರೆ. ಪದ್ಮಪ್ರಸಾದ್ ಜೈನ್ ಕೂಡ ಒಂದು ಗೀತೆ ರಚಿಸಿದ್ದಾರೆ. ಹರಿಕೃಷ್ಣ ಅವರ ನೃತ್ಯ ನಿರ್ದೇಶನವಿದೆ. ಅಲ್ಟಿಮೇಟ್ ಶಿವು ಅವರ ಸಾಹಸವಿದೆ. ಪೂರ್ಣ ಚಂದ್ರ ಭಕಾಟೆ ಕ್ಯಾಮೆರಾ ಹಿಡಿದರೆ, ಕಾರ್ತಿಕ್ ಸಂಕಲನ ಮಾಡಿದ್ದಾರೆ.
ಅಂದಹಾಗೆ, ಅಜೇಯ್ ರಾವ್ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಸಿ ಮ್ಯೂಸಿಕ್ ಕಂಪನಿಯ ಈ ಚಿತ್ರದ ಹಾಡುಗಳನ್ನು ಹೊರ ತಂದಿದೆ. ಜೂನ್ನಲ್ಲಿ ಚಿತ್ರ ರಿಲೀಸ್ ಮಾಡಲು ನಿರ್ಮಾಪಕರು ತಯಾರಿ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್