ಜೈ ಬಿದಿತಾ ಬಾಗ್‌


Team Udayavani, Aug 11, 2017, 6:25 AM IST

BAG.jpg

ಸೆನ್ಸಾರ್‌ ಮಂಡಳಿ ಜತೆಗೆ ನಿರ್ದೇಶಕರು ಅಥವಾ ನಿರ್ಮಾಪಕರು ಗುದ್ದಾಡುವುದು ಕೇಳಿದ್ದೇವೆ. ಇದೀಗ ಬಾಬು ಮೋಶೆ ಬಂದೂಕ್‌ ಬಾಜ್‌ ಚಿತ್ರದ ನಾಯಕಿ ಬಿದಿತಾ ಬಾಗ್‌ ಕೂಡ ಸೆನ್ಸಾರ್‌ ಜತೆಗೆ ತಿಕ್ಕಾಟಕ್ಕೆ ಇಳಿದಿದ್ದಾಳೆ. ಇದಕ್ಕೆ ಕಾರಣವಾಗಿರುವುದು ಸೆನ್ಸಾರ್‌ ಮಂಡಳಿ ಬಾಬುಮೋಶೆ ಬಂದೂಕ್‌ಬಾಜ್‌ ಚಿತ್ರಕ್ಕೆ 48 ಕತ್ತರಿ ಪ್ರಯೋಗ ಮಾಡಿದ ಬಳಿಕವೂ ಎ ಸರ್ಟಿಫಿಕೇಟ್‌ ನೀಡಿರುವುದು. ತನ್ನ ಚಿತ್ರಕ್ಕಾದ ಗತಿಯಿಂದ ರೊಚ್ಚಿಗೆದ್ದಿರುವ ಬಿದಿತಾ ಸೆನ್ಸಾರ್‌ ಮಂಡಳಿಯನ್ನು ತನ್ನ ಅಜ್ಜ-ಅಜ್ಜಿಗೆ ಹೋಲಿಸಿದ್ದಾಳೆ. 

ಚಿಕ್ಕವಳಿರುವಾಗ, “”ಅಜ್ಜ ಮತ್ತು ಅಜ್ಜಿ ಅಲ್ಲಿ ಕೂರಬೇಡ, ಅದು ತಿನ್ನ ಬೇಡ, ಇದು ತೊಡಬೇಡ, ಅಲ್ಲಿಗೆ ಹೋಗಬೇಡ ಎಂದೆಲ್ಲ ನಿರ್ಬಂಧಗಳನ್ನು ವಿಧಿಸುತ್ತಿದ್ದರು. ಈಗ ಸೆನ್ಸಾರ್‌ ಮಂಡಳಿಯೂ ಅದೇ ಕೆಲಸವನ್ನು ಮಾಡುತ್ತಿದೆ. ಯಾವುದು ನೋಡಬೇಕು ಮತ್ತು ಯಾವುದನ್ನು ನೋಡಬಾರದು ಎಂದು ಸೆನ್ಸಾರ್‌ನವರು ತೀರ್ಮಾನಿಸುತ್ತಾರೆ. ಆದರೆ ಇಂಟರ್‌ನೆಟ್‌ ಯುಗದಲ್ಲಿ ಜನರು ತಮಗೆ ಬೇಕಾದದ್ದನ್ನು ನೋಡಿಯೇ ನೋಡುತ್ತಾರೆ” ಎಂದೆಲ್ಲ ಕಿಡಿ ಕಾರಿದ್ದಾಳೆ ಬಿದಿತಾ. 

ಇಷ್ಟಕ್ಕೂ ಬಿದಿತಾ ಇಷ್ಟು ಸಿಟ್ಟಿಗೇಳಲು ಕಾರಣ ಏನು ಗೊತ್ತೆ ? ಚಿತ್ರದಲ್ಲಿ ಬಿದಿತಾಳ ಕೆಲವು ಬಿಸಿ ಬಿಸಿ ದೃಶ್ಯಗಳಿವೆ. ಸೆನ್ಸಾರ್‌ ಈ ದೃಶ್ಯಗಳನ್ನೆಲ್ಲ ಮುಲಾಜಿಲ್ಲದೆ ಕಿತ್ತು ಹಾಕಿದ್ದಾರೆಂದು. ಇದರಿಂದ ಬಿದಿತಾ ಕೆಂಡಮಂಡಲವಾಗಿದ್ದಾಳೆ. 

ಸೆನ್ಸಾರ್‌ನವರು ಹೀಗೆ ಕತ್ತರಿ ಪ್ರಯೋಗ ಮಾಡಿದರೆ ಎಲ್ಲರೂ ಜೈ ಸಂತೋಷಿ ಮಾ ಚಿತ್ರಗಳನ್ನೇ ನಿರ್ಮಿಸಬೇಕಾದೀತು ಎಂದು ತಮಾಷೆ ಮಾಡಿದ್ದಾಳೆ. ಇಷ್ಟಕ್ಕೂ ಯಾರೀಕೆ ಬಿದಿತಾ ಬಾಗ್‌? 

ಬಾಲಿವುಡ್‌ನ‌ಲ್ಲಿ ಅಷ್ಟೇನೂ ಪ್ರಚಲಿತವಿಲ್ಲದ ಹೆಸರಿದು. ಬಂಗಾಲದ ಬೆಡಗಿ ಬಿದಿತಾಳನ್ನು ನಿರ್ದಿಷ್ಟ ಭಾಷೆಯೊಂದಕ್ಕೆ ಸೀಮಿತಗೊಳಿಸುವಂತಿಲ್ಲ. ಏಕೆಂದರೆ, ಈ ಎಳೆಹರೆಯದಲ್ಲೇ ಅವಳು ಆರು ಭಾಷೆಗಳ ಚಿತ್ರಗಳಲ್ಲಿ ನಟಿಸಿಯಾಗಿದೆ. ಬಾಲಿವುಡ್‌ಗೆ ಬಂದದ್ದು ಐದು ವರ್ಷಗಳ ಹಿಂದೆ. ಆದರೆ ಮೊದಲ ಹಿಂದಿ ಚಿತ್ರ ಫ್ರಂ ಸಿಡ್ನಿ ವಿದ್‌ ಲವ್‌ ಅಷ್ಟೇನೂ ಯಶಸ್ಸಾಗದ ಕಾರಣ ಬಿದಿತಾ ಗಮನ ಸೆಳೆದಿರಲಿಲ್ಲ. ಅನಂತರ ಎಕ್ಸ್‌: ಪಾಸ್ಟ್‌ ಈಸ್‌ ಪಾಸ್ಟ್‌, ಟಿ ಫಾರ್‌ ತಾಜ್‌ಮಹಲ್‌ ಚಿತ್ರಗಳಲ್ಲಿ ನಟಿಸಿದರೂ ಅವುಗಳ ಗತಿಯೂ ಅದೇ ಆಯಿತು. ಹೀಗಾಗಿ, ಕೊನೆಯ ಪ್ರಯತ್ನ ಎಂಬಂತೆ ಬಿದಿತಾ ಬಾಬುಮೋಶೆ ಬಂದೂಕ್‌ಬಾಜ್‌ನಲ್ಲಿ ಸಂಪೂರ್ಣ ಇಮೇಜ್‌ ಬದಲಾವಣೆಗೆ ಮುಂದಾಗಿದ್ದಾಳೆ.ಈ ದೃಶ್ಯಗಳಿಗೆ ಸೆನ್ಸಾರ್‌ ಕತ್ತರಿ ಹಾಕಿರುವುದು ಬಿದಿತಾಳನ್ನು ರೊಚ್ಚಿಗೆಬ್ಬಿಸಿರುವುದು ಸಹಜ. 

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.