ಆರ್ಸಿ ಟ್ರೋಫಿ: ಅಂಗವಿಕಲರಿಗೆ ಸಹಾಯಧನ
Team Udayavani, Mar 28, 2017, 4:00 PM IST
ಉಡುಪಿ: ರಾಜೀವನಗರದ ರಾಜೀವನಗರ ಕ್ರಿಕೆಟರ್ಸ್ ಆಶ್ರಯದಲ್ಲಿ ಅಂಗವಿಕಲ ಮತ್ತು ಬಡಜನರ ಸಹಾಯಾರ್ಥವಾಗಿ ರಾಜೀವನಗರ ಮೈದಾನದಲ್ಲಿ ಆಯೋಜಿಸಿದ್ದ 6ನೇ ವರ್ಷದ ಆರ್ಸಿ ಟ್ರೋಫಿ-2017 ಕ್ರಿಕೆಟ್ ಟೂರ್ನಮೆಂಟಿನಲ್ಲಿ ಮಣಿಪಾಲದ ಲೋಕಲ… ಬಾಯ್ಸ… ತಂಡ ಆರ್ಸಿ ಟ್ರೋಫಿ ಮತ್ತು 44,444 ರೂ. ನಗದು ಬಹುಮಾನವನ್ನು ಗೆದ್ದುಕೊಂಡಿತು. ಈ ಸಂದರ್ಭದಲ್ಲಿ ಐವರು ಅಂಗವಿಕಲರಿಗೆ ಸಹಾಯಧನವನ್ನು ವಿತರಿಸಲಾಯಿತು.
ಅಲೆವೂರಿನ ವೀರಕೇಸರಿ ತಂಡ ರನ್ನರ್ಸ್ ಪ್ರಶಸ್ತಿಯೊಂದಿಗೆ 22,222 ರೂ. ನಗದು ಪುರಸ್ಕಾರವನ್ನು ಪಡೆಯಿತು. ಲೋಕಲ… ಬಾಯ್ಸ… ತಂಡದ ಹರ್ಷ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಹಾಗೂ ಅದೇ ತಂಡದ ನಾಗಾರ್ಜುನ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವೀರಕೇಶರಿ ತಂಡದ ಸುಚಿತ್ ಉತ್ತಮ ದಾಂಡಿಗ ಪ್ರಶಸ್ತಿ ಮತ್ತು ಬಿಜಿ ಫ್ರೆಂಡ್ಸ್ ತಂಡದ ಆಶಿಶ್ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದುಕೊಂಡರು.
80 ಬಡಗಬೆಟ್ಟು ಗ್ರಾ. ಪಂ. ಅಧ್ಯಕ್ಷ ಶಾಂತರಾಮ… ಶೆಟ್ಟಿ, ಸದಸ್ಯ ವಿಠಲ… ಅಮೀನ್, ಉಪೇಂದ್ರ ನಾಯಕ್, ಉಡುಪಿ ಬ್ಲಾಕ್ ಕಾಂಗ್ರೆಸ್ಸಿನ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಉದ್ಯಮಿ ಶಶಿ ಮಲ್ಪೆ, ಸುಮತಿ ಶೇರಿಗಾರ್, ಸುನಿಲ… ಶೇರಿಗಾರ್, ಅಶೋಕ್ ಶೇರಿಗಾರ್, ಕೃಷ್ಣ ಶೆಟ್ಟಿ, ಮಲ್ಲೇಶ್, ಆರ್ಸಿ ತಂಡದ ಮುಖ್ಯಸ್ಥ ನಾಗರಾಜ ರಾಜೀವ ನಗರ, ಸದಸ್ಯರಾದ ಸುಧೀರ್ ಶೇರಿಗಾರ್, ಶಿವರಾಮ ಆಚಾರ್ಯ, ಸುಧೀರ್ ಪೂಜಾರಿ, ಮಹಮ್ಮದ್ ಕಲ್ಫಾನ್, ಅರುಣ್ ಶೆಟ್ಟಿ, ಸುಕೇತ್, ಸಂದೀಪ್ ಆಚಾರ್ಯ, ಗಣೇಶ್ ಆಚಾರ್ಯ, ನಿತೀಶ್, ಹರೀಶ್, ರವಿಕಿರಣ್, ಸುಕೇಶ್ ಪೂಜಾರಿ, ದಿನೇಶ್, ಬಾಲಕೃಷ್ಣ ಶೆಟ್ಟಿ, ಸಂದೀಪ್, ಪ್ರಭಾಕರ ಭಂಡಾರಿ, ಧೀರಾಜ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ