ಹಂಸ ಲೋಕದಿಂದ ಬಂದ… ಪ್ರೇಮದ ಸಂಗೀತ
Team Udayavani, Jun 23, 2017, 12:55 PM IST
“ಇನ್ನು ನಮ್ಮ ಅಜಯ್ ಸಾರ್ ಬಗ್ಗೆ ಹೇಳ್ಳೋದು ಮರೆತ್ತಿದೆ. ಯಾಕೋ ಫುಲ್ ಟೆನ್ಶನ್ ಆಗ್ತಿದೆ …’ ಹಾಗಂತ ಗೌರಿಶಿಖರ್ ಹೇಳುತ್ತಿದ್ದಂತೆ, ಹೇಳ್ಳೋದನ್ನ ಮರೆತಿಲ್ಲ ಎಂದು ಅಜೇಯ್ ರಾವ್ ನೆನಪಿಸಿದರು. ಒಂದಂತೂ ಸತ್ಯ. ಗೌರಿಶಿಖರ್ ಟೆನ್ಶನ್ನಲ್ಲಿದ್ದಿದ್ದಂತೂ ಹೌದು. ಪಂಚೆ ಉಟ್ಟು, “ರಾಜ-ಹಂಸ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬರಮಾಡಿಕೊಳ್ಳುವುದರಿಂದ, ಬಂದವರು ವೆಲ್ಕಮ್ ಡ್ರಿಂಕ್ ಕುಡಿದರಾ? ಅವರಿಗೆ ಸೀಟ್ ಸಿಕ್ಕಿದೆಯಾ? ಹಾಡುಗಳ ಪ್ರದರ್ಶನ ಸುಗಮವಾಗಿ ಸಾಗಿದೆಯಾ? ಎಂದೆಲ್ಲಾ ನೋಡಿಕೊಳ್ಳುವ ಮೂಲಕ ಇಡೀ ಸಮಾರಂಭದ ಉಸ್ತುವಾರಿಯನ್ನು ವಹಿಸಿದ್ದರು ಗೌರಿಶಿಖರ್. ಅದರಿಂದಲೇ ಟೆನ್ಶನ್ ಮತ್ತು ಆ ಟೆನ್ಶನ್ನಲ್ಲಿ ಹೆಸರು ಹೇಳಿದ್ದರೂ, ಅದನ್ನು ಮರೆತು ಕ್ಷಮೆ ಕೇಳಿದರು.
“ರಾಜ-ಹಂಸ’ ಚಿತ್ರದ ಒಂದು ಹಾಡನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಎರಡನೆಯ ಹಾಡನ್ನು ಸಂತೋಷ್ ಆನಂದ್ರಾಮ್ ಬಿಡುಗಡೆ ಮಾಡಿದ್ದರು. ಈಗ ಎಲ್ಲಾ ಹಾಡುಗಳನ್ನು ಅಜೇಯ್ ರಾವ್ ಅವರಿಂದ ಇತ್ತೀಚೆಗೆ ಬಿಡುಗಡೆ ಮಾಡಿಸಲಾಯಿತು. ಅಂದು ಗೌರಿಶಿಖರ್ ಜೊತೆಗೆ, ನಿರ್ದೇಶಕ ಜಡೇಶ್, ನಾಯಕಿ ರಂಜನಿ ರಾಘವನ್, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಬಿ.ಸಿ. ಪಾಟೀಲ್, ಯಮುನಾ ಮುಂತಾದ ಹಲವರು ಇದ್ದರು. ಸರಳವಾಗಿ ಹೇಳಬೇಕೆಂದರೆ, ಚಿತ್ರದ ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್ ಅವರನ್ನು ಹೊರತುಪಡಿಸಿ, ಮಿಕ್ಕಂತೆ
ಎಲ್ಲರೂ ಇದ್ದರು. ದೇಶದಲ್ಲಿಲ್ಲದ ಕಾರಣ ಜೋಶ್ವಾ ಬಂದಿರಲಿಲ್ಲ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಯೇ ಚಿತ್ರದ ಬಗ್ಗೆ ಮಾತಾಡಬೇಕು ಎಂದು ಗೌರಿಶಿಖರ್
ತೀರ್ಮಾನಿಸಿದ್ದರಂತೆ. ಅದರಂತೆ ಚಿತ್ರದ ಕೆಲಸಗಳನ್ನೆಲ್ಲಾ ಮುಗಿಸಿ, ಈಗ ಮಾತಾಡುವುದಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಚಿತ್ರದ ಹಾಡುಗಳ ಬಿಡುಗಡೆ ಮುಗಿದಿದ್ದು, ಆಗಸ್ಟ್ ಎರಡನೆಯ ಅಥವಾ ಮೂರನೆಯ ವಾರದಲ್ಲಿ ಚಿತ್ರ ಬಿಡುಗಡೆಯಾಗುತ್ತದಂತೆ. “ಚಿತ್ರಕ್ಕೆ ಹಣ ಹಾಕಿದವರು ಒಬ್ಬಿಬ್ಬರಲ್ಲ. ಹತ್ತಾರು ಸ್ನೇಹಿತರು.
ಜನರು ಮನಸ್ಫೂರ್ವಕವಾಗಿ ಚಿತ್ರ ಮಾಡುವುದಕ್ಕೆ ಮುಂದಾಗಿರುವುದರಿಂದ ಜನಮನ ಸಿನಿಮಾಸ್ ಎಂಬ ಬ್ಯಾನರ್ ಹುಟ್ಟುಹಾಕಿ, ಈ ಚಿತ್ರ ಮಾಡಿದ್ದೇವೆ’ ಎಂದರು ಗೌರಿಶಿಖರ್. ನಂತರ ಬಿ.ಸಿ. ಪಾಟೀಲ್, ಯಮುನಾ, ಅಜೇಯ್ ರಾವ್ ಮುಂತಾದವರೆಲ್ಲಾ ಚಿತ್ರತಂಡಕ್ಕೆ ಶುಭ ಕೋರುವುದರ ಜೊತೆಗೆ, ಚಿತ್ರ ಗೆಲ್ಲಲಿ ಎಂದು ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ