ಬ್ರೈಸ್ ಕಣಿವೆಯ ಬಣ್ಣದ ಶಿಲ್ಪಗಳು


Team Udayavani, Sep 14, 2017, 6:45 AM IST

vismaya.jpg

ಈ ರೋಮಾಂಚಕ ಕಣಿವೆ ಪ್ರದೇಶದ ಅಸ್ತಿತ್ವ ಹೊರಜಗತ್ತಿಗೆ ತಿಳಿದೇ ಇರಲಿಲ್ಲ. ಅದು ಅಜ್ಞಾತವಾಗಿಯೇ ಇತ್ತು. 1850ರಲ್ಲಿ ಎಬೆನೇಜರ್‌ ಬ್ರೈಸ್ ಎಂಬಾತ ತನ್ನ ಹೆಂಡತಿ ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಗುಡಿಸಲು ಕಟ್ಟಿ ನೆಲೆಸಿ ನಿರ್ಮಾನುಷವಾದ ಈ ಸ್ಥಳದಲ್ಲಿ ನಿಸರ್ಗ ಕಡೆದ ಕೆತ್ತನೆಗಳ ವಿಷಯವನ್ನು ಬೆಳಕಿಗೆ ತಂದ. 

ಅಮೆರಿಕದ ಯುಟಾಹ್‌ದಿಂದ 50 ಮೈಲು ದೂರವಿದೆವ ಬ್ರೈಸ್ ಕಣಿವೆ ರಾಷ್ಟ್ರೀಯ ಉದ್ಯಾನವನ. ಅಲ್ಲಿರುವ ರಚನೆಗಳು ಯಾವುದೇ ರಾಜವಂಶದವರ ಪರಿಶ್ರಮದ ಫ‌ಲವಲ್ಲ. ಇಲ್ಲಿನ ಕೋಟೆಗಳು, ಶಿಲ್ಪಗಳೆಲ್ಲವನ್ನೂ ಕೆತ್ತಿರುವುದು ನಿಸರ್ಗವೇ. ಹಿಮಪಾತ ಮತ್ತು ನದಿಯ ರಭಸದ ಪ್ರವಾಹದ ಕೊರೆತ ಇದು ಎರಡರಿಂದಲೇ ಪರ್ವತಗಳ ಮಣ್ಣು ಕೊರೆದುಹೋಗಿ ಶಿಲೆಗಳಲ್ಲಿ ಸೃಷ್ಟಿಯಾದ ಬಿರುಕುಗಳೇ ಒಂದೊಂದು ಬಗೆಯ ಕಲಾರಚನೆಯನ್ನು ಮಾಡಿಬಿಟ್ಟಿವೆ.

35,835 ಎಕರೆ ಪ್ರದೇಶದಲ್ಲಿ ಈ ಉದ್ಯಾನ ಹರಡಿಕೊಂಡಿದೆ. ಅಲ್ಲೊಂದು ಅದ್ಭುತ ರಮ್ಯಲೋಕವೇ ಇದೆ. ಅಲ್ಲಿ ಬಣ್ಣ ಬಣ್ಣದ ಏಕಶಿಲೆಯ ಎತ್ತರೆತ್ತರದ ವೈವಿಧ್ಯಮಯ ಶಿಲ್ಪಗಳಿವೆ, ಹಳ್ಳಗಳಿಗೆ ದೃಢವಾದ ಪುರಾತನ ಸೇತುವೆಗಳಿವೆ. ಕೋಟೆ ಕೊತ್ತಲಗಳಿವೆ, ಕಲಾತ್ಮಕವಾದ ಬುರುಜುಗಳಿವೆ, ಕುಸಿದು ಹೋದ ಪ್ರಾಚೀನ ವಾಸ್ತುಶಿಲ್ಪದ ಮಾದರಿಯ ಕಟ್ಟಡಗಳ ಅವಶೇಷಗಳಿವೆ, ಕಿಟಕಿಗಳಿವೆ, ಹೆಬ್ಟಾಗಿಲುಗಳಿವೆ, ಕೋಟೆಯ ಕಮಾನುಗಳಿವೆ. ಸ್ತಬ್ಧವಾದ ಯಾವುದೋ ಐತಿಹಾಸಿಕ ರಾಜವಂಶದವರು ಒಂದಾನೊಂದು ಕಾಲದಲ್ಲಿ ಇಲ್ಲಿ ರಾಜಾÂಡಳಿತ ಮಾಡಿ ಅನಂತರ ಇಲ್ಲಿಂದ ಬಿಟ್ಟು ಹೋಗಿರಬಹುದೇ ಎಂಬ ಭ್ರಮೆಯನ್ನು ಸೃಷ್ಟಿಸುವ ಇನ್ನೂ ಹಲವು ವಿಶೇಷಗಳಿವೆ.

ಈ ರೋಮಾಂಚಕ ಕಣಿವೆ ಪ್ರದೇಶದ ಅಸ್ತಿತ್ವ ಹೊರಜಗತ್ತಿಗೆ ತಿಳಿದೇ ಇರಲಿಲ್ಲ. ಅದು ಅಜಾnತವಾಗಿಯೇ ಇತ್ತು. 1850ರಲ್ಲಿ ಎಬೆನೇಜರ್‌ ಬ್ರೈಸ್ ಎಂಬಾತ ತನ್ನ ಹೆಂಡತಿ ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಗುಡಿಸಲು ಕಟ್ಟಿ ನೆಲೆಸಿ ನಿರ್ಮಾನುಷವಾದ ಈ ಸ್ಥಳದಲ್ಲಿ ನಿಸರ್ಗ ಕಡೆದ ಕೆತ್ತನೆಗಳ ವಿಷಯವನ್ನು ಬೆಳಕಿಗೆ ತಂದ. ಅನಂತರ ಇಲ್ಲಿ ಸಾಕಷ್ಟು ವೈಜಾnನಿಕ ಅಧ್ಯಯನಗಳು ನಡೆದವು. ಅಮೆರಿಕದ ಸೇನಾಪಡೆಯ ಮೇಜರ್‌ ಜಾನ್‌ ವೆಸ್ಲೆ ಪೋಪೆಲ್‌ 1872ರಲ್ಲಿ ಭೂ ವಿಜಾnನಿಗಳ ತಂಡದೊಂದಿಗೆ ಬಂದು ಸಮೀಕ್ಷೆ ನಡೆಸಿದ್ದ. ಬಳಿಕ ಇಲ್ಲಿ ಜಾನುವಾರುಗಳ ಮೇವಿಗೆ ಇರುವ ಅನುಕೂಲಗಳನ್ನು ಅರಿತು ದನಗಾಹಿಗಳೂ ಬಂದು ಬೀಡುಬಿಟ್ಟರು. 

ಹವಾಮಾನದ ವೈಪರೀತ್ಯದಿಂದಾಗಿ ಇಲ್ಲಿ ನಿಶ್ಚಿಂತವಾದ ಜೀವನ ಸಾಧ್ಯವಿರಲಿಲ್ಲ. 1923ರಲ್ಲಿ ಅಮೆರಿಕದ ಸರಕಾರವು ಇದೊಂದು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿತು. ಉದ್ಯಾನವನ್ನು ಹೊರ ಜಗತ್ತಿಗೆ ಪರಿಚಯಿಸಿದ ಬ್ರೈಸ್ನ ಹೆಸರನ್ನೇ ಇಲ್ಲಿಗೆ ಇರಿಸಲಾಯಿತು. 1928ರಲ್ಲಿ ಅದನ್ನು ಅಂದವಾಗಿ ವಿನ್ಯಾಸಗೊಳಿಸಿ ಪ್ರವಾಸಿಗಳ ಆಕರ್ಷಣೆಯ ತಾಣವಾಗಿ ಪರಿವರ್ತಿಸುವ ಕಾರ್ಯಗಳು ಆರಂಭವಾದವು. 1942ರಲ್ಲಿ ಅದಕ್ಕೆ ಹೆಚ್ಚುವರಿಯಾಗಿ 635 ಎಕರೆ ಪ್ರದೇಶವನ್ನು ಸೇರಿಸಲಾಯಿತು.

ವೈಜಾnನಿಕ ಸಮೀಕ್ಷೆಗಳ ನಂಬಿಕೆ ಪ್ರಕಾರ ಬ್ರೆ„ಸ್‌ ಕಣಿವೆಯಲ್ಲಿ 10 ಸಾವಿರ ವರ್ಷಗಳ ಹಿಂದೆ ಜನ ವಸತಿಗಳು ಇದ್ದವು ಎಂಬುದಕ್ಕೆ ಪಾರ್ಕ್‌ನ ದಕ್ಷಿಣ ಭಾಗದಲ್ಲಿರುವ ಕೆಲವು ಶಿಲ್ಪಕಲಾ ರಚನೆಗಳಿಂದ ತಿಳಿದು ಬರುವುದಂತೆ. ಇಲ್ಲಿನ ಮೃದುವಾದ ಬಂಡೆಗಳನ್ನು ನಿಸರ್ಗ ಬೇಕಾಬಿಟ್ಟಿ ಕೊರೆದಿಲ್ಲ. ಹಳ್ಳಗಳ ಮೇಲ್ಭಾಗದಲ್ಲಿ ಅವು ಪುರಾತನ ಸೇತುವೆಯ ಆಕಾರ ತಳೆದಿವೆ. ಬಿದ್ದಿರುವ ರಾಜಮಹಲುಗಳು, ಕಲಾತ್ಮಕವಾದ ಕಿಟಕಿಗಳು, ಪಾವಟಿಕೆಗಳು, ಪ್ರವೇಶದ್ವಾರಗಳು ಇವೆಲ್ಲವೂ ಪುರಾತನ ಅರಸೊತ್ತಿಗೆಯ ಕಾಲದ್ದೆಂಬ ಭ್ರಮೆಯನ್ನೇ ಅದು ಸೃಷ್ಟಿಸಿದೆ. ವೃತ್ತಾಕಾರದ ಒಂದು ಕ್ರೀಡಾಂಗಣ 12 ಮೈಲುದ್ದ, ಮೂರು ಮೈಲು ಅಗಲ, 800 ಅಡಿ ಆಳವಾಗಿದೆ. ಒಂದು ಗೋಡೆ 20 ಮೈಲು ಉದ್ದವಾಗಿ ಹರಡಿದೆ. 200 ಅಡಿಗಿಂತ ಎತ್ತರವಿರುವ ಬುರುಜುಗಳೂ ಇವೆ. ಪಾರ್ಕ್‌ 8ರಿಂದ 9 ಸಾವಿರ ಅಡಿ ಎತ್ತರವಾಗಿದ್ದು ಕೆಲವು ಏಕಶಿಲಾ ರಚನೆಗಳು ಒಂದು ಸಾವಿರ ಅಡಿ ಎತ್ತರ ಇವೆ.

– ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.