ಷಹಜಾನ್‌ ಮಹಾರಾಜನ ಗುಲಾಬ್‌ ಜಾಮೂನು


Team Udayavani, Mar 31, 2017, 12:58 AM IST

Gulab-Jamun-30-3.jpg

ಎಲ್ಲರ ಮನೆಯಲ್ಲೂ ಗುಲಾಬ್‌ ಜಾಮೂನು ಮಾಡುವುದೆಂದರೆ ಖುಷಿ. ಅದು ಸುಲಭ ಮತ್ತು ಸರಳ. ಜತೆಗೆ ತಿನ್ನಲೂ ರುಚಿಯಾಗಿರುವುದರಿಂದ ಮಕ್ಕಳಿಗೂ ಇಷ್ಟ. ಈ ಗುಲಾಬ್‌ ಜಾಮೂನಿನಲ್ಲೇ ಹಲವಾರು ವಿಧಗಳಿವೆ. ಒಂದೊಂದಕ್ಕೂ ವಿಶಿಷ್ಟವಾದ ರುಚಿ. ಸಿಹಿ ತಿಂಡಿಗಳಿಗೆ ಎಲ್ಲರ ಮನೆಯಲ್ಲೂ ಮಹಾರಾಜನ ಸ್ಥಾನಮಾನ. ಅದು ಉತ್ತರದ ಗುಲಾಬ್‌ ಜಾಮೂನಿಗಿರಬಹುದು, ದಕ್ಷಿಣದ ಮೈಸೂರು ಪಾಕ್‌ಗಿರಬಹುದು. ಇದಕ್ಕೂ ಕಾರಣವಿದೆ. ಹಲವಾರು ಸಿಹಿತಿಂಡಿಗಳಿಗೆ ಮಹಾರಾಜರ ನಂಟಿದೆ. ಅವುಗಳು ಹೊರಟಿರುವುದು ಮಹಾರಾಜರ ಅರಮನೆಯ ಪಾಕಶಾಲೆಗಳಿಂದ ಎನ್ನುವುದು ವಿಶೇಷ. ಮೈಸೂರು ಮಹಾರಾಜರ ಆಸ್ಥಾನದ ಪಾಕಪ್ರವೀಣರಿಂದ ಮೊದಲಿಗೆ ಸಿದ್ಧವಾದದ್ದು ಮೈಸೂರು ಪಾಕ್‌. ಅದರಲ್ಲೂ ಗಡಿಬಿಡಿಯಲ್ಲಿ ಮಾಡಿದ್ದಂತೆ. ಗುಲಾಬ್‌ ಜಾಮೂನ್‌ ಸಹ ಮೊಘಲರ ದೊರೆ ಷಹಜಾನನ ಆಸ್ಥಾನದ ಪಾಕಶಾಲೆಯಲ್ಲಿ ರಾಜನ ಪ್ರಮುಖ ಬಾಣಸಿಗನೇ ಗಡಿಬಿಡಿಯಲ್ಲೇ ತಯಾರಿಸಿದ್ದಂತೆ ಎನ್ನುತ್ತವೆ ಲಭ್ಯ ಮಾಹಿತಿ.

ಗುಲಾಬ್‌ ಜಾಮೂನು ಎಷ್ಟು ಪರಿಸರ ಪ್ರಿಯವೆಂದರೆ ಅದರ ಹೆಸರಿನಲ್ಲಿರುವ ಎರಡೂ ಪರಿಸರದಿಂದ ಬಂದವುಗಳೇ. ಗುಲಾಬಿ ನೀರನ್ನು ಬಳಸಿದ್ದಕ್ಕೆ ಗುಲಾಬ್‌ ಸೇರಿಕೊಂಡರೆ, ಜಾಮಾನ್‌ಎನ್ನುವ ಹಣ್ಣಿನ ಆಕಾರದಲ್ಲಿದ್ದರಿಂದ ಜಾಮೂನು ಹೆಸರು ಸೇರಿಕೊಂಡಿತಂತೆ. ಪರ್ಸಿಯನ್‌ ಭಾಷೆಯ ಗೋಲ್‌ ಆಬ್‌ (ಗುಲಾಬಿ ನೀರು) ಹೆಸರಿನಲ್ಲಿ ಸೇರಿಕೊಂಡಿದೆ. ಜಾಮೂನಿನ ಜತೆಗಿರುವ ರಸ (ಪಾಕ) ಕ್ಕೆ ಗುಲಾಬಿ ಪರಿಮಳದ ಹನಿಗಳನ್ನು ಸೇರಿಸುತ್ತಾರೆ. ಇದಕ್ಕೆ ಟರ್ಕಿಯ ಮೂಲವಿದೆ. ಮಧ್ಯ ಏಷ್ಯಾದ ಪ್ರವಾಸಿಗರು ಭಾರತಕ್ಕೆ ತಂದರು ಎಂಬ ಮಾತಿದೆ. ಅರಬ್‌ ದೇಶದಲ್ಲಿ ಇದನ್ನೇ ಹೋಲುವಂಥ ತಿಂಡಿಯೊಂದಿದೆಯಂತೆ. ನಮ್ಮ ಗುಲಾಬ್‌ ಜಾಮೂನ್‌ ಅನ್ನು ಹಾಲಿನ ಕೋವಾ ಮತ್ತು ಸಕ್ಕರೆಯಿಂದ ಮಾಡಿದರೆ ಅರಬ್ಬರ ಜಾಮೂನಿಗೆ ಬೇರೆ ಹಿಟ್ಟಂತೆ. ಆದರೆ ಎರಡಕ್ಕೂ ಇರುವ ಸಾಮ್ಯವೆಂದರೆ ಗುಲಾಬಿ ಪರಿಮಳಯುಕ್ತ ಪಾಕ. ಒಂದು ಗುಲಾಬ್‌ ಜಾಮೂನು ಸಾಮಾನ್ಯವಾಗಿ 140 ರಿಂದ 1450 ಕ್ಯಾಲೊರಿಗಳಿರುತ್ತವಂತೆ! ಹಾಲಿನಂಶದಿಂದ ಮಾಡುವುದರಿಂದ ಕ್ಯಾಲ್ಸಿಯಂ ಅಂಶವೂ ಹೆಚ್ಚು. 

ಬ್ರೆಡ್‌ ಗುಲಾಬ್‌ ಜಾಮೂನ್‌
ಬೇಕಾಗುವ ಸಾಮಗ್ರಿಗಳು

6-8 ಬ್ರೆಡ್‌ ತುಂಡು
ಒಂದು ಚಮಚ ಮೈದಾ ಹಿಟ್ಟು
1 ಚಮಚ ನುಣ್ಣಗಿನ ರವೆ
3 ಚಮಚ ಹಾಲು
ಚಮಚ ಏಲಕ್ಕಿ ಪುಡಿ
ಚಮಚ ಸಕ್ಕರೆ ಪುಡಿ
1 ಚಮಚ ಖೋವಾ
1 ಚಮಚ ಕತ್ತರಿಸಿದ ಪಿಸ್ತಾ
1 ಕಪ್‌ ಕರಿಯಲು ಎಣ್ಣೆ

ಮಾಡುವ ವಿಧಾನ
ಕತ್ತರಿಸಿದ ಬ್ರೆಡ್‌ಗಳ ತುಂಡನ್ನು ಪ್ಲೇಟ್‌ ನಲ್ಲಿ ಹಾಕಿ, ಅದರ ಮೇಲೆ ಹಾಲನ್ನು ಹಾಕಿ. ಅನಂತರ ಬಿಸಿಯಾದ ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ಖೋವಾ ಬೆರೆಸಿ.

ಐದು ನಿಮಿಷದ ಅನಂತರ ಬ್ರೆಡ್‌ ತುಂಡುಗಳಿಗೆ ಮೈದಾ ಮತ್ತು ರವೆ ಸೇರಿಸಿ, ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ತುಂಬಾ ಮೆದು ಅಥವಾ ತುಂಬಾ ಗಟ್ಟಿಯಾಗಬಾರದು. ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.

ಎಣ್ಣೆಯನ್ನು ಬಿಸಿಯಾಗಿಟ್ಟು, ತಯಾರಾದ ಉಂಡೆಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಿ.

ಅನಂತರ ಸಕ್ಕರೆ ಪಾಕದಲ್ಲಿ ಅದನ್ನು ಮುಳುಗಿಸಿಡಿ. 2-3 ಗಂಟೆ ಸಕ್ಕರೆ ಪಾಕದಲ್ಲಿ ಉಂಡೆಗಳು ಚೆನ್ನಾಗಿ ನೆನೆಯಲಿ. ಅನಂತರ ಜಾಮೂನ್‌ ಮೇಲೆ ಪಿಸ್ತಾ ತುಂಡುಗಳನ್ನಿಟ್ಟು ಸರ್ವ್‌ ಮಾಡಿ.

ಟಾಪ್ ನ್ಯೂಸ್

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.