ಅಡೂರು: ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ವ್ಯಾಪಕವಾಗಿ ಕೃಷಿ ನಾಶಗೊಳಿಸಿದ ಘಟನೆ ಪಾಂಡಿಯಲ್ಲಿ ನಡೆದಿದೆ.ಪಾಂಡಿ ಹೊಸಮನೆ ನಿವಾಸಿ ದೇವಪ್ಪ ನಾಯ್ಕ ಅವರ ಕೃಷಿ ತೋಟಕ್ಕೆ ಫೆ.21 ರಂದು ರಾತ್ರಿ ನುಗ್ಗಿದ ತಂಡವೊಂದು ವಿವಿಧ ತಳಿಯ 200 ಬಾಳೆ, 10 ಕರಿಮೆಣಸಿನ ಬಳ್ಳಿ ಮುಂತಾದವುಗಳನ್ನು ಕೊಚ್ಚಿ ಹಾಕಿದೆ. ಈ ಬಗ್ಗೆ ದೇವಪ್ಪ ನಾಯ್ಕ ಅವರು ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ.