ಒಂದು ರೈನ್‌ ಕೋಟ್‌ ಕತೆ !


Team Udayavani, Jul 7, 2017, 3:50 AM IST

RAIN-COAT-700.jpg

ಮಳೆಗಾಲ ಬಂದರೆ ಮಾರುಕಟ್ಟೆಯಲ್ಲಿ ಯಾವುದಕೆಲ್ಲ ಬೇಡಿಕೆ ಬಂದುಬಿಡುತ್ತದೆ ಎಂದು ಹೇಳಲು ಆಗುವುದೇ ಇಲ್ಲ. ಊರಿಡೀ ಡಿಸ್ಕೌಂಟ್‌ಗಳ ಸುರಿಮಳೆ, ಅದರದ್ದೇ ಸದ್ದು. ಬಟ್ಟೆ, ಚಪ್ಪಲಿ, ಕೊಡೆ… ಇದೆಲ್ಲಾ ಬದಿಗಿರಲಿ, ಕೊನೆಗೆ ರೈನ್‌ಕೋಟ್‌ಗಳಿಗೂ ಡಿಸ್ಕೌಂಟ್‌ ಭಾಗ್ಯ. ಅದರ ವ್ಯಾಪಾರ ಮತ್ತು ಅದಕ್ಕೆ ಬೇಡಿಕೆ ಏನೂ ಕಮ್ಮಿ ಇರುವುದಿಲ್ಲ. ಅದೂ ಸತ್ಯ. ಮಳೆಗೆ ರೈನ್‌ಕೋಟ್‌ ಇದ್ದರೆ ಅದೇನೋ ತೃಪ್ತಿ, ಸಮಾಧಾನ, ಸೇಫ್ ಅನ್ನೋ ಭಾವನೆ.

ನನಗೆ ಚೆನ್ನಾಗಿ ನೆನಪಿದೆ. ನಾನು ಸಣ್ಣವಳಿರುವಾಗ ಹೆಚ್ಚಾಗಿ ಬಳಸಿದ್ದು ರೈನ್‌ ಕೋಟ್‌ ಅದು ನನಗೆ ಕೊಟ್ಟಷ್ಟು ಖುಶಿ ಇನ್ಯಾವ ವಸ್ತು ಕೂಡ ಕೊಟ್ಟಿರಲಿಲ್ಲ. ಆ ಕೊಡೆ ಹಿಡಿದುಕೊಂಡು ನೆನೆದುಕೊಂಡು ಹೋಗುವುದ್ದಕ್ಕಿಂತ ರೈನ್‌ಕೋಟ್‌ ಧರಿಸಿ ಸುತ್ತಾಡುವುದೇ ಉತ್ತಮ ಅಂತ ಅನಿಸುತ್ತೆ. ಶಾಲೆಯಲ್ಲಿ ಎಲ್ಲರೂ ಬಣ್ಣ ಬಣ್ಣದ ಕೊಡೆಯಲ್ಲಿ ಮಿಂಚಿದರೆ ನಾನಂತೂ  ಬಣ್ಣ ಬಣ್ಣದ ರೈನ್‌ಕೋಟಲ್ಲಿ ಮಿಂಚುತ್ತಿದ್ದೆ.
 
ಅಮ್ಮ ಯಾವಾಗಲೂ ನನಗೊಂದು ಸೈಜ್‌ ದೊಡ್ಡ ರೈನ್‌ ಕೋಟೇ ತೆಗೆದುಕೊಡುತ್ತಿದ್ದರು. ಏಕೆಂದರೆ ಆ ರೈನ್‌ ಕೋಟ್‌ ನನ್ನನ್ನು ಮಾತ್ರವಲ್ಲ, ನನ್ನ ಬ್ಯಾಗನ್ನೂ ಕೂಡ ಮುಚ್ಚಬೇಕಿತ್ತು ಅದಕ್ಕೆ. ಮಳೆ ಎಷ್ಟೇ ಜೋರಾಗಿ ಬರಲಿ ನಾನು ಮಾತ್ರ ಒದ್ದೆಯಾಗುವ ಪ್ರಶ್ನೆಯೇ ಇಲ್ಲ. ಹಾರಿಹೋಗುತ್ತೆ, ಮುರಿದು ಹೋಗುತ್ತೆ ಅನ್ನುವ ಭಯವೂ ಇಲ್ಲದೆ ದಾರಿಯುದ್ದಕ್ಕೂ ರೈನ್‌ಕೋಟ್‌ ಧರಿಸಿ ದಾರಿಯುದ್ದಕ್ಕೂ ಬೀಗುತ್ತ ಹೋಗುತ್ತಿದ್ದೆ. ಕ್ರಮೇಣ ನನ್ನ ಶಾಲೆಯಲ್ಲಿ ರೈನ್‌ಕೋಟ… ಧಾರಿಗಳ  ಸಂಖ್ಯೆ ಹೆಚ್ಚಾಗುತ್ತ ಹೋಯಿತು. ಎಲ್ಲರಿಗೂ ನನಗೆ ಅನಿಸಿದ್ದೇ ಅನಿಸಿತ್ತೋ ಏನೋ. ಮೊದಲೆಲ್ಲ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದೆ. ಆಗ ಅಷ್ಟೇನೂ ಕಷ್ಟ ಅನಿಸುತ್ತಾ ಇರಲಿಲ್ಲ. ಆದರೆ ಯಾವಾಗ ನಾನು ಬಸ್ಸಲ್ಲಿ ಪ್ರಯಾಣ ಶುರು ಮಾಡಿದೆನೋ ಆಗ ಬಂತು ರೈನ್‌ಕೋಟ್‌ಗೆ ಕಷ್ಟಕಾಲ. ಜೋರಾದ ಮಳೆಗೆ ರೈನ್‌ಕೋಟ್‌ ಧರಿಸಿ, ಅದರೊಂದಿಗೆ ಬೆನ್ನಿನ ಮೇಲೆ ದೊಡ್ಡ ಮೂಟೆಯಂಥ ಬ್ಯಾಗ್‌ ಹೊತ್ತು ನಿಂತಾಗ ಆ ರೈನ್‌ಕೋಟ್‌ ಒದ್ದೆ ಎಲ್ಲರಿಗೂ ಕಿರಿಕಿರಿ ಮಾಡುವುದು ಸಹಜ. ಒಂದು ದಿನ ಎರಡು ದಿನ ಹಾಗಂತ ಎಲ್ಲಾ ಎಷ್ಟು ದಿನಾ ಅಂತ ಸಹಿಸಿಯಾರು. ಕೊನೆಗೊಮ್ಮೆ ಕಂಡಕ್ಟರ್‌ ಅಣ್ಣ ಬಿಪಿ ರೈಸ್‌ ಮಾಡಿಕೊಂಡು ಇನ್ನು ಹತ್ತುವಾಗ ರೈನ್‌ಕೋಟ್‌ ಕಳಚಿಟ್ಟು ಬನ್ನಿ. ನಿಮ್ಮ ಬ್ಯಾಗಿಗೆ, ಟಿಫಿನ್‌ಗೆ, ರೈನ್‌ಕೋಟ್‌ಗೆ ಅರ್ಧ ಬಸ್ಸು ಬೇಕು ಅಂತ ಎಗರಾಡಿ ಬಿಟ್ರಾ ನೋಡಿ ಸೀದಾ ಕೊಡೆಗೆ ಶಿಫr…. ಆದರೂ ರೈನ್‌ ಕೋಟ್‌ನಲ್ಲಿ ಸಿಗುತ್ತಿದ್ದ ಬೆಚ್ಚಗಿನ ಅನುಭವ ಯಾವತ್ತೂ ಕೊಡೆಯಲ್ಲಿ ಸಿಗುತ್ತಲೇ ಇರಲ್ಲಿಲ್ಲ. ಮಳೆಯಲ್ಲಿ ಎಷ್ಟೇ ನೆನೆದರೂ ಮನೆಗೆ ತಲುಪಿ ರೈನ್‌ಕೋಟ್‌ ಕಳಚಿದಾಗ ಆಹಾ ಅದೇನೋ ಬೆಚ್ಚಗಿನ ಅನುಭವ. ಬಟ್ಟೆ, ಬ್ಯಾಗೂ ಯಾವುದೂ ಒದ್ದೆಯಾಗಲ್ಲ. ಆದರೆ ಯಾವಾಗ ಕೊಡೆ ಬಳಸಲು ಶುರು ಮಾಡಿದೆನೋ ಅದು ಅದಲು ಬದಲು ಆಗೋಯ್ತು. ಹಾರಿ ಹೋಗುತ್ತಿದ್ದ ಕೊಡೆ (ಕಷ್ಟಪಟ್ಟು ಅದನ್ನು ಉಳಿಸಿಕೊಳ್ಳುತ್ತಿದ್ದೆ), ಮುರಿದು ಹೋದ ಅದರ ಕಡ್ಡಿಗಳು, ಒದ್ದೆಯಾದ ಬಟ್ಟೆ, ಬ್ಯಾಗು, ಬ್ಯಾಗೊಳಗಿನ ಪುಸ್ತಕ, ಪುಸ್ತಕದೊಳಗಿನ ಹಾಳೆ ಎಲ್ಲಾ ಒದ್ದೆ. ಉಫ್… ಸುಸ್ತಾಗಿ ಬಿಡುತ್ತಿತ್ತು. ನನಗೆ ಆಗೆಲ್ಲಾ ರೈನ್‌ಕೋಟ್‌ ನೆನಪಾಗಿ “ಮಿಸ್‌ ಯೂ…’ ಅಂತ ಮನದಲ್ಲೇ ಅಳುತ್ತಾ ಇದ್ದೆ. 

ಹಾಗಂತ ನಾನು ರೈನ್‌ಕೋಟ್‌ ಬಳಸುವುದನ್ನು ಪೂರ್ತಿಯಾಗಿ ಬಿಟ್ಟೆ ಎಂದೇನೂ ಇಲ್ಲ. ಆಗ ಅಪ್ಪ ಎಲ್ಲಿ ಹೋಗೋದಾದ್ರು ಬೈಕಲ್ಲಿ ನನ್ನನ್ನೂ ಕೂರಿಸಿಕೊಂಡು ಹೋಗ್ತಾ ಇದ್ದರು. ಆಗ ಮತ್ತೆ ಅದೇ ರೈನ್‌ ಕೋಟ್‌ ಅನ್ನು ಧರಿಸಿ ಮಳೆಗಾಲದಲ್ಲಿ ಅಪ್ಪನ ಜೊತೆ ಹೋಗುತ್ತ ಇದ್ದ ನೆನಪು. ಅದೆ ಈಗಲೂ ಮುಂದುವರಿದಿದ್ಯೋ ಏನೊ? ಯಾಕೆಂದರೆ ನನಗೆ ಅಪ್ಪ ಹೊಸ ಸ್ಕೂಟರ್‌ ತೆಗೆದುಕೊಟ್ಟಾಗ ಎಪ್ರಿಲ್‌ ಮೇ ತಿಂಗಳು. ಆಗ ಒಂದೆರಡು ತಿಂಗಳು ಆರಾಮವಾಗಿ ಹೋಗುತ್ತ ಇದ್ದೆ. ಮಳೆಗಾಲ ಆರಂಭವಾದಾಗ ನಡೆದುಕೊಂಡು ಹೋಗಲು ಉದಾಸೀನವಾಗಿ ಅಪ್ಪನ ಬಳಿ ಹಠ ಮಾಡಿ ಒಂದು ರೈನ್‌ ಕೋಟ್‌ ತರಿಸಿಕೊಂಡೆ. ಈಗ ಮತ್ತದೇ ರೈನ್‌ಕೋಟ್‌ ಜೊತೆಗೆ ದ್ವಿಚಕ್ರ ಪ್ರಯಾಣ. ನಾನು ಮಾತ್ರವಲ್ಲ ನನ್ನಂತೆ ಎಲ್ಲಾ ದ್ವಿಚಕ್ರ ಪ್ರಯಾಣಿಕರು ಕೂಡ ರೈನ್‌ಕೋಟ್‌ ಅವಲಂಬಿತರೇ. ಮತ್ತೆ ನಾನು ಬಣ್ಣ ಬಣ್ಣದ ರೈನ್‌ಕೋಟ್‌ನಲ್ಲಿ ಮಿಂಚಲು ಶುರು ಮಾಡಿದೆ. ಈಗ ಮತ್ತದೇ ದಿನಗಳು ನೆನಪಿಗೆ ಬರುತ್ತೆ.

ಈಗಂತೂ ರೈನ್‌ಕೋಟ್‌ನ ಪ್ರಭಾವ ಹೇಗಿದೆ ಎಂದರೆ ನಡೆದುಕೊಂಡು ಹೋಗುವವರೂ ರೈನ್‌ಕೋಟ್‌ನಲ್ಲೆ ಹೋಗುತ್ತಾರೆ. ಅಂದು ಯಾಕೋ ಏನೋ ರಸ್ತೆಕಡೆ ಮುಖ ಮಾಡಿದರೆ ಎಲ್ಲೆಲ್ಲೂ ಬಣ್ಣ ಬಣ್ಣದ ಮನುಷ್ಯರು ನಡೆದುಕೊಂಡು ಹೋಗುತ್ತಿಲ್ಲಾರಲ್ಲ ಎಂದುಕೊಂಡರೆ ಅವರೆಲ್ಲಾ ರೈನ್‌ಕೋಟ್‌ಧಾರಿಗಳಾಗಿದ್ದರು. ಈಗಂತೂ ಕೊಡೆಗಿಂತ ರೈನ್‌ಕೋಟೆ ಬೇಡಿಕೆ ಹೆಚ್ಚಾಗಿರುವುದಂತೂ ಸತ್ಯ. ಹಿಂದೆ ನಮ್ಮ ಅಜ್ಜಂದಿರು ತೋಟದ ಕೆಲಸಕ್ಕೆ ಹೋಗುವಾಗ ಬಾಳೆಎಲೆ, ತೆಂಗಿನ ಓಲೆ ಬಳಸಿ ಕೆಲಸ ಮಾಡುತ್ತಾ ಇದ್ದರಂತೆ. ಅದರ ಮಾರ್ಡನ್‌ ಅವತಾರವೇ ಈ ರೈನ್‌ಕೋಟ್‌  ಅಂತ ಅನಿಸಿದ್ದೂ ಇದೆ. 

ಅದೇನೆ ಆಗಲಿ ರೈನ್‌ಕೋಟ್‌ನಲ್ಲಿ ಸಿಗುವ ಅನುಭವನೇ ಬೇರೆ. ಅದು ಒಂಥರ ಸೇಫ್ ಅಲ್ವಾ? ಅದರ ಮಹಿಮೆ ಅಪಾರ. ಏನಂತೀರಾ? ನಿಮ್ಮಲ್ಲೂ ಇರಬಹುದಲ್ಲ ಇಂತ‌ಹ ರೈನ್‌ಕೋಟ್‌ ಕಥೆಗಳು.  ಸಾಧ್ಯವಾದರೆ ನೆನಪಿಸಿಕೊಳ್ಳಿ. 

– ಪಿನಾಕಿನಿ ಪಿ. ಶೆಟ್ಟಿ

ಟಾಪ್ ನ್ಯೂಸ್

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.