ಕಾಪು: ಶಾಶ್ವತ ಯೋಜನೆಗಳ ಉದ್ಘಾಟನೆ
Team Udayavani, Mar 28, 2017, 3:53 PM IST
ಕಾಪು: ದಕ್ಷಿಣ ಕನ್ನಡ, ಉಡುಪಿ ಮತ್ತುಯ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ಜೇಸಿಐ ವಲಯ ಹದಿನೈದರಲ್ಲಿ ಮೂರು ದಿನಗಳ ಕಾಲ ಅಧಿಕೃತ ಪ್ರವಾಸದಲ್ಲಿರುವ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಆರ್. ಎಸ್. ಪ್ರಭು ಅವರು ಮಾ. 23ರಂದು ಜೇಸಿಐ ಕಾಪು ಘಟಕಕ್ಕೆ ಭೇಟಿ ನೀಡಿ ವಿವಿಧ ಶಾಶ್ವತ ಯೋಜನೆಗಳನ್ನು ಉದ್ಘಾಟಿಸಿದರು.
ಜೇಸಿಐ ಕಾಪುವಿನ ನೇತೃತ್ವದಲ್ಲಿ ಕಾಪು ಮಧು ಮೆಡಿಕಲ್ಸ್ ಮತ್ತು ಶೆಣೈ ಬ್ರದರ್ನ ಸಹಯೋಗದೊಂದಿಗೆ ಕಾಪು ಹೈವೇ ಮತ್ತು ಕಾಪು ಪೇಟೆಯ ರಿಕ್ಷಾ ನಿಲ್ದಾಣ ಮತ್ತು ಟೆಂಪೋ ನಿಲ್ದಾಣದ ಬಳಿ ಅಳವಡಿಸಲಾಗಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಉದ್ಘಾಟಿಸಿ, ಕಾಪು ಜೇಸಿ ಭವನದಲ್ಲಿ ಸುರಕ್ಷಾ ನ್ಯಾಪಿನ್ ಡಿಸ್ಟಾಯ್ ಮೆಷಿನ್ನನ್ನು ಹಸ್ತಾಂತರಿಸಲಾಯಿತು.
ವಲಯ ಹದಿನೈದರ ವಲಯಾಧ್ಯಕ್ಷ ಸಂತೋಷ್ ಜಿ., ವಲಯ ಉಪಾಧ್ಯಕ್ಷರಾದ ಸೌಮ್ಯ ರಾಕೇಶ್, ಸರ್ವಜ್ಞ ತಂತ್ರಿ, ಮರಿಯಪ್ಪ, ಧೀರೇಂದ್ರ ಜೈನ್ ಮೋಹನ್ ವಿಟ್ಲ, ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕ ಅನಿಲ್ ಕುಮಾರ್, ಜೇಸಿಐ ವಲಯ ನಿರ್ದೇಶಕರು ಮತ್ತು ವಲಯಾಧಿಕಾರಿಗಳು, ಕಾಪು ಜೇಸಿಐನ ಅಧ್ಯಕ್ಷ ಸಂದೀಪ್ ಶೆಟ್ಟಿ, ಕಾರ್ಯದರ್ಶಿ ರಮೇಶ್ ನಾಯ್ಕ, ಜೇಸಿರೆಟ್ ಅಧ್ಯಕ್ಷೆ ಸುಖಲಾಕ್ಷಿ ಬಂಗೇರ, ಪೂರ್ವಾಧ್ಯಕ್ಷರಾದ ರಾಜೇಂದ್ರ ಬಿ. ಕೆ., ಅರುಣ್ ಶೆಟ್ಟಿ ಪಾದೂರು, ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ