ಡಾ.ರಾಜ್ ಸುಪ್ರಭಾತ ಆಡಿಯೋ ಬಿಡುಗಡೆ
Team Udayavani, Apr 21, 2017, 12:56 PM IST
ಡಾ.ರಾಜ್ಕುಮಾರ್ ಕುರಿತು ಅತಿ ಹೆಚ್ಚು ಪುಸ್ತಕಗಳು ಹೊರ ಬಂದಿವೆ. ಸಾಕಷ್ಟು ಆಡಿಯೋ, ವೀಡಿಯೋ ಸಿಡಿಗಳು ಹೊರಬಂದಿವೆ. ಇದು ನಿಜಕ್ಕೂ ದಾಖಲೆಯೇ ಸರಿ. ಈಗ ಮತ್ತೂಂದು ದಾಖಲೆಯೂ ಸೇರ್ಪಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಮೇರು ಕಲಾವಿದ ಡಾ.ರಾಜ್ಕುಮಾರ್ ಕುರಿತು “ಸುಪ್ರಭಾತ’ ಹೊರ ಬಂದಿರುವುದು ವಿಶೇಷತೆಗಳಲ್ಲೊಂದು. ಹೌದು, ಇತ್ತೀಚೆಗೆ “ಡಾ.ರಾಜ್ಕುಮಾರ್ ಸುಪ್ರಭಾತ’ ಹೆಸರಿನ ಆಡಿಯೋ ಸಿಡಿಯೊಂದನ್ನು ಹೊರತರಲಾಯಿತು. ಡಾ.ರಾಜ್ಕುಮಾರ್ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹೊರತಂದ ಸುಪ್ರಭಾತ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಕೊಳದಮಠದ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ ಮುಖ್ಯ ಆಕರ್ಷಣೆಯಾಗಿದ್ದರು.
“ಒಬ್ಬ ಕನ್ನಡದ ಕಲಾವಿದನ ಕುರಿತು ಸುಪ್ರಭಾತ ಹೊರಬಂದಿರುವುದು ಬಹುಶಃ ಗಿನ್ನಿಸ್ ದಾಖಲೆ ಎನ್ನಬಹುದು’ ಎಂದು ಅಭಿಪ್ರಾಯಪಟ್ಟಿದ್ದು ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್. ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, “ಡಾ.ರಾಜ್ಕುಮಾರ್ ಅಪರೂಪದ ವ್ಯಕ್ತಿಯಾಗಿದ್ದರು. ಚಿತ್ರೋದ್ಯಮದಲ್ಲಿ ಮಹಾನ್ ತಪಸ್ವಿಯಾಗಿದ್ದ ಅವರು ಮಗುವಿನಂತಹ ಮನಸ್ಸುಳ್ಳವರು. ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದರಿಂದಲೇ ಅವರು ಆ ಮಟ್ಟಕ್ಕೆ ಏರಿದರು. ಕನ್ನಡ ಚಿತ್ರರಂಗದಲ್ಲಿರುವ ಪ್ರತಿಯೊಬ್ಬರೂ ಡಾ.ರಾಜ್ಕುಮಾರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಮಡರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು’ ಅಂದರು.
ಹಿರಿಯ ಗೀತ ಸಾಹಿತಿ ಸಿ.ವಿ.ಶಿವಶಂಕರ್ ಮಾತನಾಡಿ, “ಡಾ.ರಾಜ್ಕುಮಾರ್ ಅವರು ಅಪ್ಪಟ ಶುದ್ದ ಕನ್ನಡವನ್ನು ವ್ಯಾಕರಣ ಬದ್ದವಾಗಿ ಮಾತನಾಡುತ್ತಿದ್ದರು. ಅವರು ಇರುವಷ್ಟು ಕಾಲ ದೇವ ಮಾನವರಾಗಿದ್ದರು’ ಎಂದು ಗುಣಗಾನ ಮಾಡಿದರು.
ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡ ಅವರು, “ಡಾ.ರಾಜ್ಕುಮಾರ್ ಒಬ್ಬ ಕಲಾ ಸೂರ್ಯರಾಗಿದ್ದರು. ಕಾಲೇಜು ದಿನಗಳಿಂದಲೂ ನಾನು ಅವರನ್ನು ನೋಡಿದ್ದೇನೆ. ಅವರು ಬಳಸುವ ಕನ್ನಡ ಭಾಷೆ ಅದ್ಭುತವಾಗಿತ್ತು. “ಸುಪ್ರಭಾತ’ ಸಿಡಿ ಹೊರತಂದಿರುವ ರಮೇಶ್ ಅವರಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದರು ದೊಡ್ಡ ರಂಗೇಗೌಡ. 18 ಸ್ಕಂದಗಳಲ್ಲಿರುವ ರಂಗಸ್ವಾಮಿ ಅವರ ಸಾಹಿತ್ಯವನ್ನು ಗಾಯಕ ಅಜಯ್ ವಾರಿಯರ್ ಹಲವು ರಾಗಗಳಲ್ಲಿ ಹಾಡಿದ್ದಾರೆ. ಎಲ್.ಎನ್. ಗೂಚಿ ಸಂಗೀತ ನೀಡಿದ್ದಾರೆ. ರಮೇಶ್ ಅವರು ಈ ಆಡಿಯೋ ಸಿಡಿ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ