ಟಾಯ್ಲೆಟ್‌ ಸನಾ ಕಥಾ ! 


Team Udayavani, Aug 4, 2017, 11:29 AM IST

04-YUVA-7.jpg

ಸನಾ ಖಾನ್‌ಗೆ ಕುದುರೆ ರೇಸ್‌ ಹುಚ್ಚು ಶುರುವಾಗಿದೆಯೇ? ಹೀಗೊಂದು ಪ್ರಶ್ನೆ ಕೆಲದಿನಗಳ ಹಿಂದೆ ಬಾಲಿವುಡ್‌ನ‌ಲ್ಲಿ ಸುಳಿದಾಡುತ್ತಿತ್ತು. ಇದಕ್ಕೆ ಕಾರಣ ಸನಾ ಖಾನ್‌ ಪ್ರತಿದಿನ ತಪ್ಪದೆ ಮುಂಬಯಿಯ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ನಡೆಯುವ ಕುದುರೆ ರೇಸ್‌ಗೆ ಹೋಗುತ್ತಿದ್ದದ್ದು. ಸನಾ ಕುದುರೆ ರೇಸ್‌ಗೆ ಹೋಗುತ್ತಿದ್ದದ್ದು ಮಾತ್ರವಲ್ಲದೆ ಅಲ್ಲಿದ್ದ‌ ಜಾಕಿಗಳು ಮತ್ತು ಕುದುರೆ ಪಾಲಕರ ಜತೆಗೆ ಕುದುರೆಗಳ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದಳು. ಯಾವ ತಳಿಯ ಕುದುರೆ ಉತ್ತಮ, ರೇಸ್‌ ಕುದುರೆಯನ್ನು ಸಾಕುವುದು ಹೇಗೆ ಇತ್ಯಾದಿ ವಿಚಾರಗಳ ಕುರಿತು ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದಳು. ಹೀಗಾಗಿ ಎಲ್ಲರೂ ಸನಾ ಖಾನ್‌ ರೇಸ್‌ ಖಯಾಲಿ ಹತ್ತಿಸಿಕೊಂಡಿದ್ದಾಳೆ ಎಂದೇ ಭಾವಿಸಿದ್ದರು. 

ನಿಜ ಸಂಗತಿ ಏನೆಂದರೆ, ಅಕ್ಷಯ್‌ ಕುಮಾರ್‌ ಹೀರೋ ಆಗಿರುವ ಟಾಯ್ಲೆಟ್‌- ಏಕ್‌ ಪ್ರೇಮ್‌ ಕಥಾದಲ್ಲಿ ಸನಾ ಖಾನ್‌ಗೂ ಒಂದು ಪ್ರಮುಖ ಪಾತ್ರವಿದೆ. ಇದರಲ್ಲಿ ಆಕೆ ಕುದುರೆ ಮಾಲಕಿಯಾಗಿ ಕಾಣಿಸಿಕೊಳ್ಳಲಿದ್ದಾಳೆ. ಈ ಪಾತ್ರದ ತಯಾರಿಗಾಗಿ ಸನಾ ನಿತ್ಯ ಮಹಾಲಕ್ಷ್ಮಿ ರೇಸ್‌ಕೋರ್ಸ್‌ಗೆ ಹೋಗಿ ಕುದುರೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಳು. ಹೀಗೆ ಕುದುರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವಂತೆಯೇ ಕ್ರಮೇಣ ಅವಳಿಗೆ ಕುದುರೆ ಮೋಹ ಬೆಳೆದಿದೆ. ಈಗ ತಾನೇ ಒಂದು ಕುದುರೆ ಖರೀದಿಸಿ ಸಾಕುವ ನಿರ್ಧಾರ ಮಾಡಿದ್ದಾಳೆ. ಹೀಗಾಗಿ ಕುದುರೆ ಸಾಕುವ ವಿಧಾನಗಳನ್ನು ಕಲಿತುಕೊಳ್ಳುತ್ತಿದ್ದಾಳೆ. ಅಂದ ಹಾಗೆ ಸನಾ ಖಾನ್‌ ಎಂದರೆ ಯಾರು ಎಂಬ ಕುತೂಹಲ ಮೂಡಿರಬಹುದು. ಸಲ್ಮಾನ್‌ ಖಾನ್‌ ನಟಿಸಿದ ಜೈಹೋದಲ್ಲಿ ನಟಿಸಿದ ಬಳಿಕ ತುಸು ಪ್ರಚಾರಕ್ಕೆ ಬಂದಿರುವ ನಟಿಯೇ ಸನಾ ಖಾನ್‌. ಹಾಗೆಂದು ಜೈಹೋ ಅವಳ ಮೊದಲ ಚಿತ್ರವಲ್ಲ. ಒಂದು ಕನ್ನಡ ಚಿತ್ರವೂ ಸೇರಿದಂತೆ ಸುಮಾರು 15 ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾಳೆ. ಇನ್ನೂ ಆರು ಚಿತ್ರಗಳು ಶೂಟಿಂಗ್‌ನಲ್ಲಿವೆ. 12 ವರ್ಷದಲ್ಲಿ ಐದು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಅವಳದ್ದು. ಜತೆಗೆ 50ಕ್ಕೂ ಅಧಿಕ ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಬಿಗ್‌ಬಾಸ್‌ ಶೋ ಸ್ಪರ್ಧಿಯೂ ಆಗಿದ್ದಳು. 

ಎಲ್ಲ ಬಾಲಿವುಡ್‌ ನಟಿಯರಂತೆಯೇ ಸನಾ ಖಾನ್‌ ಕೂಡ ಪ್ರಸಿದ್ಧಿಗೆ ಬಂದಿರುವುದು ತಮಿಳು ಮತ್ತು ತೆಲುಗು ಚಿತ್ರಗಳ ಮೂಲಕ. ದಕ್ಷಿಣದತ್ತ ಬರುವ ಮೊದಲು ಅವಳು ಹಿಂದಿಯ ಕಡಿಮೆ ಬಜೆಟ್‌ನ ಬ್ರಿ ಗ್ರೇಡ್‌ ಚಿತ್ರಗಳಿಗೆ ನಾಯಕಿಯಾಗಿದ್ದಳು. ಹಾಗೆಯೇ ಸನಾ ದಕ್ಷಿಣದವಳೂ ಹೌದು. ಅವಳ ತಂದೆ ಕೇರಳ ಕಣ್ಣೂರಿನವರು. ಆದರೆ ಸನಾ ಹುಟ್ಟಿ ಬೆಳೆದದ್ದೆಲ್ಲ ಮುಂಬಯಿಯಲ್ಲಿ. ಹೀಗಾಗಿ ದಕ್ಷಿಣದ ಯಾವ ಭಾಷೆಯೂ ಬರುವುದಿಲ್ಲ. ಜೈಹೋ ಬಳಿಕ ಆಕೆ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದಾಳೆ. ಈಗ ಒಳ್ಳೊಳ್ಳೆಯ ಪಾತ್ರಗಳು ಸಿಗುತ್ತಿವೆಯಂತೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.