ಕಾಲೇಜು ಕ್ಯಾಂಟೀನ್‌


Team Udayavani, Feb 24, 2017, 3:50 AM IST

23-YUVA-2.jpg

ಕಾಲೇಜು ದಿನಗಳಲ್ಲಿ ಹಲವಾರು ತರಗತಿಗಳು. ಆದರೆ, ಎಲ್ಲರಿಗೂ ಎಲ್ಲವೂ ಹಿಡಿಸದು, ಹಿಡಿಸಬೇಕೆಂದೂ ಇಲ್ಲ. ಕ್ಲಾಸಿಗಿಂತ ಫ್ರೀಟೈಮ್‌ಗೆ ಕಾಯೋರೇ ಜಾಸ್ತಿ. ಫ್ರೀ ಏನಾದರೂ ಸಿಕ್ಕಿದರೆ ಹೆಚ್ಚಾಗಿ ಕ್ಯಾಂಟೀನ್‌ ಕಡೆ ನಡೆಯುವುದಿದೆ ಇಲ್ಲವೇ ಶುರುವಾಯಿತು ನೋಡಿ ಮಾತಿನ ಮಳೆ. ಸ್ನೇಹಿತರೆಲ್ಲರೂ ಒಟ್ಟಾಗಿಯೇ ಬಿಟ್ಟರು. ಟಾಪಿಕ್‌ ಏನೂ ಬೇಕಾಗಿಲ್ಲ, ಆದರೂ ಒಂದು ಮೂಲೆಯಿಂದ ಪ್ರಾರಂಭವಾದ ಮಾತು ಮುಗಿಯುವುದು ಇನ್ನೊಂದು ಮೂಲೆಯಲ್ಲಿ. ಸಮಯ ಕಡಿಮೆಯಾದರೂ ಬಂದು ಹೋಗುವ ವಿಷಯಗಳ ಸರಮಾಲೆ ದೊಡ್ಡದು.

ಹುಡುಗಿಯರಾದರೆ ಬೆಳಗಿನ ಉಪಹಾರದಿಂದ ಪ್ರಾರಂಭವಾದರೆ, ಏನಾದರೂ ವಿಶೇಷ ಬಗೆಯಾದರೆ ಅದನ್ನು ಮಾಡುವ ವಿಧಾನದವರೆಗೂ ಬರುತ್ತೇವೆ. ಮಾಡುತ್ತೇವೋ ಇಲ್ಲವೋ ಮುಂದಿನ ಮಾತು. ಉಡುಪಿನ ವಿನ್ಯಾಸಗಳ ಬಗ್ಗೆ ಒಂದಷ್ಟು ವಿವರಣೆ. ಇನ್ನು ಚಲನಚಿತ್ರ, ಧಾರಾವಾಹಿ, ಟಿ. ವಿ. ಕಾರ್ಯಕ್ರಮಗಳ ವಿಷಯ ಬಂದರೆ ಅದರ ಪಾತ್ರಧಾರಿಗಳು, ನಾಯಕ, ನಾಯಕಿಯರ ಚರಿತ್ರೆಯೇ ಬಂದು ಬಿಡುತ್ತದೆ. ಯಾರ¨ªೋ ಜೀವನದ ಮಾತು ಯಾರ¨ªೋ ಬಾಯಲ್ಲಿ ಅನ್ನುತ್ತಾರಲ್ಲ, ಹಾಗೆ- ಇದು ಕೂಡಾ. ಇನ್ನೂ ಸಮಯ ದೊರೆತರೆ ಕಣ್ಣೆದುರು ಹಾದವರ ಬಗ್ಗೆ ಕೆಲವು ಮಾತುಗಳು.

ಹುಡುಗರಾದರೆ ಆಟೋಟ ಗಳ ಮಾತು ಜಾಸ್ತಿ. ಅಲ್ಲದೆ ಹೇರ್‌ಸ್ಟೈಲ್ಸ…, ಡ್ರೆಸ್‌ ಮತ್ತು ಇಲೆಕ್ಟ್ರಾನಿಕ್‌ ಬ್ರಾಂಡ್‌ಗಳ ಬಗ್ಗೆ ಒಂದಷ್ಟು ಮಾತುಗಳು. ಪಕ್ಕದವನಿಗೆ ರೇಗಿಸುವುದೂ ಇದೆ, ಕಿತ್ತಾಡುವುದೂ ಇದೆ. ಮತ್ತೂ ಸಮಯ ಸಿಕ್ಕಿದಲ್ಲಿ ಏನಾದರೂ ಆಟ ಪ್ರಾರಂಭಿಸಿ ಬಿಡುತ್ತಾರೆ.

ನಿಜಹೇಳಬೇಕೆಂದರೆ, ಇವುಗಳಲ್ಲಿ ಬಹುತೇಕ ಉಪಯೋಗಕ್ಕೆ ಬರುವಂತಹದ್ದಲ್ಲ.ಆದರೂ ಏನೋ ಆ ಕ್ಷಣಗಳಲ್ಲಿ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎನ್ನಬಹುದು. ಮನೆ ಮನದ ದುಃಖಗಳೇನಿದ್ದರೂ ಆ ಸಮಯದಲ್ಲಿ ಮಾಯವಾಗಿ ಬಿಡುತ್ತದೆ. ಅದು ಸ್ನೇಹ ಎಂಬ ಬಂಧದ ಮಾಯೆಯೇ ಇರಬಹುದು.

  ಮತ್ತೆ ತರಗತಿ ಪ್ರಾರಂಭವಾಗುವ ಸಮಯ ಬಂದದ್ದು ಗೊತ್ತೇ ಆಗದು. ಅದೇ ಸಮಯವನ್ನು ತರಗತಿಯಲ್ಲಿ ಕಳೆದಾಗ ಯಾವಾಗ ಮುಗಿಯುತ್ತದೆ ಎಂದು ಅನಿಸುವುದೂ ಉಂಟು.ಎಲ್ಲರೂ ಹೀಗೇ ಇರುತ್ತಾರೆಂದೇನಿಲ್ಲ. ಆದರೂ ಕಾಲೇಜಿನ ಫ್ರೀ ಟೈಮ್‌ನ ತಿರುಳು ಬೇರೆ ಯಾವುದೇ ಹಂತದಲ್ಲೂ ಸಿಗಲಾರದು ಎನ್ನಬಹುದು. ಅದಕ್ಕೆ ಇರಬೇಕು ಕಾಲೇಜ್‌ ಲೈಫ್ ಈಸ್‌ ಗೋಲ್ಡನ್‌ ಲೈಫ್ ಅಂತ ಹೇಳಿರೋದು.

ಎಚ್‌. ಶ್ರಾವ್ಯಾ, ಹಿರಿಯಡಕ ಎಂಜಿಎಂ ಕಾಲೇಜ್‌, ಉಡುಪಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.