ಬಾಲಿವುಡ್‌ನ‌ಲ್ಲಿ ಮಿಂಚಿದ ತಾಪಸಿ 


Team Udayavani, Feb 24, 2017, 3:50 AM IST

23-YUVA-5.jpg

ಹಣೆಬರಹ ಬದಲಾಯಿಸಲು ಒಂದೇ ಒಂದು ಚಿತ್ರ ಸಾಕು ಎನ್ನುವುದಕ್ಕೊಂದು ತಾಜಾ ಉದಾಹರಣೆ ತಾಪಸಿ ಪನ್ನು. ಪಿಂಕ್‌ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ತಾಪಸಿ ಈಗ ಬಾಲಿವುಡ್‌ ನಿರ್ದೇಶಕರ ಕಣ್ಮಣಿ. ಈ ವರ್ಷ ತಾಪಸಿ ನಾಯಕಿಯಾಗಿರುವ ಕನಿಷ್ಠ ಐದು ಚಿತ್ರಗಳು ಬಿಡುಗಡೆಯಾಗಲಿವೆ. ಎರಡು ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ನಿತ್ಯ ನಿರ್ಮಾಪಕರು ಮತ್ತು ನಿರ್ದೇಶಕರು ಆಕೆಯ ಕಾಲ್‌ಶೀಟ್‌ಗಾಗಿ ಸಾಲುಗಟ್ಟಿ ಬರುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಪಿಂಕ್‌ ಯಶಸ್ಸು. ಪಿಂಕ್‌ ನಲ್ಲಿ ಲೈಂಗಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಹೆಣ್ಣಾಗಿ ಸ್ಮರಣೀಯ ಅಭಿನಯ ನೀಡಿದ ಬಳಿಕ ನಿರ್ದೇಶಕರು ತಾಪಸಿಯನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. 

ತಮಿಳು-ತೆಲುಗಿನಲ್ಲಿ ಬರೀ ನಾಯಕನ ಜತೆಗೆ ಡ್ಯುಯೆಟ್‌ ಹಾಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತಾಪಸಿ ಈಗ ಬಾಲಿವುಡ್‌ನ‌ಲ್ಲಿ ಕಂಗನಾ ರಣಾವತ್‌ ಲೆವೆಲಿನಲ್ಲಿದ್ದಾಳೆ. ಕೆಲವು ವಿಚಾರಗಳಲ್ಲಿ ಇಬ್ಬರ ನಡುವೆ ಕೆಲವೊಂದು ಸಾಮ್ಯತೆಗಳಿವೆ. ಕಂಗನಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದ ನಟಿ. ಯಾವುದೇ ಸಿನೆಮಾ ಹಿನ್ನೆಲೆ ಇಲ್ಲದಿದ್ದರೂ ಎರಡೆರಡು ರಾಷ್ಟ್ರಪ್ರಶಸ್ತಿ ವಿಜೇತೆ. ತಾಪಸಿ ಕೂಡ ಇದೇ ಹಾದಿಯಲ್ಲಿದ್ದಾಳೆ. ಪಿಂಕ್‌  ಈ ಸಲ ಪ್ರಶಸ್ತಿಗಳಿಗೆ ಪ್ರಬಲ ಸ್ಪರ್ಧೆ ಕೊಡುವ  ಸಾಧ್ಯತೆಯಿದೆ. ತಾಪಸಿ ನಟಿಸಿದ ಘಾಜಿ ಅಟ್ಯಾಕ್‌ ಮತ್ತು ರನ್ನಿಂಗ್‌ ಶಾದಿ ಚಿತ್ರಗಳು ಒಂದೇ ವಾರ ಬಿಡುಗಡೆಯಾಗಿವೆ. ತಡಾR, ನಾಮ್‌ ಶಬನಾ ಮತ್ತು ಜುಡ್ವಾ 2 ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ಈ ಪೈಕಿ ಜುಡ್ವಾ 2  ಕೆಲವು ವರ್ಷಗಳ ಹಿಂದೆ ಸಲ್ಮಾನ್‌ ನಾಯಕನಾಗಿ ನಟಿಸಿದ್ದ ಸೂಪರ್‌ ಹಿಟ್‌ ಚಿತ್ರ ಜುಡ್ವಾದ ಸೀಕ್ವೆಲ್‌. ಎರಡನೇ ಭಾಗದಲ್ಲಿ ವರುಣ್‌ ಧವನ್‌ ನಾಯಕ. ಈ ಚಿತ್ರದ ಮೇಲೆ ಕಂಗನಾ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾಳೆ. ಎಲ್ಲ ಸರಿಯಾದರೆ ಇನ್ನೂ ಎರಡು ಚಿತ್ರಗಳಿಗೆ ತಾಪಸಿ ಸಹಿ ಹಾಕಲಿದ್ದಾಳೆ. ಅಲ್ಲಿಗೆ 2017 ಬಾಲಿವುಡ್‌ನ‌ಲ್ಲಿ ತಾಪಸಿಯ ವರ್ಷ ಎನ್ನಬಹುದು. ಹೊಸಬರಿಗೆ ಈ ರೀತಿ ಅವಕಾಶ ಸಿಗಬೇಕು ಎನ್ನುವುದು ತಾಪಸಿಯ ಅಭಿಪ್ರಾಯ. ಪಾತ್ರ ನೋಡಿಕೊಂಡು ಕಾಲ್‌ಶೀಟ್‌ ಕೊಡುತ್ತೇನೆ ಎನ್ನುವುದೆಲ್ಲ ಅವಕಾಶ ಸಿಗದವರ ಬೊಗಳೆ ಮಾತುಗಳು. ಬೆನ್ನುಬೆನ್ನಿಗೆ ನಟಿಸುತ್ತಾ ಇದ್ದರೆ ಮಾತ್ರ ಇಲ್ಲಿ ಗಟ್ಟಿಯಾಗಿ ತಳವೂರಲು ಸಾಧ್ಯ ಎನ್ನುವುದನ್ನು ತಾಪಸಿ ದಕ್ಷಿಣದ ಚಿತ್ರರಂಗದ ನಾಲ್ಕೆ ç ದು ವರ್ಷಗಳ ಅನುಭವದಿಂದ ಕಂಡುಕೊಂಡಿದ್ದಾಳೆ.

ಟಾಪ್ ನ್ಯೂಸ್

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.