ವೈಯಾರದ ಮಾನಿನಿ ಕಿಯಾರಾ ಆಡ್ವಾಣಿ 


Team Udayavani, Mar 17, 2017, 3:50 AM IST

17-MAHILA-3.jpg

1994ರಲ್ಲಿ ಬಂದ ಮೊಹ್ರಾ ಚಿತ್ರದ ತು ಚೀಝ್ ಬಡಿ ಹೈ ಮಸ್ತ್ ಮಸ್ತ್  ಹಾಡಿನ ಮೋಡಿಗೆ ಒಳಗಾದವರು ಯಾರು. ರವೀನಾ ಟಂಡನ್‌ ಮತ್ತು ಅಕ್ಷಯ್‌ ಕುಮಾರ್‌ ಸೊಂಟ ಬಳುಕಿಸಿ ಕುಣಿದಿದ್ದ ಈ ಮಾದಕ ಹಾಡು ಈಗಲೂ ಪಡ್ಡೆ ಹುಡುಗರಿಗೆ ಅಚ್ಚುಮೆಚ್ಚು. ದ ಮೆಶಿನ್‌ ಚಿತ್ರದಲ್ಲಿ ಮತ್ತೂಮ್ಮೆ ತು ಚೀಝ್ ಬಡಿ ಹೈ ಮಸ್ತ್ ಮಸ್ತ್  ಹಾಡು ಮತ್ತೂ ಮಾದಕವಾಗಿ ಇನ್ನೊಮ್ಮೆ ಮೋಡಿ ಹಾಕಲು ಬರುತ್ತಿದೆ. ಅಂದಹಾಗೆ ದ ಮೆಶಿನ್‌ನಲ್ಲಿ ರವೀನಾ ಜಾಗದಲ್ಲಿ ಈ ಹಾಡಿಗೆ ಕಿಯಾರಾ ಆಡ್ವಾಣಿ ಸೊಂಟ ಕುಲುಕಿಸಿದ್ದಾಳೆ. ಯಾರೀಕೆ ಕಿಯಾರಾ ಆಡ್ವಾಣಿ ಎಂದು ಕೇಳಿದಿರಾ?

ಕ್ರಿಕೆಟಿಗ ಧೋನಿಯ ಜೀವನ ಕುರಿತು ಬಂದ ಎಂ. ಎಸ್‌. ಧೋನಿ- ದ ಅನ್‌ಟೋಲ್ಡ್‌ ಸ್ಟೋರಿಯಲ್ಲಿ ಧೋನಿಯ ಹೆಂಡತಿ ಸಾಕ್ಷಿಯಾಗಿ ನಟಿಸಿದ ಚೆಲುವೆ. ಇದು ಕಿಯಾರಾಳ ಎರಡನೇ ಚಿತ್ರ. ಇದಕ್ಕೂ ಮೊದಲು ಫ‌ಗ್ಲಿ ಎಂಬ ಥ್ರಿಲ್ಲರ್‌ ಕಮ್‌ ಕಾಮೆಡಿ ಚಿತ್ರದಲ್ಲಿ ನಟಿಸಿದ್ದಳು. ಮೊದಲ ಚಿತ್ರ ನೆಲಕಚ್ಚಿದರೆ ಎರಡನೇ ಚಿತ್ರದಲ್ಲಿ ಧೋನಿಯೇ ಮುಖ್ಯವಾಗಿದ್ದ ಕಾರಣ ಕಿಯಾರಾಳ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಸಿಗಲಿಲ್ಲ. ಅಲ್ಲದೆ ಧೋನಿಯ ಮೊದಲ ಲವರ್‌ ಪಾತ್ರದಲ್ಲಿ ನಟಿಸಿದ ದಿಶಾ ಪಠಾನಿಯ ಗ್ಲಾಮರ್‌ ಎದುರು ಕಿಯಾರಾ ತುಸು ಕಳೆಗುಂದಿದ್ದಳು. ಹೀಗಾಗಿ ಧೋನಿಯ ಶೇ. 90 ಕ್ರೆಡಿಟ್‌ ಸುಶಾಂತ್‌ ಸಿಂಗ್‌ ರಜಪೂತನಿಗೂ ಶೇ. 10 ಕ್ರೆಡಿಟ್‌ ದಿಶಾ ಪಠಾನಿಗೂ ಹೋಯಿತು. ಸಾಕ್ಷಿ ಧೋನಿಯಾಗಿ ನಟಿಸಿದ ಕಿಯಾರಾ ಎಲೆಮರೆಯ ಕಾಯಿಯಾಗಬೇಕಾಯಿತು. ಇದೀಗ ತು ಚೀಝ್ ಬಡಿ ಹೈ ಮಸ್ತ್ ಮಸ್ತ್  ಹಾಡಿನ ರಿಮೇಕ್‌ ಕಿಯಾರಾಳಿಗೆ ಭರ್ಜರಿ ಪಬ್ಲಿಸಿಟಿ ಸಿಕ್ಕಿದೆ. ರವೀನಾಳಿಗಿಂತಲೂ ಒಂದು ತೂಕ ಹೆಚ್ಚೇ ಮಾದಕವಾಗಿ ಕುಣಿದಿದ್ದಾಳೆ ಎಂಬ ತಾರೀಫ‌ು ಕೂಡ ಸಿಕ್ಕಿದೆ. ಇದರ ಬೆನ್ನಿಗೆ ಕಿಯಾರಾಳಿಗೆ ತೆಲುಗು ಚಿತ್ರರಂಗದಿಂದ ಆಫ‌ರ್‌ಗಳ ಮೇಲೆ ಆಫ‌ರ್‌ಗಳು ಬರತೊಡಗಿದೆ. ಅಂದ ಹಾಗೆ ಕಿಯಾರಾ ಯಾರೆಂದೇ ಪರಿಚಯಿಸಲಿಲ್ಲ. ಸಿನೆಮಾ ಲೋಕದ ಏನೇನೂ ಸಂಬಂಧವಿಲ್ಲದ ಮಧ್ಯಮ ವರ್ಗದ ಕುಟುಂಬದಿಂದ ಬಂದವಳು ಕಿಯಾರಾ. ಮುಂಬಯಿಯ ಸಿಂಧಿ ಕುಟುಂಬದಲ್ಲಿ ಜನಿಸಿದ ಕಿಯಾರಾಳ ತಂದೆ ವ್ಯಾಪಾರಿ ಹಾಗೂ ತಾಯಿ ಗೃಹಿಣಿ. ತಂದೆ ಮಕ್ಕಳನ್ನು ಬಹಳ ಕಟ್ಟುನಿಟ್ಟಿನಿಂದ ಬೆಳೆಸಿದ್ದರು. ಆದರೆ 3 ಈಡಿಯಟ್ಸ್‌ ಚಿತ್ರ ನೋಡಿದ ಬಳಿಕ ತಂದೆಯ ನಿರ್ಧಾರಗಳು ಬದಲಾದವಂತೆ. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರಕ್ಕೆ ಕಳುಹಿಸಬೇಕೆಂಬ ತೀರ್ಮಾನಕ್ಕೆ ಬಂದರು. ಹೀಗಾಗಿ ಕಿಯಾರ ಚಿತ್ರರಂಗಕ್ಕೆ ಬರುವುದು ಸಾಧ್ಯವಾಯಿತು. 

ಅನುಪಮ್‌ ಖೇರ್‌ ಆ್ಯಕ್ಟಿಂಗ್‌ ಸ್ಕೂಲ್‌ನಲ್ಲಿ ಆರು ತಿಂಗಳ ಕೋರ್ಸ್‌ ಮಾಡಿದ್ದು ಬಿಟ್ಟರೆ ಕಿಯಾರಳಿಗೆ ನಟನೆ ಬಗ್ಗೆ ಬೇರೇನೊ ಗೊತ್ತಿರಲಿಲ್ಲ. ಆದರೆ ಅಭಿನಯಿಸುವ ಕಲೆ ಅದೇಗೋ ಒಲಿದು ಬಂದಿತ್ತು. ಇದಕ್ಕೂ ಮಿಗಿಲಾಗಿ ಮನ ಸೆಳೆಯುವ ಗ್ಲಾಮರ್‌ ಲುಕ್‌ ಇದೆ. ಬಾಲಿವುಡ್‌ನ‌ಲ್ಲಿ ಮಿಂಚಲು ಇನ್ನೇನು ಬೇಕು? 

ಟಾಪ್ ನ್ಯೂಸ್

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.