ಟೂ ಬಿಟ್ಟವರ ಖುಷಿ! ಪಾಳ್ಯಗಾರರ ಸಂತೋಷ ಮತ್ತು ಸಂಭ್ರಮ


Team Udayavani, Jul 21, 2017, 5:15 AM IST

Dandupalya_(136).gif

2012 ರಲ್ಲಿ “ದಂಡುಪಾಳ್ಯ’ ಚಿತ್ರ ಯಶಸ್ಸು ಪಡೆದಿತ್ತು. 2017 ರಲ್ಲಿ ಮುಂದುವರೆದ ಭಾಗ “2′ ಬಂದಿದೆ. ಚಿತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ, ಜನರು ಸ್ವೀಕರಿಸಿದ್ದಾರೆ, ಪ್ರಯತ್ನ ಸಾರ್ಥಕ ಎಂಬುದನ್ನು ಹೇಳಿಕೊಳ್ಳಲೆಂದೇ ಚಿತ್ರತಂಡದ ಸಮೇತ ಪತ್ರಕರ್ತರ ಮುಂದೆ ಬಂದಿದ್ದ ನಿರ್ದೇಶಕ ಶ್ರೀನಿವಾಸರಾಜು,ಮೊದಲು ಮೈಕ್‌ ಹಿಡಿದು ಮಾತಿಗಿಳಿದರು.

“ಪ್ರಾಮಾಣಿಕವಾಗಿ ಸಿನಿಮಾ ಮಾಡಿದ್ದೆ. ಅದರ ಪ್ರತಿಫ‌ಲ ಸಿಕ್ಕಿದೆ. ಆರಂಭದಲ್ಲಿ ಎಲ್ಲರೂ ಅದೊಂದು ಕ್ರೈಮ್‌ ಸಿನಿಮಾ. ಎಲ್ಲವನ್ನೂ ಭಯಾನಕವಾಗಿ ತೋರಿಸುತ್ತಾರೆ ಅಂದ್ರು. ಮೊದಲ ಚಿತ್ರಕ್ಕೂ ಇದೇ ಮಾತು ಬಂದಿತ್ತು. ಆ ಚಿತ್ರ ಗೆಲುವು ಕೊಡು¤. ಈ ಚಿತ್ರದ ಬಗ್ಗೆಯೂ ಮಾತಾಡಿದ್ದರು. ಈಗ ಸಿನಿಮಾ ನೋಡಿದವರು ಮೆಚ್ಚುಗೆ ಪಡುತ್ತಿದ್ದಾರೆ. ಇಲ್ಲಿ, ಎಲ್ಲವೂ ನನ್ನೊಬ್ಬನಿಂದಲೇ ಆಗಿಲ್ಲ. ಕಲಾವಿದರು, ತಂತ್ರಜ್ಞರು, ಚಿತ್ರತಂಡ ಹಾಗೂ ಮಾಧ್ಯಮ ಇವರೆಲ್ಲರ ಸಹಕಾರ, ಪ್ರೋತ್ಸಾಹ “2′ ಚಿತ್ರದ ಗೆಲುವಿಗೆ ಕಾರಣ. ಮೊದಲ ಚಿತ್ರಕ್ಕೂ ಈ “2′ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ಬಿಡುಗಡೆ ದಿನ ಇದ್ದ ಗಳಿಕೆ ಎರಡು ಮತ್ತು ಮೂರನೇ ದಿನಕ್ಕೆ ಡಬ್ಬಲ್‌ ಆಗಿತ್ತು. ಸೋಮವಾರವೂ ಅದು ಸ್ಟಡಿಯಾಗಿಯೇ ಇದೆ’ ಎಂದರು ಶ್ರೀನಿವಾಸರಾಜು.

ನಿರ್ಮಾಪಕ ವೆಂಕಟ್‌ಗೆ ಜನ ಚಿತ್ರ ಒಪ್ಪಿಕೊಂಡಿದ್ದಕ್ಕೆ ಖುಷಿಯಾಗಿದೆಯಂತೆ. “ಇಂತಹ ಚಿತ್ರದಲ್ಲಿ ಕಾಮಿಡಿ,
ಸೆಂಟಿಮೆಂಟ್‌ ಇರಲ್ಲ ಎಂಬ ಮಾತುಗಳಿದ್ದವು. ಆದರೆ, ಇಲ್ಲಿ ಹಾಸ್ಯವೂ ಇದೆ, ಸೆಂಟಿಮೆಂಟ್‌ ಕೂಡ ಇದೆ. ಗ್ಯಾಂಗ್‌ನವರಿಗೆ ಪೊಲೀಸ್‌ನವರು ಕೊಡುವ ಹಿಂಸೆ ಹೇಗಿರುತ್ತೆ ಎಂಬ ಕುರಿತ ಸಿನಿಮಾ ಇದು. ಅದು ನೋಡುಗರನ್ನು ಖುಷಿಗೊಳಿಸಿದೆ. ಚಿತ್ರದ ಗಳಿಕೆಯೂ ಹೆಚ್ಚಿದೆ’ ಅಂದರು ವೆಂಕಟ್‌.

ಪೂಜಾ ಗಾಂಧಿಗೂ ಸಹಜವಾಗಿಯೇ ಸಿನಿಮಾ ಯಶಸ್ಸು ನೋಡಿ ಖುಷಿಯಾಗಿದೆಯಂತೆ. “ಮೊದಲ ಚಿತ್ರ ಬಂದಾಗ, ಎರಡು ಹಾಗೂ ಮೂರು ಚಿತ್ರ ಮಾಡ್ತೀವಿ ಅಂದುಕೊಂಡಿರಲಿಲ್ಲ. ನನಗೊಂದು ಕುತೂಹಲವಿತ್ತು. “2′ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಅಂತ. ಇಲ್ಲಿ ಎಮೋಷನಲ್‌ ಅಂಶಗಳು ನಾಟುತ್ತವೆ.

“ದಂಡುಪಾಳ್ಯ’ ಮಾಡಿದಾಗ ಹೆಣ್ಮಕ್ಕಳು ನೋಡಲ್ಲ ಅನ್ನುತ್ತಿದ್ದರು. ಆದರೆ, “2′ ಚಿತ್ರವನ್ನು ಹೆಣ್ಮಕ್ಕಳು ನೋಡುತ್ತಿದ್ದಾರೆ. ಇದು ನನಗೆ ಖುಷಿ ನೀಡಿದೆ. ಈ ಹತ್ತು ವರ್ಷದ ನನ್ನ ಸಿನಿ ಜರ್ನಿಯಲ್ಲಿ ಈ ಎರಡು ಸಿನಿಮಾಗಳು ಹೊಸ ಇಮೇಜ್‌ ತಂದುಕೊಟ್ಟಂತಹ ಚಿತ್ರಗಳು’ ಅಂದರು ಪೂಜಾಗಾಂಧಿ. ಸಂಜನಾಗೆ ಎಲ್ಲರೂ ಗ್ಲಾಮರ್‌ ಪಾತ್ರವನ್ನೇ ಹುಡುಕಿ ಕೊಡುತ್ತಿದ್ದರಂತೆ. ಆದರೆ, “2′ ಚಿತ್ರದಲ್ಲಿ ಅವರಿಗೆ ಸಿಕ್ಕ ಪಾತ್ರ ಆ ಗ್ಲಾಮರ್‌ಗೆ ಬ್ರೇಕ್‌ ಕೊಟ್ಟಿದೆಯಂತೆ. ಚಿತ್ರದಲ್ಲೊಂದು ದೃಶ್ಯಕ್ಕೆ ಸೆನ್ಸಾರ್‌ ಕತ್ತರಿ ಹಾಕಿದೆ. ಆ ದೃಶ್ಯ ಚಿತ್ರದ ಹೈಲೈಟ್‌ ಆಗಿತ್ತು. ಆ ದೃಶ್ಯದಲ್ಲಿ ಸಿಜಿ ಮೂಲಕ “ಬೆತ್ತಲೆ’ ಮಾಡಲಾಗಿದೆ. ಅದು ಸಿನಿಮಾದ ಪ್ರಮುಖ ಭಾಗವಾಗಿದ್ದರೂ, ಅದನ್ನು ಸೆನ್ಸಾರ್‌ ಮಂಡಳಿ ಬಿಟ್ಟಿಲ್ಲ. ಇಷ್ಟು ದಿನ ಮಾಡಿದ ಪಾತ್ರಗಳಿಗಿಂತಲೂ ಇಲ್ಲಿ ಭಿನ್ನವಾಗಿರುವಂತಹ ಪಾತ್ರ ಸಿಕ್ಕಿದೆ ಅಂದರು ಸಂಜನಾ. ಉಳಿದಂತೆ ಕರಿಸುಬ್ಬು, ಡ್ಯಾನಿ ಕುಟ್ಟಪ್ಪ, ಮುನಿ, ಜಯದೇವ್‌ ಇವರೆಲ್ಲರೂ ತಮ್ಮ ಅನುಭವ ಹಂಚಿಕೊಳ್ಳುವ ಹೊತ್ತಿಗೆ ಆ ಸಕ್ಸಸ್‌
ಮೀಟ್‌ಗೂ ತೆರೆಬಿತ್ತು.

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.