ಕಂಗನಾ-ದ ಡೈರೆಕ್ಟರ್‌


Team Udayavani, May 19, 2017, 3:12 PM IST

Kangana-Ranaut.jpg

ಕೊನೆಗೂ ಕಂಗನಾ ರಣಾವತ್‌ ಅವರ ಅಭಿಮಾನಿಗಳ ಬಹುಕಾಲದ ಕೋರಿಕೆಯೊಂದು ಈಡೇರುತ್ತಿದೆ. ಈ ವರ್ಷಾಂತ್ಯದಲ್ಲಿ ಅದು ಆಗಲಿದೆ ಎಂಬ ಸುಳಿವನ್ನೂ ಕಂಗನಾ ನೀಡಿದ್ದಾಳೆ. ಇದು ಕಂಗನಾಳ ಮದುವೆ ಸುದ್ದಿ ಎಂದು ನೀವು ಭಾವಿಸಿದರೆ ನಿಮ್ಮ ಎಣಿಕೆ ತಪ್ಪು. ಇದು ಕಂಗನಾ ನಿರ್ದೇಶಕಿಯಾಗುತ್ತಿರುವ ಸುದ್ದಿ !

ಚಿತ್ರರಂಗಕ್ಕೆ ಬಂದು ದಶಕ ಪೂರೈಸಿ ಮೂರು ರಾಷ್ಟ್ರಪ್ರಶಸ್ತಿ, ಅಸಂಖ್ಯಾತ ಇತರ ಪ್ರಶಸ್ತಿಗಳೊಂದಿಗೆ ಯಶಸ್ಸಿನ ತುತ್ತತುದಿಗೇರಿ ವಿರಾಜಮಾನಳಾಗಿರುವ ಕಂಗನಾಳ ಚಿತ್ತ ಈಗ ನಿರ್ದೇಶನದತ್ತ ಹರಿದಿದೆ. ಒಂದು ಕಾಮೆಡಿ ಚಿತ್ರದ ಸ್ಕ್ರಿಪ್ಟ್ ಬಹಳ ಸಮಯದಿಂದ ಅವಳ ಮನಸ್ಸಿನಲ್ಲಿ ಸುಳಿದಾಡುತ್ತಿದೆಯಂತೆ. ಇದನ್ನೇ ನಿರ್ದೇಶಿಸುವ ನಿರ್ಧಾರ ಮಾಡಿದ್ದಾಳೆ ಕಂಗನಾ. ಬಾಲಿವುಡ್‌ನ‌ ಅಪ್ಪಟ ಪ್ರತಿಭಾವಂತ ಹಾಗೂ ಅಷ್ಟೇ ವಿವಾದಿತ ನಟಿಯಾಗಿರುವ ಕಂಗನಾ ಮನಸ್ಸಿಗೆ ತೋಚಿದ್ದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳುವ ಛಾತಿಯ ಹೆಣ್ಣು. ಈ ಸ್ವಭಾವದಿಂದ ಚಿತ್ರರಂಗದ ಘಟಾನುಘಟಿಗಳನ್ನೇ ಎದುರು ಹಾಕಿಕೊಂಡರೂ ಎದೆಗುಂದಲಿಲ್ಲ. 

“”ಖಾಲಿ ಕೈಯಲ್ಲಿ ಬಂದ  ನಾನು ಪ್ರತಿಭೆಯೊಂದರಿಂದà ಇಲ್ಲಿ ನೆಲೆ ಕಂಡುಕೊಂಡವಳು. ನನಗೆ ಯಾರೂ ಗಾಡ್‌ಫಾದರ್‌ಗಳಿಲ್ಲ. ಹೀಗಾಗಿ ಯಾರ ಮರ್ಜಿಗೂ ನಾನು ಒಳಪಡುವುದಿಲ್ಲ” ಎನ್ನುವ ನಿರ್ಭೀತ ಧೋರಣೆ ಅವಳದ್ದು. ಹೀಗಾಗಿ ಬಾಲಿವುಡ್‌ನ‌ಲ್ಲಿ ಕಂಗನಾಳಿಗೆ ಸ್ನೇಹಿತರಿಗಿಂತ ಹೆಚ್ಚು ಶತ್ರುಗಳಿದ್ದಾರೆ. ಪ್ರಸ್ತುತ ರಂಗನ್‌, ಮಣಿಕರ್ಣಿಕಾ, ದ ಕ್ವೀನ್‌ ಆಫ್ ಝಾನ್ಸಿ ಚಿತ್ರಗಳಲ್ಲಿ ನಟಿಸುತ್ತಿರುವ ಕಂಗನಾ ಇವುಗಳ ಶೂಟಿಂಗ್‌ ಮುಕ್ತಾಯವಾದ ಕೂಡಲೇ ನಿರ್ದೇಶಕಿಯ ಕ್ಯಾಪ್‌ ಧರಿಸಲಿದ್ದಾಳೆ. ಮತ್ತೂ ಒಂದು ವಿಶೇಷವೆಂದರೆ ತಾನು ನಿರ್ದೇಶಿಸುವ ಚಿತ್ರಗಳಿಗೆಲ್ಲ ನಾನೇ ನಾಯಕಿ ಎಂದೂ ಅವಳು ಘೋಷಿಸಿದ್ದಾಳೆ. 

ಇತರರಿಗಾಗಿ ನಟಿಸಿದ್ದು ಸಾಕಷ್ಟಾಯಿತು. ಇನ್ನು ನಟಿಸುವುದು ನನಗಾಗಿ. ನನಗಿಷ್ಟವಾದ ಪಾತ್ರಗಳನ್ನು ಸೃಷ್ಟಿಸಿ ನಟಿಸುವ ಖುಷಿಯನ್ನು ಅನುಭವಿಸಲು ಈ ನಿರ್ಧಾರ ಎನ್ನುವುದು ಕಂಗನಾಳ ವಿವರಣೆ. ಉತ್ತಮ ಪಾತ್ರಗಳು ಸಿಕ್ಕಿದರಷ್ಟೇ ಇನ್ನು ಬೇರೆ ನಿರ್ದೇಶಕರ ಚಿತ್ರಗಳಲ್ಲಿ ನಟಿಸುತ್ತಾಳಂತೆ. ಇದೇ ವೇಳೆ ವರ್ಷಕ್ಕೆ ಕನಿಷ್ಠ ಒಂದಾದರೂ ಚಿತ್ರ ನಿರ್ದೇಶಿಸಬೇಕೆನ್ನುವುದು ಅವಳ ಇರಾದೆ. ಕಂಗನಾ ಹೆಚ್ಚಾಗಿ ನಟಿಸಿರುವುದು ವಾಸ್ತವಕ್ಕೆ ಹತ್ತಿರವಿರುವ ಗಂಭೀರ ಪಾತ್ರಗಳಲ್ಲಿ. ಆದರೂ ಅವಳ ಇಷ್ಟದ ವಿಷಯ ಹಾಸ್ಯವಂತೆ. ಹೀಗಾಗಿ, ನಿರ್ದೇಶನಕ್ಕೆ ಶ್ರೀಕಾರ ಹಾಕಲು ಕಾಮೆಡಿ ಸಬೆjಕ್ಟ್ ಆಯ್ದುಕೊಂಡಿದ್ದಾಳೆ. ಬೆಸ್ಟ್‌ ಲಕ್‌ ಕಂಗನಾ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.