ಪಟನಾ: ಹಿಂಸೆಯ ಮಧ್ಯೆಯೇ ರಣವೀರ ಸೇನೆ ಮುಖ್ಯಸ್ಥ ಬ್ರಹ್ಮ್ಹೆಶ್ವರ್ ಸಿಂಗ್ ಮುಖೀಯಾ ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಇಲ್ಲಿ ನೆರವೇರಿತು.ಬಿಹಾರದ ಆರಾದಲ್ಲಿ ಶುಕ್ರವಾರ ಬೆಳಗ್ಗೆ ಬ್ರಹ್ಮ್ಹೆಶ್ವರ್ ಅವರನ್ನು 6 ಅಪರಿಚಿತ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಇದಾದ ನಂತರ ಶುಕ್ರವಾರ ಆರಾದಲ್ಲೇ ಪಾರ್ಥಿವ ಶರೀರವನ್ನು ದರ್ಶನಕ್ಕಿಟ್ಟು ಶನಿವಾರ ಆರಾದಿಂದ ಪಟನಾಗೆ ಶವವನ್ನು 40 ಕಿ.ಮೀ.ನಷ್ಟು ದೂರ ಮೆರವಣಿಗೆಯಲ್ಲಿ ಕರೆತರಲಾಯಿತು.ಈ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡ ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಪಿ. ಠಾಕೂರ್ ಅವರ ಕಾರಿನ ಮೇಲೆ ಬ್ರಹೆ¾àಶ್ವರ ಅವರ ಬೆಂಬಲಿಗರು ಕಲ್ಲು ತೂರಿದ ಪ್ರಸಂಗವೂ ನಡೆಯಿತು. ಇದಲ್ಲದೆ, ಅನೇಕ ಕಡೆಗಳಲ್ಲಿ ರಸ್ತೆ, ತಡೆ, ಕಲ್ಲುತೂರಾಟ ಪ್ರಕರಣಗಳು ನಡೆದಿವೆ. ಭಾರಿ ಪೊಲೀಸ್ ಬಂದೋಬಸ್ತನ್ನು ಬಿಹಾರದಲ್ಲಿ ಈ ದಿನ ಹಮ್ಮಿಕೊಳ್ಳಲಾಗಿತ್ತು.