ಟೀಚರ್ column: ಆಧುನಿಕ ಯುಗದಲ್ಲಿ ಆಧುನಿಕರಾಗಿರಿ
Team Udayavani, Jan 19, 2017, 12:46 AM IST
ಕಲಿಸುವ ಮತ್ತು ಕಲಿಯುವ ಎರಡೂ ಪದ್ಧತಿಗಳು ಬಹಳಷ್ಟು ಬದಲಾವಣೆಗೊಂಡಿವೆ. ವರ್ತಮಾನಕ್ಕೆ ತಕ್ಕಂತೆ ಬದಲಾಗುವುದೂ ಒಂದು ಶಿಕ್ಷಣವೇ.
ಪಾಠ ಮಾಡುವುದೆಂದರೇನು? ಸರಿಯಾದ ಸಮಯಕ್ಕೆ ಸಿಲೆಬಸ್ ಮುಗಿಸುವುದೇ? ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವಂತೆ ಮಾಡುವುದೇ? ಇರುವ ಪಠ್ಯವನ್ನು ಓದಿ ಹೇಳಿ ಅದರ ಸಾರಾಂಶವನ್ನು ವಿವರಿಸುವುದೇ? ಏನು? ಒಬ್ಬ ಶ್ರೇಷ್ಠ ಶಿಕ್ಷಕ ಹೇಗಿರಬೇಕು? ಪಠ್ಯವನ್ನು ಬೋಧಿಸಿದರಷ್ಟೇ ಉತ್ತಮ ಶಿಕ್ಷಕರಾಗುವುದಿಲ್ಲ. ಪಠ್ಯವಲ್ಲದೆ, ಹೊರಗೆ ನಡೆಯುತ್ತಿರುವ ಸತ್ಯವನ್ನೂ ತಿಳಿಸಿ, ಥಿಯರಿಯೊಂದಿಗೆ ಪ್ರಾಯೋಗಿಕ ಜ್ಞಾನವನ್ನೂ ಬೆಳೆಸುವವನು ಶ್ರೇಷ್ಠ ಶಿಕ್ಷಕ.
ಕೆಲವು ಶಿಕ್ಷಕರಿರುತ್ತಾರೆ. ನೀತಿ ಕತೆಗಳ ಆಗರ ಅವರು. ಮಕ್ಕಳಿಗೆ ಪಾಠದ ಜತೆಗೆ ನೀತಿ ಕತೆಗಳನ್ನೂ ಹೇಳಿ ತಾವು ಕಲಿಯುತ್ತಿರುವುದಕ್ಕೆ ಸಂಪರ್ಕ ಕಲ್ಪಿಸುತ್ತಾರೆ. ನೀವೂ ಹೀಗೆ ನೀತಿವಂತರಾಗಬೇಕು ಎನ್ನುತ್ತಾರೆ. ಸತ್ಯ ಹರಿಶ್ಚಂದ್ರನ ಕತೆಯನ್ನು ಹೇಳುತ್ತಾರೆ. ಗಾಂಧೀಜಿಯ ಆದರ್ಶವನ್ನು ಮನದಟ್ಟು ಮಾಡಿಸುತ್ತಾರೆ. ಶಿಕ್ಷಕ ಹೇಳಿದ್ದನ್ನೆಲ್ಲವನ್ನೂ ಮಕ್ಕಳು ಕೇಳುತ್ತಾರೆಂದಲ್ಲ. ಅದೂ ಈಗಿನ ಸೂಪರ್ಫಾಸ್ಟ್ ಮಕ್ಕಳಿಗೆ ಇದನ್ನೆಲ್ಲ ಹೇಳುವವರು ಒಂದು ಮಟ್ಟಿಗೆ ಅಸಡ್ಡೆಯ ವ್ಯಕ್ತಿಗಳಾಗಿಯೂ ಕಾಣಬಹುದು. ಆದರೂ ಪ್ರತಿ ಕಾಲಕ್ಕೂ ಆದರ್ಶದ ಕನಸಿನಲ್ಲೇ ಬೆಳೆಯಬೇಕು. ಅದು ಎಂದಿಗೂ ವಿದ್ಯಾರ್ಥಿಗಳಿಗೆ ಕೊರತೆ ಮಾಡಬಾರದು.
ಹಾಗಾದರೆ ನೀತಿ ಹೇಳುವುದು ಹೇಗೆ? ಅದನ್ನು ಪ್ರಾಯೋಗಿಕ ವಾಗಿ ತಿಳಿದು ಬೋಧಿಸುವವನು ಶ್ರೇಷ್ಠ ಶಿಕ್ಷಕ. ಆಧುನಿಕ ಯುಗಕ್ಕೆ ಅತ್ಯಾಧುನಿಕ ರೀತಿಯಲ್ಲಿ ಮೂಡಿಬಂದರೆ ವಿದ್ಯಾರ್ಥಿಗಳ ತಲೆಗೆ ಒಂದಿಷ್ಟು ಹೊಕ್ಕಬಹುದು. ಅದಕ್ಕೆ ಬೇಕಾದ ರೀತಿ, ವಿಧಾನವನ್ನು ಕಂಡುಕೊಂಡು, ಕಲಿತುಕೊಳ್ಳುವುದೂ ಶಿಕ್ಷಕರ ಇಂದಿನ ಅಗತ್ಯ. ಎಷ್ಟೋ ಬಾರಿ ವಿದ್ಯಾರ್ಥಿಗಳು ಒಂದು ಕಥೆಯ ಸಾರವನ್ನು ತಿಳಿಯದೇ, ಅದನ್ನು ಭಾಗಶಃ ಅರ್ಥ ಮಾಡಿಕೊಂಡು ತಪ್ಪು ದಾರಿಗೆ ಹೋಗುವ ಸಾಧ್ಯತೆಯೂ ಇರುತ್ತದೆ. ಅಂಥ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವ ಹೊಣೆ ಶಿಕ್ಷಕರದ್ದು. ಲೋಕ ಜ್ಞಾನದ ಮಹತ್ವವನ್ನು ಮನದಟ್ಟು ಮಾಡಿಕೊಡುವುದು ಮತ್ತೂಂದು ಆದ್ಯತೆಯ ಅಂಶ. ಅದರತ್ತಲೂ ಗಮನಹರಿಸುವವ ಶ್ರೇಷ್ಠ ಶಿಕ್ಷಕನೆಂದು ಹೇಳುವುದರಲ್ಲಿ ಸಂಶಯವಿಲ್ಲ.
– ಸಂದೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ