ಬ್ಯಾಂಕಿಗೆ ನೀರವ್‌ ನಾಮ,ಹೀಗಿದೆ ಟ್ವೀಟರ್‌ ಡ್ರಾಮ


Team Udayavani, Feb 24, 2018, 4:20 AM IST

Twitter-Land.jpg

ಸೌರಭ್‌ ಪಂತ್‌
ನೀರವ್‌ ಮೋದಿ ಮತ್ತು ವಿಜಯ್‌ ಮಲ್ಯ ಪ್ರಕರಣಗಳು ನಮಗೆ , ಅಂದರೆ- ಜನಸಾಮಾನ್ಯರಿಗೆ ಕಲಿಸುತ್ತಿರುವ ಪಾಠವೇನು? ಯಾವುದೇ ಕಾರಣಕ್ಕೂ 30-50 ಲಕ್ಷ ಗೃಹ ಸಾಲ ಪಡೆಯಬೇಡಿ. ಆಗ ಬ್ಯಾಂಕಿಗೆ ಬಡ್ಡಿ ಸಮೇತ ಸಾಲ ಹಿಂದಿರುಗಿಸಬೇಕಾಗುತ್ತದೆ. ಅದರ ಬದಲು 3000-5000 ಕೋಟಿ ರೂಪಾಯಿ ಸಾಲ ಪಡೆಯಿರಿ. ಸಾಲ ಮಾಫಿ! 

ರಾಧಾ
ಸಾಮಾನ್ಯ ಭಾರತೀಯನ ಚಿಂತೆ…
1) ಕ್ರಿಕೆಟ್‌ನಲ್ಲಿ ಹಣ ತೊಡಗಿಸಿದರೆ ಲಲಿತ್‌ ಮೋದಿ ತೆಗೆದುಕೊಳ್ಳುತ್ತಾನೆ
2) ಬ್ಯಾಂಕಲ್ಲಿ ಹಣವಿಟ್ಟರೆ ನೀರವ್‌ ಮೋದಿ ತೆಗೆದುಕೊಳ್ಳುತ್ತಾನೆ..
3) ಮನೆಯಲ್ಲಿ ಹಣವಿಟ್ಟರೆ ನರೇಂದ್ರ ಮೋದಿ ತೆಗೆದುಕೊಳ್ಳುತ್ತಾನೆ!

ರಮೇಶ್‌ ಶ್ರೀವತ್ಸ್
ನೀರವ್‌ ಮೋದಿ ಹಗರಣ ಪ್ರೇಮಿಗಳ ದಿನದಂದೇ ಜಗಜ್ಜಾಹೀರಾಗಿದ್ದು ಸರಿಯಾಗಿಯೇ ಇದೆ. ಎಷ್ಟಿದ್ದರೂ ಅದು ಔಟಖೀ ದಿನ!

ಶಿರಿಶ್‌ ಕುಂದೆರ್‌
ಹಿಂದಿನ ದಿನಗಳು ನೆನಪಿವೆಯೇ? ಆಗೆಲ್ಲ ಬ್ಯಾಂಕ್‌ಗಳನ್ನು ಲೂಟಿ ಮಾಡುವವರನ್ನು “ಕಳ್ಳರು’ “ದರೋಡೆಕೋರರು’ ಎನ್ನುತ್ತಿದ್ದರು. ಈಗ ಅವರನ್ನೆಲ್ಲ “ಉದ್ಯಮಿಗಳು’ ಮತ್ತು “ಕೋಟ್ಯಧಿಪತಿಗಳು’ ಎನ್ನುತ್ತಾರೆ. 

ರಾಮ್‌ ಸುಬ್ರಮಣ್ಯಂ
ನೀರವ್‌ ಮೋದಿ, ವಿಜಯ್‌ ಮಲ್ಯರಿಗೆ ಶುಭೋದಯ. ಉಳಿದ ಭಾರತೀಯರು ಅಚ್ಛೇದಿನದ ಕನಸು ಕಾಣುತ್ತಾ ಕುಳಿತುಕೊಳ್ಳಿ!

ಮೈಡ್ಲಿಕ್ಲಾಸಿಕ್‌
ಈ ಮೋದಿ ಅನ್ನುವ ಹೆಸರಿನವರಿಗೆ ಏನಾಗಿದೆಯೋ ತಿಳಿಯದು. ಇವರೆಲ್ಲ ನಮ್ಮ ಹಣ ತೆಗೆದುಕೊಂಡು ವಿದೇಶಗಳಿಗೆ ಹೋಗುತ್ತಾರೆ! 

ಅತುಲ್‌ ಖಾತ್ರಿ
2018ರ ನವರಾತ್ರಿ ವೇಳೆಯಲ್ಲಿ ಇದೇ ಮಾಧ್ಯಮದ ಮಂದಿ ನೀರವ್‌ ಮೋದಿ ಮತ್ತವರ ಮಡದಿ ನೂಜೆರ್ಸಿಯಲ್ಲಿ ದಾಂಡಿಯಾ ಆಡುವುದನ್ನು ಅತ್ಯುತ್ಸಾಹದಿಂದ ಬಿತ್ತರಿಸುತ್ತವೆ ನೋಡುತ್ತಿರಿ. ಬೇಕಿದ್ದರೆ ನೂರು ರೂಪಾಯಿ ಬೆಟ್‌ ಕಟ್ಟಲು ಸಿದ್ಧವಿದ್ದೀರಾ?

ಆರ್‌.ಕೆ.ರಾವ್‌
ಕಸ್ಟಮರ್‌ ಕೇರ್‌: ನಮಸ್ಕಾರ ಸಾರ್‌. 
ನಾವು ಬ್ಯಾಂಕಿಂದ ಕಾಲ್‌ ಮಾಡ್ತಿದೀವಿ. 
ನಿಮ್ಮ ಜೊತೆ ನಾವು ಲೋನ್‌ ಬಗ್ಗೆ ಮಾತಾಡºಹುದಾ? 
ನಾನು: ಅಯ್ಯೋ ನನಗೆ ಸಾಲ ಬೇಡ ರೀ…
ಕಸ್ಟಮರ್‌ ಕೇರ್‌: ಸಾರ್‌ ನಾವು ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಂದ ಮಾತಾಡ್ತಿರೋದು.  ನಿಮಗಲ್ಲ, ನಮಗೆ ಸಾಲ ಬೇಕಿತ್ತು!

ತೂಜಾನೇನಾ 
ಮುಂದಿನ ತಿಂಗಳು ನನ್ನ ಪತ್ನಿಯ ಜೊತೆ ಲಂಡನ್‌ಗೆ ಹೊರಟಿದ್ದೇನೆ. ಎಲ್ಲಿ ನನ್ನ ವೀಸಾ ರಿಜೆಕ್ಟ್ ಆಗುತ್ತೋ ಅಂತ ಭಯ ಶುರುವಾಗಿದೆ. ಯಾಕಂದ್ರೆ ನಾನು ಇದುವರೆಗೂ ಸಾಲ ಮಾಡಿ ಉದ್ದೇಶಪೂರ್ವಕ ಸುಸ್ತಿದಾರನಾಗಿಲ್ಲ! 

ಬಂಕಿಂಸುಂದರ್‌
ಈ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ಕೆಲಸ ಏನು? ಸಾವಿರಾರು ಕೋಟಿ ರೂಪಾಯಿ ಹಗರಣಗಳಾದ ನಂತರ ಎಚ್ಚೆತ್ತು ಕುಳಿತು ಅವಸರವಾಗಿ ಸಭೆ ನಡೆಸೋದೇ ಅದರ ಕೆಲಸವೇ? 

ಅಮೃತ್‌ ಸಿಂಗ್‌
ಪಾಪ, ಒಂದೆಡೆ ನಮ್ಮ ದೇಶದಲ್ಲಿ ಪ್ರತೀ ವರ್ಷವೂ ರೈತರು ಸಾಲ ತೀರಿಸಲಾಗದೆ, ಬ್ಯಾಂಕುಗಳ 
ಕಾಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಉದ್ಯಮಿಗಳು ಬ್ಯಾಂಕಿನಿಂದ ಸಾಲದ ರೂಪವಾಗಿ ಪಡೆದ-ಲಪಟಾಯಿಸಿದ ಹಣದಲ್ಲೇ ಅದ್ದೂರಿ ಜೀವನ ನಡೆಸುತ್ತಿದ್ದಾರೆ!

ಟಾಪ್ ನ್ಯೂಸ್

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ


MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.