ಸುಳ್ಯ : ಸುಳ್ಯ ತಾಲೂಕು ಮತ್ತು ಇತರ ಭಾಗಗಳಲ್ಲಿರುವ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವ ತಮಿಳು ಪುರ್ವಸತಿಗಾರರಿಗೆ ಇನ್ನೂ ಜಾತಿ ಸರ್ಟಿಫಿಕೇಟ್ ನೀಡದಿರುವ ಜ್ವಲಂತ ಸಮಸ್ಯೆ ಬಗ್ಗೆ ಕಾರ್ಮಿಕ ಮುಖಂಡ, ಜಿ.ಪಂ.ಮಾಜಿ ಸದಸ್ಯ ಚಂದ್ರಲಿಂಗಂ ಅವರು ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರ ಗಮನ ಸೆಳದು ಮನವಿ ಸಲ್ಲಿಸಿದರು.1990ರ ವರೆಗೆ ನಮಗೆ ಜಾತಿ ಸರ್ಟಿಫಿಕೇಟ್ ಕೊಡಲಾಗುತ್ತಿತ್ತು. ಆನಂತರ ಕೊಡುತ್ತಿಲ್ಲ. ರಾಜ್ಯದ ಇತರೆಡೆಯಲ್ಲಿ ಕೊಡುತ್ತಾರೆ. ದ.ಕ.ದಲ್ಲಿ ಮಾತ್ರಾ ಈ ಸಮಸ್ಯೆ ಇದೆ. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ , ಉದ್ಯೋಗಕ್ಕೆ, ಸರಕಾರಿ ಸವಲತ್ತುಗಳನ್ನು ಪಡೆಯಲು ತೀರಾ ತೊಡಕುಂಟಾಗಿದೆ.ಜಾತಿ ದೃಢೀಕರಣ ಪತ್ರಕ್ಕಾಗಿ ಸುಮಾರು ಎರಡು ದಶಕಕ್ಕಿಂತಲೂ ಹೆಚ್ಚು ಹೋರಾಟ ನಡೆಸುತ್ತಾ ಬಂದಿದ್ದೆವೆ ಎಂದರು.ಕಾಂಗ್ರೆಸ್ ಮುಖಂಡರುಗಳಾದ ಟಿ.ಎಂ.ಶಹೀದ್, ಗೋಕುಲದಾಸ್ ,ಹಲವಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.