ಮೌನವೇಕೆ ಗೆಳತಿ?


Team Udayavani, Sep 15, 2017, 6:40 AM IST

hudugi-aa.jpg

ಇವತ್ತಿಗೆ ಸುಮಾರು ಎರಡು ವರ್ಷವಾಯಿತು, ನಾವಿಬ್ಬರು ಸರಿಯಾಗಿ ಮಾತನಾಡಿ, ಪರಸ್ಪರ ಭೇಟಿಯಾಗಿ. ಯಾಕೆ ಹೀಗಾಯ್ತು? ಐದನೇ ಕ್ಲಾಸ್‌ನಿಂದ ಸೆಕೆಂಡ್‌ ಪಿಯುವರೆಗೂ ಒಟ್ಟಿಗಿದ್ದ ನಾವು ಅದು ಯಾವ ಕಾರಣದಿಂದ ದೂರಾದೆವು? ನಿಜವಾಗಿಯೂ ನನಗೆ ಗೊತ್ತಿಲ್ಲ. 

ನೀನು ಇಂಜಿನಿಯರಿಂಗ್‌ಗೆಂದು ಬೆಂಗಳೂರು ಸೇರಿದ ಮೇಲಂತೂ ನಮ್ಮಿಬ್ಬರ ಮಧ್ಯೆ ಕೇವಲ ನಾಲ್ಕೈದು ಮೆಸೇಜುಗಳು ರವಾನೆಯಾಗಿರಬಹುದು ಅಷ್ಟೇ. ಒಂದೊಮ್ಮೆ ನಾನು ಮೆಸೇಜು ಮಾಡಿದರೂ ನಿನ್ನಿಂದ ಸೂಕ್ತ ಪ್ರತಿಕ್ರಿಯೆ ಇಲ್ಲ. ನಿನ್ನೊಡನೆ ಮಾತನಾಡಬೇಕೆನಿಸಿ ಕರೆ ಮಾಡಿದರೂ ಅದಕ್ಕೂ ಉತ್ತರವಿಲ್ಲ. ನೀವು ಕರೆ ಮಾಡಿರುವ ಚಂದಾದಾರರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಉಲಿಯುವ ಧ್ವನಿಯನ್ನು ಕೇಳಿ ಕೇಳಿ ನಂಗಂತೂ ಸಾಕಾಗಿ ಹೋಗಿದೆ.

ಹೇಳು ಗೆಳತಿ, ಯಾಕೆ ಹೀಗೆ ಮಾಡುತ್ತಿರುವೆ? ನನ್ನಿಂದ ನಿನಗೆ ಏನಾದರೂ ಬೇಸರವಾಗಿದೆಯಾ? ಮತ್ತೆ, ನೀನು ಹೀಗೆ ಕಾರಣವಿಲ್ಲದೆ ಮೌನ ತಾಳಿದರೆ ನಾನು ಏನು ಅಂಥ ಅರ್ಥ ಮಾಡಿಕೊಳ್ಳಲಿ ಹೇಳು. ನಾನು ಉಜಿರೆಗೆ ಬಂದಮೇಲೆ ನಿನ್ನ ನೆನಪು ಬಹಳವಾಗಿ ಕಾಡಿದೆ. ಮೊದಲಿಗಂತೂ ನಾನು ಭೇಟಿಯಾದ ಪ್ರತಿಯೊಬ್ಬರಲ್ಲೂ ನಿನ್ನನ್ನೇ ಹುಡುಕುತಿದ್ದೆ. ಆದರೆ, ಯಾರೂ ನಿನ್ನ ಹಾಗಿಲ್ಲ. ನಿನ್ನ ತರಹ ಯಾರು ಇರಲಿಕ್ಕೂ ಸಾಧ್ಯವಿಲ್ಲ ಬಿಡು. ಹಾಗೆ ಹುಡುಕಿ ನಾನೇ ತಪ್ಪು ಮಾಡಿದೆ. ನಿನ್ನ ಜೊತೆ ಕಳೆದ ಕ್ಷಣಗಳನ್ನು ನಾನು ಮರೆಯಲು ಸಾಧ್ಯವೆ? ನಾನು ಮತ್ತು ನೀನು ಟೀಚರ್‌ ಪಾಠ ಮಾಡ್ತಾ ಇರಬೇಕಾದರೆ ಮಾತನಾಡುತ್ತ ಬೈಸಿಕೊಂಡಿದ್ದು ಅದೆಷ್ಟೋ ಸಲ! 

ಹಾಗೆಯೇ ಐಟಿ ಕ್ವಿಜ್‌ಗೆಂದು ನಿನ್ನೊಂದಿಗೆ ಕಾರವಾರಕ್ಕೆ ಹೋಗಿದ್ದು ಒಂದು  ಅವಿಸ್ಮರಣೀಯ ಅನುಭವ! ನೀನು ನಮ್ಮನೆಯಲ್ಲಿ ಊಟ ಮಾಡಿದ್ದು, ನಾನು ನಿಮ್ಮನೆಗೆ ಬಂದು ನಿಮ್ಮೆಲ್ಲರ ತುಂಬು ಹೃದಯದ ಆತಿಥ್ಯ ಎಲ್ಲವೂ ನಿನ್ನೆ ಮೊನ್ನೆ ನಡೆದಂತೆಯೇ ಭಾಸವಾಗುತ್ತಿದೆ. ನಿನ್ನ ನೆನಪೇ ನನಗೆ ಆಧಾರ ಎಂದು ಹೇಳುವುದೆಲ್ಲವೂ ಫಿಲಿ¾ ಡೈಲಾಗ್‌ಗಳಂತೆ ಕಂಡರೂ, ಪದೇ ಪದೇ ನಿನ್ನ ನೆನಪುಗಳು ನನಗೆ ಕಾಡುವುದಂತೂ ಸುಳ್ಳಲ್ಲ. ಆ ದೇವರಲ್ಲಿ ನನ್ನದೊಂದೇ ಪ್ರಾರ್ಥನೆ, ಅಲ್ಲಾ ವಾರಿಯಾ… ಮೆ ತೊ ಹಾರಿಯಾ… ಟೂಟಿ ಯಾರಿಯಾ… ಮಿಲಾದೇ ಒಯ……

– ಎನ್‌. ಆರ್‌. ಪೂರ್ವಿ
ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.