ತೆಂಕ ಗ್ರಾಮ: ಸುಂಟರಗಾಳಿ; ಹಲವು ಮನೆಗಳಿಗೆ ಹಾನಿ
Team Udayavani, Jul 21, 2017, 8:10 AM IST
ಪಡುಬಿದ್ರಿ: ಗುರುವಾರ ಮುಂಜಾವ 2.30ರ ಸುಮಾರಿಗೆ ಬೀಸಿದ ಸುಂಟರ ಗಾಳಿ, ಮಳೆಯಿಂದ ತೆಂಕ ಗ್ರಾಮದ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ತೆಂಗು, ಮಾವು, ಹಲಸು, ಈಚಲ, ಹಾಳೆ, ಆಲ ಸಹಿತ 50ಕ್ಕೂ ಹೆಚ್ಚಿನ ಮರಗಳು ಧರಾಶಾಯಿಯಾಗಿವೆ. ಡಜನ್ಗೂ ಮಿಕ್ಕಿದ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತೆಂಕ ಗ್ರಾಮವೊಂದರಲ್ಲೇ 3 ಲಕ್ಷ ರೂ.ಗೂ ಮಿಕ್ಕಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ತೆಂಕ ಗ್ರಾಮದ ಸಂದು ದಾಂತಿ ಗರಡಿ ಸಮೀಪದ ನಾರಾಯಣ ಪೂಜಾರಿ ಅವರ ಮನೆಯ ಪೂರ್ವ, ಪಶ್ಚಿಮ ಗೋಡೆ, ಮಾಡಿನ ಮೇಲೆ ಮರಗಳು ಉರುಳಿವೆ. ಮನೆಯ ಅಕ್ಕಪಕ್ಕದಲ್ಲಿ ನವೀನ್ಚಂದ್ರ ಪೂಜಾರಿಯವರಿಗೆ ಸೇರಿರುವ ತೋಟದ 4-5 ತೆಂಗಿನ ಮರಗಳ ಸಹಿತ ಮಾವು, ಹಾಳೆ, ಈಚಲ, ಹಲಸು, ಆಲ ಮುಂತಾದ ಮರಗಳು ಉರುಳಿ ಬಿದ್ದಿವೆ. ಈ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳೂ ಹಾನಿಗೊಳಗಾಗಿವೆ. ಬಲವಾದ ಗಾಳಿ ಅನೇಕ ಬಲಿತ, ಬಲಯುತ ಮರಗಳನ್ನು ಅವುಗಳ ನಡುವಿನಿಂದಲೇ ತುಂಡರಿಸಿದೆ.
ಗರಡಿಯ ಪೂರ್ವ ದಿಕ್ಕಿನಲ್ಲಿರುವ ಗೋಪ ಶೆಟ್ಟಿ ಅವರ ಮನೆ ಹಿಂಬದಿ ಗೋಡೆ, ಮಾಡು ಕುಸಿದಿದೆ. ಈ ಮನೆಯ ಹೆಂಚುಗಳೂ ಹಾರಿ ಹೋಗಿದ್ದು ಸುಮಾರು 60,000 ರೂ. ನಷ್ಟ ಸಂಭವಿಸಿದೆ. ಪೂಲ ಲೀಲಾ ಆರ್. ಶೆಟ್ಟಿ , ಪೂಂದಾಡು ಸುಂದರ ಮೇಸಿŒ ಅವರ ಮಗ ವಿಠಲ ಅವರ ಮನೆಗೆ ಮರದ ರೆಂಬೆ ಬಿದ್ದು ನಷ್ಟ ಸಂಭವಿಸಿದೆ.
ತೆಂಕ ಗ್ರಾಮ ಹಾಗೂ ಅಲ್ಲಿನ ಗರಡಿ ಬದಿಯಿಂದ ಪೂಂದಾಡುವರೆಗೆ ಸುಮಾರು 12 ವಿದ್ಯುತ್ ಕಂಬಗಳು ಧೆರೆಗೊರಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ