Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ಬ್ಲಾಗ್ ಮನೋಹರ ಪ್ರಸಾದ್‌
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • Imageಮನೋಹರ ಪ್ರಸಾದ್‌, ಸುದ್ದಿವಿಭಾಗದ ಮುಖ್ಯಸ್ಥರು

    'ಉದಯವಾಣಿ' ದಿನಪತ್ರಿಕೆಯ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥರು. ಮಾನವೀಯ ಮತ್ತು ಸಾಮಾಜಿಕ ಪ್ರಸ್ತುತಿಯ ವರದಿಗಾರಿಕೆಯಿಂದ ಗಮನ ಸೆಳೆದವರು, ಕತೆಗಾರ ಕೂಡಾ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಅವರ 2500ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.

Dec 29, 2011 | Comments 4 | ShareShare
------------------------------------------------------------------------------------
ಹೊಸ ವರುಷಕೆ ಹೊಸ ಹರುಷ ಹೊನಲಾಗಿ ಬರಲಿ


ಕಾವ್ಯ ಬಿಂದು: ಮನೋಹರ ಪ್ರಸಾದ್‌

ಹೊಸ ವರುಷದ ಆಗಮನವೆಂದರೇ ಹಾಗೆ; ಅಪಾರ ನಿರೀಕ್ಷೆಯ ಹೂವು ಅರಳುವ ಹಾಗೆ. ಹೊಸ ವರುಷದ ಹರುಷವೆಂದರೆ ಹಾಗೆ; ಬೆಳದಿಂಗಳ ಕಂಡು ಸಾಗರ ಉಕ್ಕುವ ಹಾಗೆ. ಹೊಸ ವರುಷದ ಕನಸುಗಳೆಂದರೆ ಹಾಗೆ;ಬದುಕಿನ ಹಾದಿಗೆ ನವಿರಿನ ಸ್ಪರ್ಶ ತುಂಬುವ ಹಾಗೆ. ಹೊಸ ವರುಷದ ಸ್ವಾಗತವೆಂದರೆ ಹಾಗೆ; ಕತ್ತಲನು ಕಳೆವ ಸೂರ್ಯ ಉದಯಿಸುವ ಹಾಗೆ. 2012 ರ ನೂತನ ವರ್ಷ ಸರ್ವರಿಗೂ ಸುಖ ಶಾಂತಿ ನೆಮ್ಮದಿಯ ವರ್ಷವಾಗಲೆಂಬ ಶುಭ ಹಾರೈಕೆಗಳೊಂದಿಗೆ.



ಬಂದಿದೆ ಹೊಸ ಸೂರ್ಯೋದಯ
ತಂದಿದೆ ಹೊಸ ಹರುಷೋದಯ
ಇದು ಭುವನದ ಭಾಗ್ಯೋದಯ
ತೆರೆಯಂತೆ ಪುಳಕಿತವೀ ಹೃದಯ

ಆರಂಭವಾಗಿದೆ ಕ್ಷಣಗಣನೆ
ಇಲ್ಲಿಂದ ಪ್ರಪಂಚ ಪರ್ಯಟನೆ
ಸ್ವಾತಂತ್ರ್ಯದ ನವಿರು ಭಾವನೆ
ಹೊಸ ನೋಟಕೆ ಸಂಕೇತ ನೀನೆ

ಹೊಸ ಪಯಣದ ಆರಂಭವಿದು
ನೀಲಾಗಸದ ಅವಕಾಶವಿಹುದು
ಹೊಸ ವರುಷದ ಆರಂಭವಿದು
ಶುಭವಾಗಲೆಂದು ಸಾರುತಿಹುದು

ಜಗವಿದು ಜಾಣ ಚೆಲುವಿನ ತಾಣ
ಕವಿಯ ಮಾತಲ್ಲಿ ರಸದೌತಣ
ಹಾಗೆ ದೂರ ಗುರಿಯತ್ತ ಪಯಣ
ಹೊಸ ವರುಷದ ಅನುಸಂಧಾನ

ಎತ್ತರದಿಂದ ಎತ್ತರಕ್ಕೆ
ಉತ್ತುಂಗದಿಂದ ಉತ್ತುಂಗಕ್ಕೆ
ಔನ್ನತ್ಯದಿಂದ ಔನ್ನತ್ಯಕ್ಕೆ
ಸಾಧ್ಯವಾಗಲಿ ಹೊಸ ವರ್ಷಕ್ಕೆ

ನಿಸರ್ಗದ ಮಡಿಲ ರಮ್ಯತಾಣ
ಕೋಟೆಗಿದು ಶಿಲೆಯ ತೋರಣ
ಕಲೆಯ ಬಲೆಯಂತ ನಿರ್ಮಾಣ
ಹೊಸತನದ ಚಿಂತನೆಗೆ ಆಹ್ವಾನ

ನೆಲಜಲ ಬಾನು ಬಯಲು
ಪ್ರಕೃತಿಯ ಮಮತೆಯ ಮಡಿಲು
ಜತೆಯಾಗಿದೆ ಇಲ್ಲಿ ಕಾವಲು
ಹೊಸ ಸಾಹಸಕೆ ಕಣ್ಗಾವಲು

ಹೊಸ ವರ್ಷಕ್ಕೊಂದು ಇಣುಕು
ಸುಖದಾಯಕವಾಗಲಿ ಬದುಕು
ಹಸಿರ ನಡುವೆ ಹಕ್ಕಿ ಚುರುಕು
ಶುಭವಾಗಲಿ ತಿನ್ನುತ್ತ ಗುಟುಕು

ಚಂದಿರ ಬರೆದ ಚೆಲುವಿನ ಚಿತ್ತಾರ
ಭುವಿಯಾಯಿತು ಬಣ್ಣದ ಸಾಗರ
ಎಲ್ಲೆಲ್ಲೂ ಸುಖದ ಕಂಪನ ಅಪಾರ
ಹೊಸ ವರ್ಷದ ಹರ್ಷ ನಿರಂತರ

ಹೊನಲಾಗಿ ಹರಿಯಲಿ ಹರ್ಷ
ಮೋಡ ಕರಗಿ ಸುರಿಯಲಿ ವರ್ಷ
ಹಸಿರು ನೀಲಿ ಸಮೃದ್ಧಿಯ ಹರ್ಷ
ಸುಖ ಶಾಂತಿ ತರಲಿ ಹೊಸ ವರ್ಷ

ಇದು ಅಲ್ಲ ಬರಿಯ ನೀರ ಹನಿ
ಇದು ಸುರಿವ ಮುತ್ತಿನಾ ಮಣಿ
ಇಂತು ಇಳಿಯಲಿ ಹನಿಯ ಹನಿ
ಹೊಸ ವರುಷಕೆ ಶುಭದ ದನಿ

ಮೊಗ್ಗು ಅರಳುತ ಹೂವಾಗಿ
ಸುರ ಸೌಂದರ್ಯದ ಖನಿಯಾಗಿ 
ಕಂಪ ಬೀರುತಲಿ ಮಾಗಿ
ಹೊಸ ವರುಷಕೆ ನಿಮಗಾಗಿ

(ಚಿತ್ರಬಿಂದು: ಸತೀಶ್‌ ಇರಾ)

  • Other Blogs By ಮನೋಹರ ಪ್ರಸಾದ್‌
    • ಕಡಲ ಒಡಲು- ಬ್ಲಾಗ್‌ನಲ್ಲಿ ಮನೋಹರ ಪ್ರಸಾದ್‌ ಅವರು ಈ ಬಾರಿ ನಾಲ್ಕು ಕವನಗಳನ್ನು ಬರೆದಿದ್ದಾರೆ.
    • ಭರತಖಂಡದ ಬಲುದೊಡ್ಡ ಸಾಮ್ರಾಜ್ಯ. ಪೌದನಪುರ ಅದರ ಕೇಂದ್ರ. ಆದಿನಾಥನಿಗೆ ಯಶಸ್ವಿನಿ ಎಂಬ ಪತ್ನಿಯಲ್ಲಿ ಭರತನ ಸಹಿತ ನೂರು ಪುತ್ರರು, ಬ್ರಾಹ್ಮಿ ಎಂಬ ಪುತ್ರಿ. ಇನ್ನೋರ್ವ ಪತ್ನಿ ಸುನಂದಾದೇವಿಯಲ್ಲಿ ಜನಿಸಿದ್ದು ಬಾಹುಬಲಿ ಎಂಬ ಪುತ್ರ;
  • POSTED COMMENTS
  • pic

  • Jan 27, 2012
    Author: suneetha.naganand@gmail.com

    wonderful pictures and kavitheya thunuku

  •  
  • pic

  • Jan 04, 2012
    Author: akashsuvaarna77@yahoo.com

    chithra mathu kaavya super happy new year

  •  
  • pic
  • Happy new year
    Jan 02, 2012
    Author: prakash.samaga@gmail.com

    The best short, inspiring poem which is sure to touch the heart and inspire to open to our deeper potential. Once again thank you sir, and happy new year sir

  •  
  • pic
  • Mahonarannas Beauty
    Dec 30, 2011
    Author: vishookiran@gmail.com

    The pen has just said prosperous New Year,these Pharases are very encouraging and are very Possitive ಎತ್ತರದಿಂದ ಎತ್ತರಕ್ಕೆ ಉತ್ತುಂಗದಿಂದ ಉತ್ತುಂಗಕ್ಕೆ ಔನ್ನತ್ಯದಿಂದ ಔನ್ನತ್ಯಕ್ಕೆ ಸಾಧ್ಯವಾಗಲಿ ಹೊಸ ವರ್ಷಕ್ಕೆ Just Beautiful nothing else. Happy new year to one and all

  • Blog Archive
Keywords:   
From:
To:
  • POST YOUR COMMENTS
  • Name *
  •  
  • Subject
  • Email ID *
  •  
  • Comment *
  • Comments are moderated and will not be posted if found irrelevant or offensive.
image
  • Copyright @ 2009-2010 Udayavani.All rights reserved.
  • Designed & Hosted By 4cplus