Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಪೆತ್ತಕಂಜಿ ನೆನಪಾಪುಜ್ಜಿಯಾ
    • Udayavani | Sep 04, 2010

      ಉಡುಪಿ:ಗೋಹತ್ಯೆ ನಿಷೇಧಿಸುವಂತೆ ಈಗಾಗಲೆ ರಾಜ್ಯ ಸರಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನನ್ನೂ ತರಲು ಸರ್ವಪ್ರಯತ್ನಪಟ್ಟರೂ ಕಾಂಗ್ರೆಸ್ಸಿಗರು ಈ ಕಾನೂನು ಜಾರಿಯಾಗದಂತೆ ವೋಟ್‌ಬ್ಯಾಂಕ್‌ ರಾಜಕಾರಣ ನಡೆಸುತ್ತಿದ್ದಾರೆ. ಅವರಿಗೆ ಇಂದಿನ 'ಹಸ'¤ದ ಬದಲು ಅಂದು ಇದ್ದ 'ಪೆತ್ತಕಂಜಿ' ನೆನಪಾಗುವುದಿಲ್ಲವೇ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ನೇರವಾಗಿ ಪ್ರಶ್ನಿಸಿದರು.

      ಅವರು ಸೆ. 4ರಂದು ಉಡುಪಿಯಲ್ಲಿ ಜರಗಿದ ಗೋರಕ್ಷಣ ವಿಧೇಯಕಕ್ಕೆ ಶೀಘ್ರ ಅಂಗೀಕಾರ ನೀಡುವಂತೆ ಒತ್ತಾಯಿಸಿ ಜರಗಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

      ಬಹುಮತದಿಂದ ಈ ಕಾನೂನನ್ನು ಜಾರಿಗೆ ತಂದರೂ ರಾಜ್ಯಪಾಲರು ಅದಕ್ಕೆ ರಾಷ್ಟ್ರಪತಿಗಳು ಅಂಕಿತಹಾಕದಂತೆ ಪ್ರಯತ್ನಿಸುತ್ತಿರುವುದು ತೀರ ದುರದೃಷ್ಟಕರೆವೆಂದೂ ಅವರು ಹೇಳಿದರು.

      ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ. ಸುಧಾಕರ ಶೆಟ್ಟಿ, ಉಡುಪಿ ನಗರಸಭಾ ಅಧ್ಯಕ್ಷ ಕಿರಣ್‌ಕುಮಾರ್‌, ದ.ಕ. ಹಾಲು ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಬಿಜೆಪಿ ಧುರೀಣ ಸುದರ್ಶನ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.


    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus