Thursday, May 23, 2013
Last Updated: 5:22:14 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ಬ್ಲಾಗ್ ಮನೋಹರ ಪ್ರಸಾದ್‌
  • ಉದಯವಾಣಿ
  • ವೆ ಬ್
  • ಹುಡುಕಿ
image
  • ಮುಖ್ಯಾಂಶಗಳು:   
  • Imageಮನೋಹರ ಪ್ರಸಾದ್‌, ಸುದ್ದಿವಿಭಾಗದ ಮುಖ್ಯಸ್ಥರು

    'ಉದಯವಾಣಿ' ದಿನಪತ್ರಿಕೆಯ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥರು. ಮಾನವೀಯ ಮತ್ತು ಸಾಮಾಜಿಕ ಪ್ರಸ್ತುತಿಯ ವರದಿಗಾರಿಕೆಯಿಂದ ಗಮನ ಸೆಳೆದವರು, ಕತೆಗಾರ ಕೂಡಾ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಅವರ 2500ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.

Jun 27, 2012 | Comments 6 | ShareShare
------------------------------------------------------------------------------------
ಕರಾವಳಿ: ರಕ್ತಸಿಕ್ತ ದುರ್ಘ‌ಟನೆಗಳ ಸರಣಿ


ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ (ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ) ಕಳೆದ ಒಂದು ವಾರದಿಂದ ಅನೇಕಾನೇಕ ಅನಪೇಕ್ಷಿತ ಘಟನೆಗಳು ಸಂಭವಿಸುತ್ತಿವೆ. ಬಹುತೇಕ ಘಟನೆಗಳು ಕೊಲೆ, ಸುಲಿಗೆ, ಹಲ್ಲೆ, ದರೋಡೆ, ಆತ್ಮಹತ್ಯೆ, ನಾಪತ್ತೆ ಇತ್ಯಾದಿ ಕ್ರಿಮಿನಲ್‌ ಘಟನೆಗಳೇ ಆಗಿರುವುದು ಅತ್ಯಂತ ಆತಂಕಕಾರೀ ಸಂಗತಿಯಾಗಿದೆ.
ನಿರ್ದಿಷ್ಟ ಪ್ರಸಂಗಗಳ ವಿವರಣೆ ಈ ವಿಶ್ಲೇಷಣೆಯ ಆಶಯವಲ್ಲ. ಆದರೆ, ಜಿಲ್ಲೆಯ ಇತಿಹಾಸದಲ್ಲೇ ಈ ಸ್ವರೂಪದ ಘಟನಾವಳಿ ಈ ಹಿಂದೆಂದೂ ಸಂಭವಿಸಿಲ್ಲ ಅನ್ನುವುದು ಮೂಲ ಕಾಳಜಿ.


ಮನೆಮಂದಿಯನ್ನೇ ನಿಷ್ಕರುಣಿಯಾಗಿ ಕಗ್ಗೊಲೆ, ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ, ಪತ್ನಿಯನ್ನು ಕೊಲೆಗೈದು ಮಗುವನ್ನು ಜಖಂಗೊಳಿಸಿ ಪರಾರಿ, ಹಫ್ತಾ ವಸೂಲಿಗೆ ಬೆದರಿಕೆ, ಪಾನಮುಕ್ತರಾಗಿ ಸಹವರ್ತಿಯ ಕೊಲೆ, ಮಧ್ಯರಾತ್ರಿಯಲ್ಲಿ  ದೋಣಿ"ವಿಹಾರ'ದ ದುರಂತ, ಜಾಲಿರೈಡ್‌ನ‌ ಅಪಘಾತ, ಗುಂಪುಘರ್ಷಣೆ, ಬ್ಲಾÂಕ್‌ವೆುàಲ್‌, ನಗನಾಣ್ಯ ದರೋಡೆ, ನಗನಗದು ದುಪ್ಪಟ್ಟು ಮಾಡುವ ಆಮಿಷ ಒಡ್ಡಿ ಸೊತ್ತು ಸಹಿತ ಪರಾರಿ.. ಒಂದೇ, ಎರಡೇ.. ಸತತ ದುರ್ಘ‌ಟನೆಗಳ ಸರಣಿ.

ಒಂದು ಪ್ರಸಂಗ ಎಷ್ಟೊಂದು ವಿಪರ್ಯಾಸಕರ ಆಗಿತ್ತೆಂದರೆ, ಕೊಲೆಯಾದ ಮಹಿಳೆ ಎರಡನೆಯ ವಿವಾಹವಾದ ವ್ಯಕ್ತಿಯ ವಿಳಾಸ ಕೂಡಾ ಆ ಕುಟುಂಬಕ್ಕೆ ತಿಳಿದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಆ ವ್ಯಕ್ತಿಯ ಶರೀರವನ್ನು ಕೂಡಾ ಒಯ್ಯುವವರಿಲ್ಲ.

ಏನಿದು ಪರಿಸ್ಥಿತಿ ? ಶಾಂತಿಯುತ ಸಹಬಾಳ್ವೆಗೆ, ಕೌಟುಂಬಿಕ ಚೌಕಟ್ಟಿನ ವಿಶಿಷ್ಠ ಪರಂಪರೆಗೆ ಪ್ರಸಿದ್ಧವಾದ ಕರಾವಳಿ ಜಿಲ್ಲೆಗಳಲ್ಲಿ ಏಕೆ ಈ ರೀತಿಯ ದುರ್ಘ‌ಟನೆಗಳು ಸಂಭವಿಸುತ್ತಿವೆ ? ಮಾನವ ನಿರ್ಮಿತ ಅಪರಾಧಗಳ ಜತೆಯಲ್ಲಿ ಸ್ಫೋಟದಿಂದ ಮರಣದಂತಹ ಆಘಾತಗಳು ಕೂಡಾ ಸಂಭವಿಸುತ್ತಿವೆ. ಜಿಲ್ಲೆ ಈ ಹಿಂದೆಂದೂ ಕಂಡರಿಯದ , ಕೇಳದ ರೀತಿಯ ಪ್ರಸಂಗಗಳು ವರದಿಯಾಗುತ್ತಿವೆ.

ಎಲ್ಲಕ್ಕೂ ಮುಖ್ಯ ಕಾರಣ, ಹಿನ್ನೆಲೆಗಳ ಬಗ್ಗೆ ಅರಿವು ಹೊಂದದಿರುವುದೇ ಆಗಿದೆ. ಓರ್ವ ವ್ಯಕ್ತಿಯ ಹಿನ್ನೆಲೆ ತಿಳಿಯದೇ ಆತನನ್ನು ವಿವಾಹವಾಗುತ್ತಾರೆ; ಆ ರೀತಿಯಲ್ಲಿ ಆ ವ್ಯಕ್ತಿ ಡಜನ್‌ ಸಮೀಪ ವಿವಾಹವಾಗುತ್ತಾನೆ ಅಂದರೆ ಬುದ್ಧಿವಂತರ ಜಿಲ್ಲೆ ಎಂಬ ಈ ಪ್ರದೇಶದಲ್ಲಿ ನಡೆಯುತ್ತಿದೆಯಾದರೂ ಏನು ? ಇಂತಹಾ ಅಸಹಾಯಕತೆ, ಇಂತಹಾ ಸಂದಿಗ್ಧ, ಇಂತಹಾ ಪರಿಸ್ಥಿತಿ ಈ ಪ್ರದೇಶಕ್ಕೆ ಬಂದಿತಾದರೂ ಹೇಗೆ ?

ಮಾಧ್ಯಮಗಳು ಸಾಕಷ್ಟು ಮುನ್ನೆಚ್ಚರಿಕೆ ನೀಡುವ ಕೆಲಸ ಮಾಡುತ್ತಿವೆ. ಆದರೂ, ಚಿನ್ನಾಭರಣಗಳ ದರೋಡೆ ನಡೆಯುತ್ತಿದೆ. ನಡೆದುಕೊಂಡು ಹೋಗುವವರ ಆಭರಣಗಳ ದರೋಡೆಯಾಗುತ್ತಿದೆ. "ನಿಮ್ಮ ಆಭರಣ ಕೊಡಿ. ಇಂತಹದೇ ಆಭರಣ ಮಾಡಿಸಬೇಕಾಗಿದೆ' ಎಂದು ಹೇಳುವವರ ಕೈಗೆ ನಿರಾಯಾಸವಾಗಿ ತಮ್ಮ ಆಭರಣ ಒಪ್ಪಿಸುವವರಿದ್ದಾರೆ. ನಗನಗದು ಮನೆಯಲ್ಲೇ ಇರಿಸಿ, ಮನೆಗೆ ಬೀಗಹಾಕಿ ವಿವಿಧ ಕಾರ್ಯಕ್ರಮಗಳಿಗೆ ತೆರಳುವವರಿದ್ದಾರೆ. ನೀರುಬೇಕು ಎಂದು ಬರುವ ಅಪರಿಚಿತರಿಗೆ ಬಾಗಿಲು ತೆರೆದು ನೀರು ಕೊಟ್ಟು ದರೋಡೆಯ "ನೀರು' ಕುಡಿಯುವ ಸುಶಿಕ್ಷಿತರಿದ್ದಾರೆ. ಅರ್ಧಕ್ರಯಕ್ಕೆ ವಸ್ತು ಎಂದು ಮೋಸ ಹೋಗುವವರಿದ್ದಾರೆ. ಹತ್ತು ರೂಪಾಯಿ ಕೆಳಗೆ ಬಿತ್ತು ಎಂದು ಯಾರೋ ಹೇಳಿದರೆ ಅದನ್ನು ಹೆಕ್ಕಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರಿದ್ದಾರೆ. ಇದೆಲ್ಲವೂ ಈ ಜಿಲ್ಲೆಗಳಲ್ಲಿ ಸತತವಾಗಿ ನಡೆಯುತ್ತಿದೆ. ಜನತೆ ಏಕೆ ಇಷ್ಟೊಂದು ಸುಲಭವಾಗಿ ಮೋಸ ಹೋಗುತ್ತಿದ್ದಾರೆ ? ಇದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ಇನ್ನು, ಮಧ್ಯವರ್ತಿಗಳ ಜಾಲಕ್ಕೆ ಸಿಲುಕಿ ಸಂಕಷ್ಟಕ್ಕೆ ಈಡಾದವರದ್ದು ಪ್ರತ್ಯೇಕ ಅಧ್ಯಾಯವೇ ಆಗಿದೆ.

ರೈಲು ಮುಂತಾದ ಸಂಚಾರ ಸಂದರ್ಭದಲ್ಲಿ ಕೂಡಾ ಬೇರೆಯವರಿಂದ ಅಮಲು ಬರಿಸುವ ಬಿಸ್ಕತ್‌-ಪಾನೀಯ ಸೇವಿಸಿ ತಮ್ಮ ಅಮೂಲ್ಯ ಸಂಪತ್ತನ್ನು ಕಳೆದುಕೊಂಡವರ ಪಟ್ಟಿ ಇನ್ನಷ್ಟು ದೊಡ್ಡದಿದೆ. ಇಂತಹಾ ನಿದರ್ಶನಗಳ ಬಗ್ಗೆ ತಿಳಿದು ಕೂಡಾ "ತಿನ್ನುವ' ಆಮಿಷಕ್ಕೆ ಬಲಿಯಾದವರದ್ದು ದೊಡ್ಡ ಕತೆ.

ಈಗ, ಈ ಬಗ್ಗೆ ಜನಜಾಗೃತಿಯಾಗಬೇಕಿದೆ. ವಿವಿಧ ಸ್ವಯಂಸೇವಾ ಸಂಘಟನೆಗಳು ಈ ನಿಟ್ಟಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿಯ ಅಭಿಯಾನ ನಡೆಸುವುದು ಅಪೇಕ್ಷಣೀಯ. ಸರಕಾರೇತರ ಸಂಘಟನೆಗಳು ಕೂಡಾ ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದಾಗಿದೆ. ವಿವಿಧ ಇಲಾಖೆಗಳು ಕೂಡಾ ತಮ್ಮ ಅಧಿಕೃತ ಕಾರ್ಯಕ್ರಮಗಳ ಜತೆಗೆ ಈ ಜಾಗೃತಿಯ ವಿಚಾರಕ್ಕೂ ಆದ್ಯತೆ ನೀಡಿದರೆ ಇಂತಹಾ ದುರ್ಘ‌ಟನೆಗಳಿಂದ ಕರಾವಳಿ ಜಿಲ್ಲೆಗಳ ಜನತೆ ಪಾರಾಗಲು ಸಾಧ್ಯವಿದೆ. ಪೊಲೀಸರು ಈ ನಿಟ್ಟಿನಲ್ಲಿ ನಿರ್ಣಾಯಕ ಹೊಣೆಗಾರಿಕೆ ವಹಿಸುವುದು ಅಪೇಕ್ಷಣೀಯವಾಗಿದೆ.

ಚಿತ್ರ:  ಸತೀಶ್‌ ಇರಾ

  • Other Blogs By ಮನೋಹರ ಪ್ರಸಾದ್‌
    • ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.
    • ಯಾಣದ ಆಕರ್ಷಣೆ ಎರಡು ಬೃಹತ್‌ ಶಿಲಾರಚನೆಗಳು. ಹೆಸರು: ಭೈರಮೇಶ್ವರ ಶಿಖರ ಮತ್ತು ಮೋಹಿನಿ ಶಿಖರ. ಈ ಶಿಲೆಗಳು ಕಪ್ಪುವರ್ಣದ ಕ್ರಿಸ್ಟಲೈನ್‌ ಲೈಮ್‌ಸ್ಟೋನ್‌ನಿಂದ ರಚನೆಯಾಗಿವೆ. ಭೈರಮೇಶ್ವರ ಶಿಖರ 390 ಅಡಿ; ಮೋಹಿನಿ ಶಿಖರ 300 ಅಡಿ ಎತ್ತರವಿದೆ.
  • POSTED COMMENTS
  • pic
  • CRIMES IN COASTAL BELT
    Jul 05, 2012
    Author: hkdivakar@yahoo.co.in

    It is shocking !! The alrming rise in crimes is a matter of serious concern. The coastal belt of erstwhile South Kanara has always maintained its "calm and cool" - ness. The way "MP" highlighted this is again a much needed alarm bell for the mass populace !!

  •  
  • pic
  • Crime
    Jul 05, 2012
    Author: sukeshnr@gmail.com

    Olleya baraha,Indu namma sutta mutta nadeyuttiruva Dushkrityagala bagge janaralli jaagruti moddisabekaagide. Haage aparadhigalige kanishta samayadalli katina Shikshe needuvante agabeku, mattu madhyamagala moolaka shikshegala bagge kooda janarannu talupisabeku. Adare inta dushkrutyagalu aagadirali endu aa devaralli prartisona....

  •  
  • pic
  • Crime in South Canara
    Jul 03, 2012
    Author: prakash.samaga@gmail.com

    Undivided DK district known to be the land of intellects , however as the author said more and more crime news taking space in newspapers. Lets pray the almighty for all to well.

  •  
  • pic
  • Janajagrathi Mukya
    Jun 30, 2012
    Author: vishookiran@gmail.com

    Even if awareness is created in the peoples mind...still there are some people who fall prey to wicked practices and become fools. And when it comes to rowdism if 5 or 6 rowdies are encontered then this will automatically come down.Any how people need to be more cautious, ...Good article

  •  
  • pic
  • darode
    Jun 29, 2012
    Author: satishssalian@yahoo.com

    buddivanthara jilleyalli pade pade nadeyuttiruva aparadha prakaranagalige e varadiyindadaru janaru jaagaruka ragali

  •  
  • pic
  • darode, kallathanagalu
    Jun 28, 2012
    Author: naveen100kumar@yahoo.co.in

    dakshina kannadada janaru mugdaru mathu pramanikaru agiruvude idakke karana. mukhyavagi horaginavara bagge echhara vahisa bekagide. dakshina kannadadalli aparichitharondige tuluvinalle mathanadabeku. tulu baradavaragiddare echara vahisuvudu sooktha.

  • Blog Archive
Keywords:   
From:
To:
  • POST YOUR COMMENTS
  • Name *
  •  
  • Subject
  • Email ID *
  •  
  • Comment *
  • Comments are moderated and will not be posted if found irrelevant or offensive.
  • Copyright @ 2009 Udayavani.All rights reserved.
  • Designed & Hosted By 4cplus