ತಾಮ್ರದ ಪಾತ್ರೆಯು ಫ‌ಳಫ‌ಳ ಹೊಳೆಯಲಿ!


Team Udayavani, Aug 18, 2017, 6:45 AM IST

falk-copper-cookware-12.jpg

ತಾಮ್ರದ ಪಾತ್ರೆಗಳು ನಮ್ಮ ಸಾಂಪ್ರದಾಯಿಕ ಅಡುಗೆ ಪರಿಕರಗಳು. ತಾಮ್ರದ ಪಾತ್ರೆಗಳು ಬರೇ ಅಡುಗೆ ಪಾತ್ರೆಗಳು ಮಾತ್ರವಲ್ಲದೆ, ಆರೋಗ್ಯಕರ ಅಂಶಗಳಿಂದ ಕೂಡಿದವೂ ಹೌದು! ಮನೆ ಮನೆಗಳಲ್ಲಿ ಹೆಚ್ಚಾಗಿ ಪೂಜೆಗಳಿಗೆ ತಾಮ್ರದ ಪಾತ್ರೆಯನ್ನು ಬಳಸಲಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ರಾತ್ರಿ ನೀರು ತುಂಬಿಸಿ ಬೆಳಿಗ್ಗೆ ಅದನ್ನು ಕುಡಿಯುವುದು, ಅಡುಗೆ ಮಾಡುವುದು, ಊಟ ಮಾಡುವುದರಿಂದಲೂ ನಾವು ಬಹಳಷ್ಟು ಆರೋಗ್ಯಕರ ಅಂಶಗಳನ್ನು ಪಡೆಯುತ್ತೇವೆ ಎನ್ನುವುದು ಆಯುರ್ವೇದದ ಪ್ರಕಾರ ನಮಗೆ ತಿಳಿದ ವಿಷಯ. 

ತಾಮ್ರದ ಪಾತ್ರೆಗಳನ್ನು ನಿರಂತರ ಬಳಸುವುದರಿಂದ ಮತ್ತು ಗಾಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಅದರ ಹೊಳಪನ್ನು ಕಳೆದುಕೊಂಡು ಕಪ್ಪಾಗುತ್ತದೆ. ಹಾಗಾಗಿ ಅವುಗಳಲ್ಲಿಟ್ಟ ಆಹಾರ ಕೆಡದಂತೆ ಮತ್ತು ಯಾವಾಗಲೂ ಹೊಳೆಯುವಂತೆ ನೋಡಿಕೊಳ್ಳುವುದು ಬಹುಮುಖ್ಯ ಕೆಲಸ. ಹಾಗಂತ ಮಾರುಕಟ್ಟೆಯಲ್ಲಿ ದೊರೆಯುವ ಸ್ವತ್ಛಕಗಳನ್ನು ತಂದು ತಾಮ್ರದ ಪಾತ್ರೆಗಳನ್ನು ಸ್ವತ್ಛಗೊಳಿಸುವುದಕ್ಕಿಂತ ಮನೆಯಲ್ಲಿಯೇ ಇರುವ ನೈಸರ್ಗಿಕವಾದ ಕೆಲವು ವಸ್ತುಗಳನ್ನು ಉಪಯೋಗಿಸಿ ತಾಮ್ರದ ಪಾತ್ರೆಗಳನ್ನು ಫ‌ಳಫ‌ಳ ಹೊಳೆಯುವಂತೆ ಮಾಡಬಹುದು. 

ಹುಣಸೆ ಹುಳಿ ಮತ್ತು ಉಪ್ಪು
ದಿನನಿತ್ಯ ಪೂಜೆಗೆ ಬಳಸುವ ತಾಮ್ರದ ಪಾತ್ರೆಗಳನ್ನು ಬರೇ ಸೋಪು ಹಾಕಿ ಎಷ್ಟು ತಿಕ್ಕಿದರೂ ಅವು ಹೆಚ್ಚಿನ ಹೊಳಪು ಪಡೆಯಲಾರವು. ಅದೇ ಹುಣಸೆ ಹಣ್ಣಿಗೆ ಸ್ವಲ್ಪ ಉಪ್ಪು$ಹಾಕಿ ಪಾತ್ರೆಗಳನ್ನು ಉಜ್ಜಿದರೆ ಪಾತ್ರೆಗಳು ಪಳಪಳ ಹೊಳೆಯುತ್ತವೆ.

ನಿಂಬೆಹಣ್ಣು ಮತ್ತು ಉಪ್ಪು
ಸ್ವಲ್ಪ ಉಪ್ಪು ಮತ್ತು ನಿಂಬೆಹಣ್ಣು ತಗೊಂಡು ತಾಮ್ರದ ಪಾತ್ರೆಗಳ ಮೇಲೆ ಮೆದುವಾಗಿ ಉಜ್ಜಿ ತಿಕ್ಕಿ ತೊಳೆದರೆ ಪಾತ್ರೆಗಳು ಸ್ವತ್ಛವಾಗುತ್ತವೆ. ಜಾಸ್ತಿ ಕಪ್ಪಗಾಗಿದ್ದರೆ, ತಳಭಾಗದಲ್ಲಿ ಅಥವಾ ಬದಿಗಳಲ್ಲಿ ಗಟ್ಟಿ ಕಪ್ಪು ಕಲೆಗಳಿದ್ದರೆ ಉಪ್ಪು-ನಿಂಬೆಯ ಪೇಸ್ಟ್‌ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಮೊದಲಿನಂತೆ ಪಾತ್ರೆಗಳು ಹೊಳೆಯುತ್ತವೆ.

ವಿನೆಗರ್‌
ವಿನೆಗರನ್ನು ತಗೆದುಕೊಂಡು ಅದನ್ನು ಉಪ್ಪಿನ ಜೊತೆ ಸೇರಿಸಿ ತಾಮ್ರದ ಪಾತ್ರೆಗಳಿಗೆ ಹಚ್ಚಿ ಒಂದು ಹತ್ತು ನಿಮಿಷ ಬಿಟ್ಟು ತೊಳೆಯುವುದರಿಂದಲೂ ಪಾತ್ರೆಗಳು ಫ‌ಳಫ‌ಳ ಹೊಳೆಯುತ್ತವೆ.

ಬೇಕಿಂಗ್‌ ಸೋಡಾ
ತಾಮ್ರದ ಪಾತ್ರೆಯನ್ನು ತೊಳೆಯಲು ಬೇಕಿಂಗ್‌ ಸೋಡಾ ಉಪಯೋಗಿಸುವುದು ಒಂದು ಉತ್ತಮ ವಿಧಾನ. ಬೇಕಿಂಗ್‌ ಸೋಡಾವನ್ನು ನಿಂಬೆ ರಸದೊಂದಿಗೆ ಮಿಕÕ… ಮಾಡಬಹುದು, ಅಥವಾ ಹಾಗೆಯೇ ಉಪಯೋಗಿಸಲೂಬಹುದು.

ವಿನಿಗರ್‌ ಮತ್ತು ಮೈದಾ ಹಿಟ್ಟು
ಒಂದು ಕಪ್‌ ವಿನಿಗರ್‌ಗೆ ಒಂದು ಟೇಬಲ್‌ ಸ್ಪೂನ್‌ ಉಪ್ಪು, ಸ್ವಲ್ಪಮೈದಾಹಿಟ್ಟನ್ನು ಸೇರಿಸಿ ಪೇÓr… ಮಾಡಿಕೊಂಡು ತಾಮ್ರದ ಪಾತ್ರೆಯ ಕಲೆಯಾಗಿರುವ ಭಾಗಕ್ಕೆ ಹಚ್ಚಿ 15 ನಿಮಿಷ ಹಾಗೇ ಬಿಟ್ಟು ಬಿಸಿ ನೀರಿನಿಂದ ತೊಳೆದರೆ ಪಾತ್ರೆಯು ಹೊಸದರಂತೆ ಕಾಣಿಸುತ್ತದೆ.

– ಎಸ್‌ಎನ್‌

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.