ಹೊಸ ಮನೆಗೆ ಹೊಸ ಲುಕ್‌


Team Udayavani, Mar 15, 2017, 12:26 AM IST

House-15-3.jpg

ಮನೆ ನಿರ್ಮಾಣದಲ್ಲಿ ಮರಗಳ ಬಳಕೆ ಹಲವು ಕಾಲದಿಂದಲೂ ಇದೆ. ಆದರೆ, ಒಂದು ಹಂತದಲ್ಲಿ ಟೇರೆಸ್‌ ಮನೆಗಳ ಮಾದರಿಗೆ ಮನಸೋತ ನಾವು ಈಗ ಮತ್ತೆ ಹಳೆಯ, ಸಾಂಪ್ರದಾಯಿಕ ಲುಕ್‌ ಕೊಡುವ ಮನೆಗಳತ್ತ ಫ್ಯಾಷನ್‌ ಹೆಸರಲ್ಲಿ ಮರಳಿ ಬರುತ್ತಿದ್ದೇವೆ. ಆಧುನಿಕ ಮನೆಗಳ ಸೌಂದರ್ಯ ಹೆಚ್ಚಿಸುವಲ್ಲೂ ಇಂದು ಮರಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ದೊಡ್ಡ ಬಜೆಟ್‌ನ ಮನೆಗಳು. ಆಧುನಿಕ ಸೌಕರ್ಯಗಳೆಲ್ಲ ಅದರಲ್ಲಿ ಬೇಕು. ಹೊಸತನದ ಸ್ಪರ್ಶ ಅದರಲ್ಲಿ ಮಿಳಿತವಾಗಿರಲೇಬೇಕು ಎಂದು ಹಪಹಪಿಸುವ ಹಲವು ಮನಸ್ಸುಗಳು ನಮ್ಮ ಜತೆಗಿದ್ದಾರೆ. ವಿಶೇಷವೆಂದರೆ ಎಷ್ಟೇ ಆಧುನಿಕ ಸೌಂದರ್ಯಗಳು ಇದರಲ್ಲಿದ್ದರೂ, ಸಾಂಪ್ರದಾಯಿಕವಾಗಿರಲಿ ಎಂಬ ಆಶಯ ಅವರದ್ದಾಗಿರುತ್ತದೆ. ಕಾರಣ ಸಾಂಪ್ರದಾಯಿಕ ಶೈಲಿಯ ಮನೆಗಳಿಗೆ ತನ್ನದೇ ಆದ ಗತ್ತು ಹಾಗೂ ಗೌರವ ಇದೆ. ಇದಕ್ಕಾಗಿಯೇ ಹೊಸ ಮನೆಗೆ ಹಳೆಯ ಲುಕ್‌ ಇರುತ್ತದೆ. ಪ್ರತ್ಯೇಕವಾಗಿ ಮನೆ ಕಟ್ಟುವುದಾದರೆ ಅದನ್ನು ಸಾಂಪ್ರದಾಯಿಕವಾಗಿಯೇ ಮಾಡಲು ಹೆಚ್ಚಿನವರು ಒಲವು ತೋರುತ್ತಾರೆ. ಹಿಂದೆ ಇದು ಮಾತ್ರ ಜಾರಿಯಲ್ಲಿದ್ದರೆ ಈಗ ಇದುವೇ ಫ್ಯಾಷನ್‌ ಆಗಿದೆ. ಮನೆಯನ್ನು ಪೂರ್ಣವಾಗಿ ಮರಗಳ ವಿಭಿನ್ನತೆಯ ಮೂಲಕ ಬಂಧಿಸುವ ವಿಶೇಷ ಶೈಲಿಗಳು ಈಗ ಜಾರಿಯಲ್ಲಿದೆ.

ಟೇರೆಸ್‌ ಮನೆಯ ಮೇಲ್ಗಡೆಯಲ್ಲಿ ಶೀಟ್‌ ಹಾಸುವ ಕೆಲವರ ವಿಧಾನವನ್ನು ಈಗ ಮೀರಿ, ಮರಗಳ ಮುಚ್ಚಳಕ್ಕೆ ಮುಂದಾಗುತ್ತಿದ್ದಾರೆ. ಮನೆಯ ಉಷ್ಣತೆಯನ್ನು ಕಡಿಮೆ ಮಾಡಲು ಹಾಗೂ ನೋಡುವುದಕ್ಕೆ ಆಕರ್ಷಕವಾಗಿ ಕಾಣಬೇಕು ಎಂಬ ನೆಲೆಯಲ್ಲಿ ಟೇರೆಸ್‌ ಮೇಲ್ಭಾಗದಲ್ಲೂ ನಾನಾ ತರದ ಮರದ ಕೆತ್ತನೆಗಳನ್ನು ಪಡಿಮೂಡಿಸುವ ಕೆಲಸ ನಡೆಯುತ್ತಿದೆ. ರೀಪರ್‌ ಕಾನ್ಸೆಪ್ಟ್ಗಳನ್ನು ಕೆಲವರು ಜಾರಿಗೆ ತಂದಿದ್ದಾರೆ. ಹಳೆಯ ಶೈಲಿ ಹಾಗೂ ಆಧುನಿಕ ಸ್ಪರ್ಶ ನೀಡುವ ಮೂಲಕ ಮನೆಗೆ ಹೊಸತನ ನೀಡುವ ಪ್ರಯತ್ನವಿದು. ಸಿಂಗಲ್‌ ಮನೆ ಕಟ್ಟುವುದಾದರೆ ಮನೆಯ ಮುಂಭಾಗದ ‘ಸಿಟ್‌ ಔಟ್‌’ ಅನ್ನು ಮರದ ಲುಕ್‌ ನೀಡುವುದರ ಮೂಲಕ ಕಂಗೊಳಿಸುವಂತೆ ಮಾಡಲಾಗುತ್ತದೆ. ನಿಲ್ಲುವ ಹಾಗೂ ಕುಳಿತು ವ್ಯವಹರಿಸಲು ಬೇಕಾಗುವಷ್ಟು ಸ್ಥಳವನ್ನು ಬಿಟ್ಟು ಹೊರಭಾಗಕ್ಕೆ ಮರದ ಡಿಸೈನ್‌ಗಳ ಮೂಲಕ ಒಪ್ಪ ನೀಡಲಾಗುತ್ತದೆ. ವಿಶೇಷವೆಂದರೆ ಕೇರಳ ಶೈಲಿಯಲ್ಲಿ ಇದರ ವಿನ್ಯಾಸ ಮಾಡಲಾಗುತ್ತದೆ. 

ಬಾಲ್ಕನಿಯಲ್ಲಿ ಕೆತ್ತನೆಗಳು
ಫ್ಲ್ಯಾಟ್‌ಗಳಲ್ಲಿರುವ ಬಾಲ್ಕನಿಯನ್ನು ಮರದ ಕೆತ್ತನೆಗಳ ಮೂಲಕ ವೈಭವೀಕರಿಸುವ ಶೈಲಿಯೂ ಈಗ ಚಾಲ್ತಿಯಲ್ಲಿದೆ. ಲಿಂಟಲ್‌ ಕೆಲಸ ನಡೆಸುವಾಗಲೇ ಮರದ ವಿನ್ಯಾಸವನ್ನು ಜೋಡಿಸಲಾಗುತ್ತದೆ. ಇದು ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮನೆಗಳಿಗಿಂತಲೂ ಅಧಿಕವಾಗಿ ಕಾರ್ಪೊರೇಟ್‌ ಕಚೇರಿ, ಆಫೀಸ್‌ಗಳಲ್ಲಿ ಬಹುವಾಗಿ ಬಳಕೆಯಲ್ಲಿವೆ. ಮರದ ವಿನ್ಯಾಸದ ಮಧ್ಯೆ ಇಂಟೀರಿಯರ್‌ ಡಿಸೈನ್‌ಗಳನ್ನು ಪೋಣಿಸಿಕೊಂಡು ಅದಕ್ಕೆ ಬೆಳಕಿನ ವ್ಯವಸ್ಥೆ ನೀಡಿದರೆ ಲುಕ್‌ ಬರುತ್ತದೆ. 

ಮರದ ಲ್ಯಾಮಿನೇಟ್‌ ಬಳಕೆಯೂ ಪ್ರಸ್ತುತ ಹೆಚ್ಚು ಜನಜನಿತ. ವೀನಿಯರ್‌ ಬಳಕೆಯಲ್ಲೂ ಹೆಚ್ಚು ಸ್ಟೈಲಿಶ್‌ ಕಾಣುತ್ತದೆ. ಲ್ಯಾಮಿನೇಟ್‌ ಮರದ ಶೀಟ್‌ಗಳನ್ನು ಹಾಕುವ ಮೂಲಕ ಅದರ ಮೇಲೆ ಮರದ ಪಾಲಿಷ್‌ ಮಾಡಿದರೆ ಸುಂದರವಾಗಿ ಕಾಣುತ್ತದೆ. ಅದರ ಮೇಲೆ ಲೈಟ್‌ ಡಿಸೈನ್‌ ಮಾಡಿದರೆ ಮರದ ಒರಿಜಿನಲ್‌ ಕಲರ್‌ ಸಿಗುತ್ತದೆ. ಆಗ ಬಾಲ್ಕನಿಗೆ ಹಾಕಿದ್ದು, ಒರಿಜಿನಲ್‌ ಮರಗಳು ಎಂಬಷ್ಟು ಖಾತ್ರಿ ಮೂಡಿಸುತ್ತವೆ. ಮನೆಗೆ ಪ್ರವೇಶ ಮಾಡುವಾಗಲೇ ಬಾಗಿಲನ್ನು ಕಂಡಾಗಲೇ ಮನಸ್ಸು ತುಂಬಿ ಬರುವಂತಾಗಬೇಕು. ಹೀಗಾಗಿ ಮನೆಯ ಬಾಗಿಲಿಗೆಂದೇ ಲಕ್ಷಾಂತರ ರೂ. ಖರ್ಚು ಮಾಡುವುದಿದೆ. ಮನೆಯ ಬಾಗಿಲು ಕೇರಳ ಶೈಲಿಯಲ್ಲಿ ಇರಬೇಕು ಎಂಬ ತುಡಿತದೊಂದಿಗೆ ಅಲ್ಲಿನ ಶೈಲಿಯೇ ಈಗ ಇಲ್ಲಿ ಬಳಕೆಯಲ್ಲಿದೆ. ತರತರದ ಮರದ ಕೆತ್ತನೆಗಳು, ದೇವರ ಚಿತ್ರಗಳು ಹೀಗೆ ಎಲ್ಲವೂ ಬಾಗಿಲಿನಲ್ಲಿ ಬೆಸೆದುಕೊಂಡಿರುತ್ತದೆ. 

ಮುಂಬಾಗಿಲು
ಮುಂಬಾಗಿಲು ಮನೆಯ ಕಣ್ಮನ ಸೆಳೆಯುವಂತಿರಬೇಕು. ಆಲಂಕಾರಿಕವಾಗಿ ಕೆತ್ತಿರುವ ಮುಂದಿನ ಬಾಗಿಲುಗಳು ಮನೆಗೆ ಹೆಚ್ಚು ಘನತೆ ತಂದು ಕೊಡುತ್ತದೆ. ಪೂಜಾ ಕೋಣೆಯ ಬಾಗಿಲುಗಳಲ್ಲೂ ನಾನಾ ರೀತಿಯ ಕೆತ್ತನೆಗಳು ಗಮನ ಸೆಳೆಯುತ್ತದೆ. ಒಳಮನೆಯ ಬಾಗಿಲುಗಳಿಗೆ ತೇಗ ಅಥವಾ ಓಕ್‌ ಮರಗಳನ್ನು ಬಳಸುತ್ತಾರೆ. ಅವುಗಳ ವಿನ್ಯಾಸ ಹಾಗೂ ಆಕರ್ಷಕ ಹೊರಮೈ ಕಣ್ಮನ ಸೆಳೆಯುತ್ತದೆ. ವಿವಿಧ ನಮೂನೆಯ ವುಡ್‌ ಗೆùನ್‌ ಫಿನಿಶ್‌ಗಳನ್ನು ಮನೆ ಬಾಗಿಲುಗಳಿಗೆ ಕಪಾಟುಗಳಿಗೆ ಹಾಗೂ ಫಲಕಗಳಿಗೆ ಬಳಸುತ್ತಾರೆ. ಇದು ನೋಡಲು ಸರಳವಾಗಿರುತ್ತದೆ. ಆದರೆ ಒನಪು ಪ್ರಖರವಾಗಿರುತ್ತದೆ. 

ಮನೆಗೆ ಸಾಂಪ್ರದಾಯಿಕ ಟಚ್‌ಗೆ ಹೆಚ್ಚಿದ ಆಸಕ್ತಿ
ಆಧುನಿಕ ಶೈಲಿಯಲ್ಲಿ ಮನೆ ನಿರ್ಮಾಣ ಮಾಡುವಾಗ ಈಗ ಸಾಂಪ್ರಾಯಿಕ ಟಚ್‌ ನೀಡಲು ಜನರು ಹೆಚ್ಚು ಆಸಕ್ತರಾಗಿದ್ದಾರೆ. ಮನೆಯ ಟೇರೆಸ್‌, ಬಾಲ್ಕನಿ, ಬಾಗಿಲು ಇವೆಲ್ಲವನ್ನೂ ಮರದಿಂದಲೇ ಆಕರ್ಷಕವಾಗಿ ಮಾಡುವ ಟ್ರೆಂಡ್‌ ಈಗ ಶುರುವಾಗಿದೆ. ಒಂದೆಡೆ ಬಾಳಿಕೆ, ಇನ್ನೊಂದೆಡೆ ಸಾಂಪ್ರದಾಯಿಕ ಶೈಲಿ ಇವೆರಡೂ ಲಾಭವಾಗಲಿದೆ.
– ಸುನೀಲ್‌ ಕುಮಾರ್‌ ರೈ, ಇಂಟೀರಿಯರ್‌ ಡಿಸೈನರ್‌

– ದಿನೇಶ್‌ ಇರಾ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.