ರಜೆ ಇದ್ದರೇ ಒಳ್ಳೆಯದು


Team Udayavani, Sep 13, 2017, 8:00 AM IST

raje.jpg

ರಜೆ ಇಲ್ಲದೆಯೂ ಆಕೆ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬಲ್ಲಳಾದರೂ ಇಲ್ಲಿ ಎಲ್ಲರ ಆತಂಕವೂ ಒಂದೇ ಸಮನಾಗಿರುವುದಿಲ್ಲ. ಒಬ್ಬೊಬ್ಬರದೂ ಬೇರೆ ಬೇರೆ ರೀತಿಯದ್ದೇ ಆಗಿರುತ್ತದೆ. 

ಹೆಂಗಸರಿಗೆ ಋತುಸ್ರಾವದ ಆ ದಿನಗಳಲ್ಲಿ, ಅದೂ ಉದ್ಯೋಗದಲ್ಲಿರುವವರಿಗೆ ಕೊಂಚ ವಿಶ್ರಾಂತಿ ಬೇಕೇ ಬೇಕು. ಇತ್ತೀಚಿನ ದಿನಗಳಲ್ಲಿ ಈ ನಿಯಮವೇನೂ ಜಾರಿಗೆ ಬರದೆ ಆ ನೋವಿನ ದಿನಗಳಲ್ಲೂ ಸಹ್ಯವೋ, ಅಸಹ್ಯವೋ, ಮನೆಯ ಒಳ ಹೊರಗೆ ದುಡಿಯುತ್ತಲೇ ಬಂದಿದ್ದಾಳಾದರೂ ಇತ್ತೀಚಿನ ದಿನಗಳಲ್ಲಿ ಇದಕ್ಕಾಗಿ ರಜೆ ಇದ್ದರೆ ಒಳ್ಳೆಯದೆಂಬುದು ನನ್ನ ಅಭಿಪ್ರಾಯ. ಒಂದು ರೀತಿ ಇದರಿಂದ ಅವರ ಆ ದಿನಗಳು ಜಗಜಾjಹೀರಾಗುವುದು ದಿಟವಾದರೂ ಈ ವಿಷಯದಲ್ಲಿ ಮಕ್ಕಳ ಕುತೂಹಲವನ್ನೂ ಹೆಚ್ಚಿಸಬಹುದಾದರೂ ಅಂದಿನ ಆ ದಿನದಲ್ಲಿ ದಣಿದ ಮನಕ್ಕೆ ವಿಶ್ರಾಂತಿ ಅವಶ್ಯಕ ಎನಿಸುತ್ತೆ.

ರಜೆ ಇಲ್ಲದೆಯೂ ಆಕೆ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬಲ್ಲಳಾದರೂ ಇಲ್ಲಿ ಎಲ್ಲರ ಆತಂಕವೂ ಒಂದೇ ಸಮನಾಗಿರುವುದಿಲ್ಲ. ಒಬ್ಬೊಬ್ಬರದೂ ಬೇರೆ ಬೇರೆ ರೀತಿಯದ್ದೇ ಆಗಿರುತ್ತದೆ. ಕೆಲವರಿಗೆ ವಿಪರೀತ ಸ್ರಾವವಾಗಿ ಕಷ್ಟವಾದರೆ, ಇನ್ನು ಕೆಲವರು ಆ ದಿನಗಳನ್ನು ಆರಾಮದಿಂದಲೇ ಕಳೆಯುತ್ತಾರೆ. ಕೆಲವರಿಗೆ ಈ ಮೊದಲನೆಯ ದಿನವೆಂಬುದು ಯಮಯಾತನೆಯ ಪರಿಸ್ಥಿತಿ. ಯಾರಲ್ಲೂ ಹೇಳಿಕೊಳ್ಳಲಾಗದಂಥದ್ದು. 

ಮೊದಲು ನಮ್ಮ ಕಾಲದಲ್ಲಿ ಆ ದಿನಗಳಲ್ಲಿ ನಾವು ಬಹಿಷ್ಠೆಯರಾಗಿದ್ದು ಹಿರಿಕಿರಿಯರೆಲ್ಲರಿಗೂ ತಿಳಿದಿರುತ್ತಿತ್ತು. ಎಲ್ಲರ ಮುಂದೆ ಚಾಪೆ ಚೊಂಬಿನ ಜೊತೆ ಮೂಲೆ ಹಿಡಿದು ಕುಳಿತರೂ ಏನೂ ಅನಿಸುತ್ತಿರಲಿಲ್ಲ. ನಂತರದ ದಿನಗಳಲ್ಲಿ ಅದು ಗುಟ್ಟಾಗಿ ಹೋಯಿತು. ಹೊರಗೆ ಕೂಡದೆ, ಒಳಗಡೆ ಇದ್ದು ಹಿರಿಯರ ದೃಷ್ಟಿಯಲ್ಲಿ ಅಪರಾಧಿಯಾದರೂ ನಾಚಿಕೆಯಿಂದ ಸುಮ್ಮನೆ ಒಳಗಿದ್ದು ಬಿಡುತ್ತಿದ್ದರು. ಆದರೀಗ ಈ ದಿನಗಳಲ್ಲಿ ಮಾನಸಿಕ ಒತ್ತಡ ಹೆಚ್ಚು. ಅದರೊಡನೆ ಕೆಲಸದ ಒತ್ತಡವೂ ಸೇರಿ ಮಾನಸಿಕವಾಗಿ ದೈಹಿಕವಾಗಿ ಅವರಿಗೆ ಮತ್ತಷ್ಟು ಇರಿಸುಮುರಿಸು ಉಂಟು ಮಾಡುತ್ತೆ. ಅಂಥದ್ದರಲ್ಲಿ ಮುಟ್ಟಿನ ದಿನ ನೋವೂ ಜೊತೆಯಾದರೆ ಅವರು ಸಿಡಿಮಿಡಿಗೊಳ್ಳುವುದು ಸಹಜ.

ಮೊದಲಿನವರು ಮಾಡಿದ್ದ ಎಲ್ಲಾ ನಿರ್ಧಾರಗಳೂ ವೈಜಾnನಿಕ ದೃಷ್ಟಿಯಿಂದ ಸರಿಯಾಗಿತ್ತು. ಆ ದಿನಗಳಲ್ಲಿ ಅವರು ಸುಮ್ಮನೆ ಕುಳಿತೋ, ಅಥವ ಮಲಗಿಯೋ ಆ ಮೂರು ದಿನಗಳನ್ನು ಕಳೆಯಬಹುದಿತ್ತು. ಆದರೀಗ ಹಾಗಾಗುವುದಿಲ್ಲ. ಮೊದಲಿನಂತೆ ಈಗ ಅವಿಭಕ್ತ ಕುಟುಂಬಗಳೂ ಇಲ್ಲ. ಇಲ್ಲಿ ಎಲ್ಲವನ್ನೂ ಮನೆಯೊಡತಿಯೇ ನಿಭಾಯಿಸಬೇಕಾಗುತ್ತದೆ. ಬೇರೆ ದೇಶಗಳ ಹೆಂಗಸರ ಬಗೆಗಿನ ಈ ರೀತಿಯ ಔದಾರ್ಯ ಸರಿಯಾಗಿದೆ. ನಮ್ಮ ದೇಶದಲ್ಲೂ ಇದೇ ನೀತಿಯನ್ನು ಜಾರಿಗೆ ತಂದರೆ ಒಳ್ಳೆಯದು. ಆ ದಿನಗಳಲ್ಲಿ ಅವರಿಗೆ ಕಡೆಯ ಪಕ್ಷ ಒಂದು ದಿನದ ಮಟ್ಟಿಗಾದರೂ ರಜೆ ದೊರೆತರೆ ಒಳ್ಳೆಯದೆಂದು ನನ್ನ ಅಭಿಪ್ರಾಯ.

– ಸುಜಲಾ ಘೋರ್ಪಡೆ, ನ್ಯಾನಪ್ಪನಹಳ್ಳಿ, ಬೆಂಗಳೂರು

ಟಾಪ್ ನ್ಯೂಸ್

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.