ಬ್ರೈಸ್ ಕಣಿವೆಯ ಬಣ್ಣದ ಶಿಲ್ಪಗಳು


Team Udayavani, Sep 14, 2017, 6:45 AM IST

vismaya.jpg

ಈ ರೋಮಾಂಚಕ ಕಣಿವೆ ಪ್ರದೇಶದ ಅಸ್ತಿತ್ವ ಹೊರಜಗತ್ತಿಗೆ ತಿಳಿದೇ ಇರಲಿಲ್ಲ. ಅದು ಅಜ್ಞಾತವಾಗಿಯೇ ಇತ್ತು. 1850ರಲ್ಲಿ ಎಬೆನೇಜರ್‌ ಬ್ರೈಸ್ ಎಂಬಾತ ತನ್ನ ಹೆಂಡತಿ ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಗುಡಿಸಲು ಕಟ್ಟಿ ನೆಲೆಸಿ ನಿರ್ಮಾನುಷವಾದ ಈ ಸ್ಥಳದಲ್ಲಿ ನಿಸರ್ಗ ಕಡೆದ ಕೆತ್ತನೆಗಳ ವಿಷಯವನ್ನು ಬೆಳಕಿಗೆ ತಂದ. 

ಅಮೆರಿಕದ ಯುಟಾಹ್‌ದಿಂದ 50 ಮೈಲು ದೂರವಿದೆವ ಬ್ರೈಸ್ ಕಣಿವೆ ರಾಷ್ಟ್ರೀಯ ಉದ್ಯಾನವನ. ಅಲ್ಲಿರುವ ರಚನೆಗಳು ಯಾವುದೇ ರಾಜವಂಶದವರ ಪರಿಶ್ರಮದ ಫ‌ಲವಲ್ಲ. ಇಲ್ಲಿನ ಕೋಟೆಗಳು, ಶಿಲ್ಪಗಳೆಲ್ಲವನ್ನೂ ಕೆತ್ತಿರುವುದು ನಿಸರ್ಗವೇ. ಹಿಮಪಾತ ಮತ್ತು ನದಿಯ ರಭಸದ ಪ್ರವಾಹದ ಕೊರೆತ ಇದು ಎರಡರಿಂದಲೇ ಪರ್ವತಗಳ ಮಣ್ಣು ಕೊರೆದುಹೋಗಿ ಶಿಲೆಗಳಲ್ಲಿ ಸೃಷ್ಟಿಯಾದ ಬಿರುಕುಗಳೇ ಒಂದೊಂದು ಬಗೆಯ ಕಲಾರಚನೆಯನ್ನು ಮಾಡಿಬಿಟ್ಟಿವೆ.

35,835 ಎಕರೆ ಪ್ರದೇಶದಲ್ಲಿ ಈ ಉದ್ಯಾನ ಹರಡಿಕೊಂಡಿದೆ. ಅಲ್ಲೊಂದು ಅದ್ಭುತ ರಮ್ಯಲೋಕವೇ ಇದೆ. ಅಲ್ಲಿ ಬಣ್ಣ ಬಣ್ಣದ ಏಕಶಿಲೆಯ ಎತ್ತರೆತ್ತರದ ವೈವಿಧ್ಯಮಯ ಶಿಲ್ಪಗಳಿವೆ, ಹಳ್ಳಗಳಿಗೆ ದೃಢವಾದ ಪುರಾತನ ಸೇತುವೆಗಳಿವೆ. ಕೋಟೆ ಕೊತ್ತಲಗಳಿವೆ, ಕಲಾತ್ಮಕವಾದ ಬುರುಜುಗಳಿವೆ, ಕುಸಿದು ಹೋದ ಪ್ರಾಚೀನ ವಾಸ್ತುಶಿಲ್ಪದ ಮಾದರಿಯ ಕಟ್ಟಡಗಳ ಅವಶೇಷಗಳಿವೆ, ಕಿಟಕಿಗಳಿವೆ, ಹೆಬ್ಟಾಗಿಲುಗಳಿವೆ, ಕೋಟೆಯ ಕಮಾನುಗಳಿವೆ. ಸ್ತಬ್ಧವಾದ ಯಾವುದೋ ಐತಿಹಾಸಿಕ ರಾಜವಂಶದವರು ಒಂದಾನೊಂದು ಕಾಲದಲ್ಲಿ ಇಲ್ಲಿ ರಾಜಾÂಡಳಿತ ಮಾಡಿ ಅನಂತರ ಇಲ್ಲಿಂದ ಬಿಟ್ಟು ಹೋಗಿರಬಹುದೇ ಎಂಬ ಭ್ರಮೆಯನ್ನು ಸೃಷ್ಟಿಸುವ ಇನ್ನೂ ಹಲವು ವಿಶೇಷಗಳಿವೆ.

ಈ ರೋಮಾಂಚಕ ಕಣಿವೆ ಪ್ರದೇಶದ ಅಸ್ತಿತ್ವ ಹೊರಜಗತ್ತಿಗೆ ತಿಳಿದೇ ಇರಲಿಲ್ಲ. ಅದು ಅಜಾnತವಾಗಿಯೇ ಇತ್ತು. 1850ರಲ್ಲಿ ಎಬೆನೇಜರ್‌ ಬ್ರೈಸ್ ಎಂಬಾತ ತನ್ನ ಹೆಂಡತಿ ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಗುಡಿಸಲು ಕಟ್ಟಿ ನೆಲೆಸಿ ನಿರ್ಮಾನುಷವಾದ ಈ ಸ್ಥಳದಲ್ಲಿ ನಿಸರ್ಗ ಕಡೆದ ಕೆತ್ತನೆಗಳ ವಿಷಯವನ್ನು ಬೆಳಕಿಗೆ ತಂದ. ಅನಂತರ ಇಲ್ಲಿ ಸಾಕಷ್ಟು ವೈಜಾnನಿಕ ಅಧ್ಯಯನಗಳು ನಡೆದವು. ಅಮೆರಿಕದ ಸೇನಾಪಡೆಯ ಮೇಜರ್‌ ಜಾನ್‌ ವೆಸ್ಲೆ ಪೋಪೆಲ್‌ 1872ರಲ್ಲಿ ಭೂ ವಿಜಾnನಿಗಳ ತಂಡದೊಂದಿಗೆ ಬಂದು ಸಮೀಕ್ಷೆ ನಡೆಸಿದ್ದ. ಬಳಿಕ ಇಲ್ಲಿ ಜಾನುವಾರುಗಳ ಮೇವಿಗೆ ಇರುವ ಅನುಕೂಲಗಳನ್ನು ಅರಿತು ದನಗಾಹಿಗಳೂ ಬಂದು ಬೀಡುಬಿಟ್ಟರು. 

ಹವಾಮಾನದ ವೈಪರೀತ್ಯದಿಂದಾಗಿ ಇಲ್ಲಿ ನಿಶ್ಚಿಂತವಾದ ಜೀವನ ಸಾಧ್ಯವಿರಲಿಲ್ಲ. 1923ರಲ್ಲಿ ಅಮೆರಿಕದ ಸರಕಾರವು ಇದೊಂದು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿತು. ಉದ್ಯಾನವನ್ನು ಹೊರ ಜಗತ್ತಿಗೆ ಪರಿಚಯಿಸಿದ ಬ್ರೈಸ್ನ ಹೆಸರನ್ನೇ ಇಲ್ಲಿಗೆ ಇರಿಸಲಾಯಿತು. 1928ರಲ್ಲಿ ಅದನ್ನು ಅಂದವಾಗಿ ವಿನ್ಯಾಸಗೊಳಿಸಿ ಪ್ರವಾಸಿಗಳ ಆಕರ್ಷಣೆಯ ತಾಣವಾಗಿ ಪರಿವರ್ತಿಸುವ ಕಾರ್ಯಗಳು ಆರಂಭವಾದವು. 1942ರಲ್ಲಿ ಅದಕ್ಕೆ ಹೆಚ್ಚುವರಿಯಾಗಿ 635 ಎಕರೆ ಪ್ರದೇಶವನ್ನು ಸೇರಿಸಲಾಯಿತು.

ವೈಜಾnನಿಕ ಸಮೀಕ್ಷೆಗಳ ನಂಬಿಕೆ ಪ್ರಕಾರ ಬ್ರೆ„ಸ್‌ ಕಣಿವೆಯಲ್ಲಿ 10 ಸಾವಿರ ವರ್ಷಗಳ ಹಿಂದೆ ಜನ ವಸತಿಗಳು ಇದ್ದವು ಎಂಬುದಕ್ಕೆ ಪಾರ್ಕ್‌ನ ದಕ್ಷಿಣ ಭಾಗದಲ್ಲಿರುವ ಕೆಲವು ಶಿಲ್ಪಕಲಾ ರಚನೆಗಳಿಂದ ತಿಳಿದು ಬರುವುದಂತೆ. ಇಲ್ಲಿನ ಮೃದುವಾದ ಬಂಡೆಗಳನ್ನು ನಿಸರ್ಗ ಬೇಕಾಬಿಟ್ಟಿ ಕೊರೆದಿಲ್ಲ. ಹಳ್ಳಗಳ ಮೇಲ್ಭಾಗದಲ್ಲಿ ಅವು ಪುರಾತನ ಸೇತುವೆಯ ಆಕಾರ ತಳೆದಿವೆ. ಬಿದ್ದಿರುವ ರಾಜಮಹಲುಗಳು, ಕಲಾತ್ಮಕವಾದ ಕಿಟಕಿಗಳು, ಪಾವಟಿಕೆಗಳು, ಪ್ರವೇಶದ್ವಾರಗಳು ಇವೆಲ್ಲವೂ ಪುರಾತನ ಅರಸೊತ್ತಿಗೆಯ ಕಾಲದ್ದೆಂಬ ಭ್ರಮೆಯನ್ನೇ ಅದು ಸೃಷ್ಟಿಸಿದೆ. ವೃತ್ತಾಕಾರದ ಒಂದು ಕ್ರೀಡಾಂಗಣ 12 ಮೈಲುದ್ದ, ಮೂರು ಮೈಲು ಅಗಲ, 800 ಅಡಿ ಆಳವಾಗಿದೆ. ಒಂದು ಗೋಡೆ 20 ಮೈಲು ಉದ್ದವಾಗಿ ಹರಡಿದೆ. 200 ಅಡಿಗಿಂತ ಎತ್ತರವಿರುವ ಬುರುಜುಗಳೂ ಇವೆ. ಪಾರ್ಕ್‌ 8ರಿಂದ 9 ಸಾವಿರ ಅಡಿ ಎತ್ತರವಾಗಿದ್ದು ಕೆಲವು ಏಕಶಿಲಾ ರಚನೆಗಳು ಒಂದು ಸಾವಿರ ಅಡಿ ಎತ್ತರ ಇವೆ.

– ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.