ಮಲೇಶ್ಯನ್ ವಿಮಾನ: 3 ವರ್ಷಗಳ ವಿಫಲ ಶೋಧ ಕಾರ್ಯಾಚರಣೆ ಅಂತ್ಯ
Team Udayavani, Jan 17, 2017, 7:54 PM IST
ಸಿಡ್ನಿ : 2014ರ ಮಾರ್ಚ್ 8ರಂದು ಕೌಲಾಲಂಪುರದಿಂದ ಬೀಜಿಂಗ್ಗೆ ಹೋಗುತ್ತಿದ್ದ ವೇಳೆ ಹಿಂದೂ ಮಹಾಸಾಗರದಲ್ಲಿ 239 ಜನರ ಸಾವಿಗೆ ಕಾರಣವಾಗಿ ಪತನಗೊಂಡಿದ್ದ ಮಲೇಶ್ಯನ್ ಏರ್ಲೈನ್ಸ್ ವಿಮಾನ ಎಂಎಚ್ 370 ಇದರ ವ್ಯರ್ಥ ಹಾಗೂ ವಿಫಲ ಶೋಧ ಕಾರ್ಯವನ್ನು ಸರಿಸುಮಾರು ಮೂರು ವರ್ಷಗಳ ಬಳಿಕ ಇದೀಗ ಕೊನೆಗೊಳಿಸಲಾಗಿದೆ.
ಮಲೇಶ್ಯ ಏರ್ಲೈನ್ಸ್ ಈ ನತದೃಷ್ಟ ಬೋಯಿಂಗ್ 777 ವಿಮಾನದ ಶೋಧ ಕಾರ್ಯಾಚರಣೆಗಾಗಿ 16 ಕೋಟಿ ಡಾಲರ್ ನೆರವು ನೀಡಿದ್ದ ಆಸ್ಟ್ರೇಲಿಯದ ಜಂಟಿ ಸಹಕಾರ ಕೇಂದ್ರ ಸಂಸ್ಥೆಯು, ವಿಮಾನದ ಶೋಧ ಕಾರ್ಯಾಚರಣೆಯನ್ನು ಕೊನೆಗೊಳಿಸಿರುವ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ.
ಹಿಂದೂ ಮಹಾಸಾಗರದ ಆಳ ಸಮುದ್ರದಲ್ಲಿ ಹಾಗೂ ಪಶ್ಚಿಮ ಆಸ್ಟ್ರೇಲಿಯದ ದುರ್ಗಮ ಸಾಗರ ತಳದಲ್ಲಿನ ಸುಮಾರು 12,000 ಚದರ ಕಿ.ಮೀ. ಸಾಗರ ವಲಯದಲ್ಲಿ ಮಲೇಶ್ಯನ್ ವಿಮಾನಕ್ಕಾಗಿ ಕಳೆದ ಮೂರು ವರ್ಷಗಳಿಂದ ಹರಸಾಹಸ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ನಾಪತ್ತೆಯಾಗಿದ್ದ ವಿಮಾನದ ಯಾವುದೇ ಕುರುಹು ಕೂಡ ಈ ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕಿಲ್ಲದಿರುವುದು ಅತ್ಯಂತ ನಿಗೂಢವಾಗಿದೆ.
ವಿಫಲ ಹಾಗೂ ವ್ಯರ್ಥ ಶೋಧ ಕಾರ್ಯವನ್ನು ಕೊನೆಗೊಳಿಸಿರುವ ಬಗ್ಗೆ ಮಲೇಶ್ಯ, ಆಸ್ಟ್ರೇಲಿಯ ಮತ್ತು ಚೀನದ ಸಾರಿಗೆ ಸಚಿವರು ಜಂಟಿ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ