“ಅವಳು’ ಪ್ರಾರ್ಥಿಸುತ್ತಾಳೆ ಎಲ್ಲರಿಗಾಗಿ…


Team Udayavani, Mar 29, 2017, 3:45 AM IST

ellarigagi.jpg

ಈ ದಿನ ಯುಗಾದಿ. ಹೇಳಂಬಿನಾಮ ಸಂವತ್ಸರದ ಪ್ರಾರಂಭ. ಹೊಸಯುಗದ ಆದಿ ಅಂದರೆ ಪ್ರಾರಂಭ. ವಸಂತನ ಆಗಮನ. ಎಲ್ಲೆಲ್ಲೂ ಹಸಿರು ಚಿಗುರು ಹೂವುಗಳ ಘಮಘಮ. ಮನೆಯ ಮುಂಬಾಗಿಲಿಗೆ ಮಾವಿನ ತೋರಣ ಕಟ್ಟಿ, ತುದಿಗಳಿಗೆ ಬೇವಿನ ಚಿಗುರು ಸಿಕ್ಕಿಸಿ ಮಲ್ಲಿಗೆಯ ಹಾರವನ್ನು ಅಲಂಕಾರವಾಗಿ ಹಾಕಿ ಚೈತ್ರಮಾಸವನ್ನು ಬರಮಾಡಿಕೊಳ್ಳಬೇಕು ಎಂಬುದು “ಅವಳ’ ರೂಪದಲ್ಲಿರುವ ಅಜ್ಜಿ, ಅಮ್ಮ, ಹೆಂಡತಿ, ಮಗಳು – ಈ ಎಲ್ಲರ ಸದಾಶಯ. ಇವತ್ತು ಪ್ರತಿ ಮನೆಯಲ್ಲೂ ಒಬ್ಬಟ್ಟಿನ ಘಮಲು, ಪಾಯಸದ ಸವಿ. ಎಂಥವರೂ ಅವರ ಶಕ್ತಾನುಸಾರ ಹೊಸ ಬಟ್ಟೆ ಖರೀದಿಸಿ ತೊಟ್ಟು ಸಂಭ್ರಮಿಸುತ್ತಾರೆ. 

ಎಲ್ಲೆಡೆಯೂ ಇರುವ “ಅವಳೂ’ ಹಬ್ಬಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದಾಳೆ. ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನೆಲ್ಲಾ ಖರೀದಿಸಿ ತಂದಿದ್ದಾಳೆ. ಯಾವಾಗಲೂ ದುಡ್ಡಿನ ತಾಪತ್ರಯ ಇದ್ದದ್ದೇ. ಆದರೆ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಮಾಡಬೇಕು ಎಂಬ ಹಂಬಲ. ಕಳೆದ ವಾರವೇ ಗಂಡನನ್ನೂ, ಮಕ್ಕಳನ್ನೂ ಹೊರಡಿಸಿ ಪೇಟೆಗೆ ಕರೆದೊಯ್ದು ಹೊಸ ಬಟ್ಟೆ ಕೊಡಿಸಿದ್ದಾಳೆ. ಪುಟ್ಟ ಮಗಳು ನೆರಿಗೆ ನೆರಿಗೆಯಿರುವ ಗುಲಾಬಿ ಬಣ್ಣದ ಫ್ರಾಕು ಬೇಕೆಂದಾಗ ಅದನ್ನೇ ಕೊಡಿಸಿದ್ದಳು. ಮಗಳು “ಇದು ನನಗೇನಾ ಅಮ್ಮಾ’ ಎಂದು ಖುಷಿಯಿಂದ ಕುಣಿದಾಡಿದಾಗ ಅವಳ ಕಣ್ಣುಗಳಲ್ಲಿ ಸಾರ್ಥಕತೆಯ ಬೆಳಕು. ಗಂಡನಿಗಾಗಿ ಶರ್ಟ್‌ ಪ್ಯಾಂಟ್‌ ಖರೀದಿಸಿದ್ದಾಯಿತು. “ನೀನೂ ಸೀರೆ ತಗೋ’ ಎಂದಾಗ ಆಸೆಯಾದರೂ ಅವರೆಲ್ಲಾ ತಗೊಂಡರೆ ತನಗೆ ಖುಷಿಯಲ್ಲವೇ ಎನಿಸಿತ್ತು. ಆದರೆ ಊರಲ್ಲಿರುವ ತಮ್ಮನ ನೆನಪಾಗಿ ಅವನಿಗಾಗಿ ಒಂದು ಟಿ- ಶರ್ಟ್‌ ತೆಗೆದುಕೊಂಡಳು. ಅವಳಿನ್ನೂ ತನಗಾಗಿ ಸೀರೆ ಕೊಳ್ಳುವುದಕ್ಕೆ ಮೀನಾಮೇಷ ಎಣಿಸುತ್ತಿರುವಾಗ ಗಂಡ “ನೀನೇನೂ ತೆಗೆದುಕೊಳ್ಳದಿದ್ದರೆ ನನಗೂ ಬೇಡ’ ಎಂದು ಪ್ರೀತಿಯಿಂದ ಗದರಿದಾಗ ಆ ಬೆಚ್ಚನೆ ಪ್ರೀತಿಗೆ ಸೋತು ಅವನಿಗಿಷ್ಟವಾದ ಸೀರೆಯನ್ನೇ ಖರೀದಿಸಿದ್ದಳು. 

“ಅವಳು’ ಹಬ್ಬದ ದಿನ ಮುಂಜಾನೆಯೇ ಎದ್ದು ಮಿಂದು ಹೊಸ ಸೀರೆ ಉಟ್ಟು ಮುಂಬಾಗಿಲನ್ನು ದೊಡ್ಡದಾಗಿ ಸಾರಿಸಿ ರಂಗವಲ್ಲಿಯಿಡುತ್ತಾಳೆ. ಅದಕ್ಕೆ ಬಣ್ಣ ತುಂಬುತ್ತಾಳೆ. ಆಗಲೇ ತನ್ನ ಬದುಕೂ ಹೀಗೆ ಬಣ್ಣಬಣ್ಣವಾಗಿರಲಿ ಎಂದು ಬೇಡಿಕೊಂಡಿತ್ತು ಮನಸ್ಸು. ಒಳಗೆ ಬಂದಾಗ ಮಕ್ಕಳು ಕಣ್ಣುಜ್ಜುತ್ತಾ ಎದ್ದು ಬಂದಿದ್ದರು. ಮಗಳನ್ನು, ಮಗನನ್ನು ರಮಿಸಿ ಹಾಲು ಕುಡಿಸಿ ಅಭ್ಯಂಜನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಸಂಭ್ರಮಿಸಿದಳು. ಮುದ್ದಾಗಿ ಕಾಣುತ್ತಿದ್ದ ಮಕ್ಕಳಿಗೆ ದೃಷ್ಟಿ ಬೊಟ್ಟನ್ನಿಟ್ಟು ನೆಟಿಕೆ ಮುರಿಯುತ್ತಾಳೆ. ಮಕ್ಕಳನ್ನು ಆಡಲು ಕಳುಹಿಸಿ ಗಂಡನನ್ನು ಎಬ್ಬಿಸಿ ಸ್ನಾನಕ್ಕೆ ಕಳಿಸಿದಳು. ಬಳಿಕ ಇಬ್ಬರೂ ದೇವರ ಮುಂದೆ ತುಪ್ಪದ ದೀಪ ಬೆಳಗಿಸಿ ಕೈಮುಗಿಯುತ್ತಾರೆ. ಅವಳ ಮನಸ್ಸು ಗಂಡ ಹಾಗು ಪುಟ್ಟ ಮಕ್ಕಳ ಯೋಗಕ್ಷೇಮಕ್ಕಾಗಿ, ಊರಿನಲ್ಲಿದ್ದ ಪ್ರೀತಿಯ ತಮ್ಮನ ಶ್ರೇಯಸ್ಸಿಗಾಗಿ ಬೇಡಿಕೊಳ್ಳುತ್ತದೆ. ತನಗಾಗಿ ಏನೂ ಬೇಡದು ಅವಳ ಮನಸ್ಸು. ತನ್ನ ಸಂಸಾರದ ಸದಸ್ಯರು ನೆಮ್ಮದಿಯಾಗಿದ್ದರೆ ಅದೇ ಅವಳ ತೃಪ್ತಿ. 

– ವೀಣಾ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.